SEARCH HERE

Tuesday, 22 June 2021

ಪಿಶಾಚಿ‌ ಜನ್ಮ ಬಾರದಿರಲು ನಮ್ಮ ಕರ್ತವ್ಯ

ಪಿಶಾಚಿಗಳ ಕಿರು ಪರಿಚಯ ಭೂಲೋಕದ ಅತ್ಯಂತ ಹೇಯ ಜನ್ಮ ಅದು ಪಿಶಾಚಿ ಜನ್ಮ ಆ ಜನ್ಮ ಹೇಗೆ ಬರುತ್ತದೆ? ಅನೇಕ ಕಾರಣಗಳಿವೆ, ಪ್ರಸ್ತುತದಲ್ಲಿ ೧. ಸಂಧ್ಯಾವಂದನೆಯನ್ನು ಶ್ರದ್ಧೆಯಿಂದ ಮಾಡದೆ ಇದ್ರೆ ( ಅಸದಿತ್ಯುಚ್ಯತೇ ಪಾರ್ಥ ನಚ ತತ್ಪ್ರೇತ್ಯನೋ ಇಹ - ಗೀತಾ ವಾಕ್ಯ ಸಂವಾದ) ೨. ಅನ್ಯ ದೇವತೆಗಳ ನೈವೇದ್ಯವನ್ನು ಸ್ವೀಕರಿಸಿದರೆ ೩. ಕೇವಲ ದಾನ ತೆಗೆದುಕೊಳ್ಳುವ ಪ್ರವೃತ್ತಿ ಇದ್ದರೆ (ತಾ‌ನೂ ದಾನ ಮಾಡಬೇಕು, ತೆಗೆದುಕೊಂಡದ್ದಕ್ಕೆ ಪ್ರಾಯಶ್ಚಿತ್ತವನ್ನೂ ಮಾಡಿಕೊಳ್ಳಬೇಕು) ಆ ಜನ್ಮ ಯಾಕಷ್ಟು ಹೇಯ? ೧. ವಿಪರೀತ ಹಸಿವು ಬಾಯಾರಿಕೆ ಆದರೆ‌ ಸ್ವಂತವಾಗಿ ತಿನ್ನಲಾಗದು,‌ ಕುಡಿಯಲಾಗದು ೨. ಮತ್ತೊಬ್ಬರ ದೇಹವನ್ನು ಪ್ರವೇಶಿಸಿಯೆ ತಿನ್ನಲು ಕುಡಿಯಲು ಸಾಧ್ಯ ೩. ನೀರು ಅದಕ್ಕೆ ಬೆಂಕಿಯಂತೆ ಕಾಣುವುದು ೪. ಅದರ ಆಹಾರ ಮಾಂಸ‌, ಮಲ, ಮೂತ್ರ ೫. ಸುದೀರ್ಘ ಆಯಸ್ಸು ಪಿಶಾಚಿಗಳ variety ಬ್ರಹ್ಮರಾಕ್ಷಸ, ಕೂಷ್ಮಾಂಡ, ಡಾಕಿನಿ, ಶಾಕಿನಿ... ಪಿಶಾಚಿಗಳ ಲಕ್ಷಣ: ಕಪ್ಪಾದ‌ ಹಲ್ಲು ಉಗುರುಗಳು, ಕರಾಳ‌ ವದನ, ಒಣಗಿದ ತುಟಿ, ನಿಮಿರ ನಿಂತ ತಲೆ ಕೂದಲು, ಕೆಂಪಾದ‌ ಕಣ್ಣು ತಲೆ ಕೆಲಮೊಮ್ಮೆ ‌ಭಜದಲ್ಲಿ, ಮೊಣಕಾಲಿನಲ್ಲಿ ಕೈಯ್ಯಲ್ಲಿ ಮುಖ ಕೆಲವೊಮ್ಮೆ ಹದ್ದಿನ ಮುಖ, ಕತ್ತೆಯ ಮುಖ ವಾಸಸ್ಥಾನ ನಿರ್ಜನ ಪ್ರದೇಶದಲ್ಲಿ ಬೆಳೆದ ಆಲದ ಮರ, ಬೇವಿನ ಮರ, ಹುಣಸೆ ಮರ ಬಿಡುಗಡೆ ಹೇಗೆ ಸಜ್ಜನರ ಸಂಪರ್ಕದಿಂದ, ಗೀತಾದಿ ಶಾಸ್ತ್ರ ಶ್ರವಣದಿಂದ, ತೀರ್ಥ ಪ್ರೋಕ್ಷಣೆಯಿಂದ ಇಂಥಾ‌ ಪಿಶಾಚಿ‌ ಯೋನಿ ಬಾರದಿರಲು ನಮ್ಮ ಕರ್ತವ್ಯ ೧. ಶ್ರದ್ಧೆಯಿಂದ ಸಕಾಲಕ್ಕೆ ತ್ರಿಕಾಲ ಸಂಧ್ಯಾ ೨. ಅನ್ಯ ದೇವತಾ (ರುದ್ರಾದಿ ದೇವತೆಗಳ) ನೈವೇದ್ಯ ಸ್ವೀಕರಿಸದೆ ಇರೋದು ೩. ಏಕಾದಶಿ ವ್ರತ ೪. ಚಾತುರ್ಮಾಸ್ಯ ವ್ರತ ೫. ಯಾವ ಕಾರಣಕ್ಕೂ ಆತ್ಮಹತ್ಯೆಗೆ ಪ್ರಯತ್ನವನ್ನೂ ಮಾಡದಿರುವುದು Note: ನಿರ್ಜನ ಪ್ರದೇಶಕ್ಕೆ ಹೋದಾಗ ಗೀತೆ, ಹರಿಕಥಾಮೃತಸಾರ ಹೇಳುವುದು, ಇದರಿಂದಾಗಿ ನಮಗೆ ಅಭಯ, ಪ್ರಾರಬ್ಧ ಕಳೆದಿದ್ದರೆ ಅವುಗಳಿಗೆ‌ ಬಿಡುಗಡೆ. ಬಿಡುಗಡೆಗೊಳಿಸಿದ ಪುಣ್ಯ ನಮಗೆ. ಸಂಗ್ರಹಿಸಿದವರು  

ಶ್ರೀ ವಿಕ್ರಮ ಆಚಾರ್ಯರು.

*** 

No comments:

Post a Comment