..
ವ್ಯಕ್ತಿಯ ಪ್ರಕೃತಿ ಮತ್ತು ಶಾರೀರಿಕ ಸ್ಥಿತಿಗನುಸಾರ ಯೋಗ್ಯ ಮಗ್ಗುಲಲ್ಲಿ ಮಲಗುವುದರಿಂದ ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭವಾಗಿ ಬೇಗನೇ ಶಾಂತ ನಿದ್ರೆ ತಗಲುವುದು !
ವ್ಯಕ್ತಿಯ ಎಡ ಬದಿಯಲ್ಲಿ ಚಂದ್ರನಾಡಿ, ಬಲ ಬದಿಯಲ್ಲಿ ಸೂರ್ಯನಾಡಿ ಮತ್ತು ಮಧ್ಯ ಭಾಗದಲ್ಲಿ ಸುಷುಮ್ನಾನಾಡಿ ಇರುತ್ತವೆ. ಸೂರ್ಯನಾಡಿ ಕಾರ್ಯನಿರತವಾದಾಗ ಬಲ ಕೈ ಮತ್ತು ಬಲ ಕಾಲಿನ ಚಲನವಲನ ಹೆಚ್ಚು ಪ್ರಮಾಣದಲ್ಲಿ ಆಗುತ್ತದೆ. ಮಲಗಿದಾಗ ಇದರ ವಿರುದ್ಧವಾದ ಪರಿಣಾಮವಾಗುತ್ತದೆ. ನಾವು ಎಡ ಮಗ್ಗುಲಾಗಿ ಮಲಗಿದಾಗ ನಮ್ಮ ಚಂದ್ರನಾಡಿಯ ಚಲನೆ ನಿಲ್ಲುತ್ತದೆ, ಸೂರ್ಯನಾಡಿ ಕಾರ್ಯನಿರತವಾಗುತ್ತದೆ. ನಾವು ಬಲ ಮಗ್ಗುಲಾಗಿ ಮಲಗಿದಾಗ ನಮ್ಮ ಸೂರ್ಯನಾಡಿಯ ಚಲನೆ ನಿಲ್ಲುತ್ತದೆ, ಚಂದ್ರನಾಡಿ ಕಾರ್ಯನಿರತವಾಗುತ್ತದೆ.
ಸ್ವರೋದಯ ಶಾಸ್ತ್ರಕ್ಕನುಸಾರ ಚಂದ್ರನಾಡಿಯಲ್ಲಿ ಅಡತಡೆಯುಂಟಾದರೆ ಸೂರ್ಯನಾಡಿ ಜಾಗೃತವಾಗುತ್ತದೆ, ಸೂರ್ಯನಾಡಿಯಲ್ಲಿ ಅಡತಡೆಯುಂಟಾದರೆ ಚಂದ್ರನಾಡಿ ಜಾಗೃತವಾಗುತ್ತದೆ. ಬಲ ಮಗ್ಗುಲಲ್ಲಿ ಮಲಗಿದಾಗ ಎಡಗಡೆಯ ಚಂದ್ರನಾಡಿ ಕಾರ್ಯನಿರತವಾಗುವುದು ಮತ್ತು ಎಡ ಮಗ್ಗುಲಲ್ಲಿ ಮಲಗಿದಾಗ ಬಲಗಡೆಯ ಸೂರ್ಯನಾಡಿ ಕಾರ್ಯನಿರತವಾದಾಗ ಅದರದ್ದೇ ಅನುಭವದ ಅರಿವಾಗುತ್ತದೆ. ಯಾವುದಾದರೊಂದು ಮಗ್ಗುಲಲ್ಲಿ ಮಲಗಿದಾಗ ಆಗುವ ಪರಿಣಾಮವೇ ಯಾವುದಾದರೊಂದು ಕಿವಿಯಲ್ಲಿ ಹತ್ತಿಯನ್ನಿಟ್ಟುಕೊಂಡಾಗಲೂ ಆಗುತ್ತದೆ. ಬಲಕಿವಿಯಲ್ಲಿ ಹತ್ತಿಯನ್ನಿಟ್ಟುಕೊಂಡು ಕಿವಿ ಮುಚ್ಚಿಕೊಂಡರೆ ಚಂದ್ರನಾಡಿ ಕಾರ್ಯನಿರತವಾಗುತ್ತದೆ ಹಾಗೂ ಎಡಕಿವಿಯಲ್ಲಿ ಹತ್ತಿಯನ್ನಿಟ್ಟುಕೊಂಡು ಕಿವಿ ಮುಚ್ಚಿಕೊಂಡರೆ ಸೂರ್ಯನಾಡಿ ಕಾರ್ಯನಿರತವಾಗುತ್ತದೆ. ನಮ್ಮ ವ್ಯಾವಹಾರಿಕ ಜೀವನದಲ್ಲಿ ಸ್ತ್ರೀಯರು ಮೂಗಿನ ಎಡ ಬದಿಗೆ ಮೂಗುತಿಯನ್ನು ಧರಿಸುತ್ತಾರೆ ಅದೇ ರೀತಿ ಸೊಂಟದ ಎಡಬದಿಗೆ ಕೀಲಿಕೈ ಗೊಂಚಲು ಧರಿಸುತ್ತಾರೆ. ಸೂರ್ಯನಾಡಿಯನ್ನು ಕಾರ್ಯನಿರತಗೊಳಿಸುವುದೇ ಇದರ ಹಿಂದಿನ ಕಾರಣವಾಗಿದೆ. ಅದೇ ರೀತಿ ಧಾರ್ಮಿಕ ವಿಧಿಗಳಲ್ಲಿ ಪಂಚೆ-ಅಂಗವಸ್ತ್ರ ಧರಿಸುವಾಗ ಅಂಗವಸ್ತ್ರವನ್ನು ಎಡ ಹೆಗಲಿನ ಮೇಲೆ ಹಾಕಿಕೊಳ್ಳುತ್ತಾರೆ. ಇದರಿಂದ ಕಾರ್ಯಕ್ಕಾಗಿ ಸೂರ್ಯನಾಡಿ ಕಾರ್ಯನಿರತವಾಗಿರುತ್ತದೆ. ಸಮರ್ಥ ರಾಮದಾಸ ಸ್ವಾಮಿಯವರು ದಂಡವನ್ನು ಉಪಯೋಗಿಸುತ್ತಿದ್ದರು ಹಾಗೂ ಕುಳಿತಾಗ ಅದನ್ನು ಭೂಮಿಯ ಮೇಲೆ ನಿಲ್ಲಿಸಿ ಅದರ ಮೇಲೆ ತನ್ನ ಎಡ ಕೈಯನ್ನಿಡುತ್ತಿದ್ದರು.
– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.
ಶಾಂತ ನಿದ್ರೆಗಾಗಿ ಏನು ಮಾಡಬೇಕು ಎಂದು ತಿಳಿದುಕೊಳ್ಳಲು ಇದನ್ನೂ ಓದಿ !
ವ್ಯಕ್ತಿಯ ಪ್ರಕೃತಿಗನುಸಾರ ಅವರು ಮಲಗುವ ಯೋಗ್ಯ ಪದ್ಧತಿ
ಅ. ವಾತ ಪ್ರಕೃತಿ ಇದ್ದರೆ ಅಂಗಾತ ಮಲಗಬೇಕು
ವಾತ ಪ್ರಕೃತಿಯ ವ್ಯಕ್ತಿಯು ಹೆಚ್ಚಿನ ಸಮಯ ಅಂಗಾತ ಮಲಗಬೇಕು. ಅದರಿಂದ ಅವರ ಸುಷುಮ್ನಾನಾಡಿ ಜಾಗೃತವಾಗಿ ದೇಹದಲ್ಲಿ ಚೈತನ್ಯ ಹರಡುತ್ತದೆ ಹಾಗೂ ವಾಯುರೂಪಿ ವಾತ ಕಡಿಮೆಯಾಗುತ್ತದೆ. ಒಂದು ವೇಳೆ ಅಂಗಾತ ಮಲಗುವುದರಿಂದ ಲಾಭವಾಗದಿದ್ದರೆ, ಎಡ ಅಥವಾ ಬಲ ಮಗ್ಗುಲಿಗೆ ಮಲಗಿ ನೋಡಬೇಕು. ಸೂರ್ಯನಾಡಿಯಿಂದ ಉಷ್ಣ ಸ್ಪಂದನಗಳು, ಚಂದ್ರನಾಡಿಯಿಂದ ತಂಪು ಸ್ಪಂದನಗಳು ಹಾಗೂ ಸುಷುಮ್ನಾನಾಡಿಯಿಂದ ಆಹ್ಲಾದದಾಯಕ ಸ್ಪಂದನಗಳು ದೇಹದಲ್ಲಿ ಹರಡಿ ದೇಹದಲ್ಲಿನ ವಾತಪ್ರಕೋಪವು ಶಾಂತವಾಗುತ್ತದೆ. ಅದರಿಂದ ಶೀಘ್ರ ಹಾಗೂ ಶಾಂತ ನಿದ್ರೆ ತಗಲುತ್ತದೆ. ಯಾವ ಮಗ್ಗುಲಿಗೆ ಮಲಗಿದರೆ ವಾತ ಕಡಿಮೆಯಾಗುತ್ತದೆ, ಎಂಬುದನ್ನು ನಿರೀಕ್ಷಣೆ ಮಾಡಿ ಆ ಮಗ್ಗುಲಲ್ಲಿ ಹೆಚ್ಚು ಸಮಯ ಮಲಗಬೇಕು ಅಥವಾ ಬದಲಾಯಿಸುತ್ತಾ ಪ್ರಯೋಗ ಮಾಡಬೇಕು.
ಆ. ಪಿತ್ತ ಪ್ರಕೃತಿ ಇದ್ದರೆ ಬಲ ಮಗ್ಗುಲಿಗೆ ಮಲಗುವುದು
ಪಿತ್ತ ಪ್ರಕೃತಿ ಇದ್ದರೆ ಬಲ ಮಗ್ಗುಲಿಗೆ ಮಲಗಬೇಕು. ಅದರಿಂದ ಸೂರ್ಯನಾಡಿಯ ಚಲನೆ ನಿಂತು ಚಂದ್ರನಾಡಿಯ ಚಲನೆ ಆರಂಭವಾಗುತ್ತದೆ ಹಾಗೂ ಸಂಪೂರ್ಣ ದೇಹದಲ್ಲಿ ಶೀತಲತೆ ಹರಡುತ್ತದೆ. ಪಿತ್ತ ಹೆಚ್ಚಾದುದರಿಂದ ದೇಹದಲ್ಲಿ ನಿರ್ಮಾಣವಾದ ಉಷ್ಣತೆಯು ಇದರಿಂದ ಕಡಿಮೆಯಾಗುತ್ತದೆ ಹಾಗೂ ಶೀಘ್ರ ಹಾಗೂ ಶಾಂತ ನಿದ್ರೆ ತಗಲುತ್ತದೆ.
ಇ. ಕಫ ಪ್ರಕೃತಿ ಇದ್ದರೆ ಎಡ ಮಗ್ಗುಲಿಗೆ ಮಲಗುವುದು
ಕಫ ಪ್ರಕೃತಿ ಇದ್ದರೆ ಎಡ ಮಗ್ಗುಲಿಗೆ ಮಲಗಬೇಕು. ಅದರಿಂದ ಚಂದ್ರನಾಡಿಯ ಚಲನೆ ನಿಂತು ಸೂರ್ಯನಾಡಿಯ ಚಲನೆ ಆರಂಭವಾಗುತ್ತದೆ ಹಾಗೂ ಸಂಪೂರ್ಣ ದೇಹದಲ್ಲಿ ಉಷ್ಣತೆಯು ಹರಡುತ್ತದೆ. ಇದರಿಂದ ಕಫ ಹೆಚ್ಚಾಗಿ ದೇಹದಲ್ಲಿ ನಿರ್ಮಾಣವಾಗಿರುವ ಶೀತಲತೆಯು ಕಡಿಮೆಯಾಗುತ್ತದೆ ಹಾಗೂ ಶೀಘ್ರ ಹಾಗೂ ಶಾಂತ ನಿದ್ರೆ ಬರುತ್ತದೆ.
ವಿವಿಧ ಪ್ರಕಾರದ ಶಾರೀರಿಕ ತೊಂದರೆ ಆಗುತ್ತಿರುವಾಗ ಮಲಗುವ ಪದ್ಧತಿ
ಅ. ಅಜೀರ್ಣದ ತೊಂದರೆಯಾಗುವುದು
ಆಹಾರ ಜೀರ್ಣವಾಗದಿದ್ದರೆ ಊಟದ ನಂತರ ಸ್ವಲ್ಪ ಹೊತ್ತು ಎಡ ಮಗ್ಗುಲಿಗೆ ಮಲಗಬೇಕು. ಜಠರದ ಹೆಚ್ಚು ಭಾಗ ಎಡಬದಿಯಲ್ಲಿ ಇರುವುದರಿಂದ ಎಡ ಮಗ್ಗುಲಿಗೆ ಮಲಗುವುದರಿಂದ ಜಠರಕ್ಕೆ ಹೆಚ್ಚು ಪ್ರಮಾಣದಲ್ಲಿ ರಕ್ತ ಪೂರೈಕೆಯಾಗಿ ಆಹಾರ ಜೀರ್ಣವಾಗಲು ಸಹಾಯವಾಗುತ್ತದೆ. ಅದೇ ರೀತಿ ಎಡ ಮಗ್ಗುಲಿಗೆ ಮಲಗುವುದರಿಂದ ಚಂದ್ರನಾಡಿಯ ಚಲನೆ ನಿಂತು ಸೂರ್ಯನಾಡಿಯ ಚಲನೆ ಆರಂಭವಾಗುತ್ತದೆ ಹಾಗೂ ಜಠರಾಗ್ನಿ ಚೆನ್ನಾಗಿ ಪ್ರಜ್ವಲಿಸುತ್ತದೆ. ಇದರಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ ಹಾಗೂ ಶೀಘ್ರ ಹಾಗೂ ಶಾಂತ ನಿದ್ರೆ ತಗಲುತ್ತದೆ.
ಆ. ಉಬ್ಬಸದ ತೊಂದರೆ ಇದ್ದರೆ
ಉಬ್ಬಸದ ತೊಂದರೆಯಾಗುತ್ತಿದ್ದರೆ, ಎಡ ಮಗ್ಗುಲಿಗೆ ಮಲಗಬೇಕು. ಇದರಿಂದ ಚಂದ್ರನಾಡಿಯ ಚಲನೆ ನಿಂತು ಸೂರ್ಯನಾಡಿಯ ಚಲನೆ ಆರಂಭವಾಗುತ್ತದೆ ಹಾಗೂ ದೇಹದಲ್ಲಿ ಉಷ್ಣತೆಯು ಹೆಚ್ಚಾಗಿ ಶ್ವಾಸಮಾರ್ಗದಲ್ಲಿನ ಕಫದ ಕಣಗಳು ಕರಗಿ ಉಬ್ಬಸದ ತೊಂದರೆ ಕಡಿಮೆಯಾಗುತ್ತದೆ. ಇದರಿಂದ ಶಾಂತನಿದ್ರೆ ತಗಲುತ್ತದೆ.
ವಿವಿಧ ರೀತಿಯ ತೊಂದರೆಗಳು ಯಾವ ಮಗ್ಗುಲಲ್ಲಿ ಮಲಗಬೇಕು ? ಯಾವ ಮುದ್ರೆ ಮಾಡಬೇಕು ?
೧. ಪ್ರಕೃತಿಗನುಸಾರ
೧ ಅ. ವಾತ ಹೆಚ್ಚಾಗುವುದು ಅಂಗಾತ ಮಲಗುವುದು ತರ್ಜನಿಯ ತುದಿಯನ್ನು ಹೆಬ್ಬೆರಳಿನ ತುದಿಗೆ ತಗಲಿಸುವುದು (ವಾಯುತತ್ತ್ವದ ಮುದ್ರೆ)
೧ ಆ. ಪಿತ್ತ ಹೆಚ್ಚಾಗುವುದು ಬಲ ಮಗ್ಗುಲಿಗೆ ಹೆಬ್ಬೆಟ್ಟಿನ ತುದಿಯನ್ನು ಅನಾಮಿಕದ ಬುಡಕ್ಕೆ ತಗಲಿಸುವುದು (ಆಪತತ್ತ್ವದ ಮುದ್ರೆ)
೧ ಇ. ಕಫ ಹೆಚ್ಚಾಗುವುದು ಎಡ ಮಗ್ಗುಲಿಗೆ ಹೆಬ್ಬೆಟ್ಟಿನ ತುದಿಯನ್ನು ಮಧ್ಯಮದ ಬುಡಕ್ಕೆ ತಗಲಿಸುವುದು (ತೇಜತತ್ತ್ವದ ಮುದ್ರೆ)
೨. ಇತರ ವ್ಯಾಧಿಗಳು
೨ ಅ. ಆಹಾರ ಜೀರ್ಣವಾಗದಿರುವುದು ಎಡ ಮಗ್ಗುಲಿಗೆ ಹೆಬ್ಬೆಟ್ಟಿನ ತುದಿಯನ್ನು ಮಧ್ಯಮದ ಬುಡಕ್ಕೆ ತಗಲಿಸುವುದು (ತೇಜತತ್ತ್ವದ ಮುದ್ರೆ)
೨ ಆ. ಉಚ್ಚ ರಕ್ತದೊತ್ತಡ ಬಲ ಮಗ್ಗುಲಿಗೆ ಹೆಬ್ಬೆಟ್ಟಿನ ತುದಿಯನ್ನು ಅನಾಮಿಕದ ಬುಡಕ್ಕೆ ತಗಲಿಸುವುದು (ಆಪತತ್ವದ ಮುದ್ರೆ)
೨ ಇ. ಕಡಿಮೆ ರಕ್ತದೊತ್ತಡ ಎಡ ಮಗ್ಗುಲಿಗೆ ಹೆಬ್ಬೆಟ್ಟಿನ ತುದಿಯನ್ನು ಮಧ್ಯಮದ ಬುಡಕ್ಕೆ ತಗಲಿಸುವುದು (ತೇಜತತ್ವದ ಮುದ್ರೆ)
೨ ಈ. ಉಬ್ಬಸದ ತೊಂದರೆ ಎಡ ಮಗ್ಗುಲಿಗೆ ಹೆಬ್ಬೆಟ್ಟಿನ ತುದಿಯನ್ನು ಮಧ್ಯಮದ ಬುಡಕ್ಕೆ ತಗಲಿಸುವುದು (ತೇಜತತ್ತ್ವದ ಮುದ್ರೆ)
೩.ಆಧ್ಯಾತ್ಮಿಕ ತೊಂದರೆಯಾಗುವುದು ಎಡ, ಬಲ ಅಥವಾ ಅಂಗಾತ ಮಲಗುವುದು ಯಾವ ತತ್ವದ ಮುದ್ರೆ ಮಾಡುವುದರಿಂದ ತೊಂದರೆ ಕಡಿಮೆಯಾಗುವುದೋ, ಆ ಮುದ್ರೆಯನ್ನು ಹುಡುಕಿತೆಗೆದು ಮಾಡಬೇಕು
– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಪಡೆದ ಜ್ಞಾನ), ಸನಾತನ ಆಶ್ರಮ, ರಾಮನಾಥಿ ಗೋವಾ. (೨೧.೧೧.೨೦೨೧)
***
ಅಂತರ್ಜಾಲದ ಮಾಹಿತಿ ಸರಿಯಾಗಿದ್ದಲ್ಲಿ ಭಾರತೀಯ ನಿದ್ದೆ ಗುಳಿಗೆ ವ್ಯವಹಾರ 16000 ಕೋಟಿಯಷ್ಟಿದೆ.
ಅಂದಾಜಿನ ಪ್ರಕಾರ 70 ಮಿಲಿಯನ ಜನರು ನಿದ್ದೆಗೆ ಸಂಭಂದಿಸಿದ ರೋಗಗಳಿಂದ ಬಳಲುತ್ತಿದ್ದಾರೆ. ಮತ್ತು ನಂತರದ ದಿನಗಳಲ್ಲಿ ಇದರ ದುಷ್ಪರಿಣಾಮ ಬೇರೆ ರೋಗಗಳು ಬರುತ್ತವೆ..
ಇದಕ್ಕೆ ರಸಾಯನಿಕ ಗುಳಿಗೆ ಒಂದು ಪರಿಹಾರವಾದರೆ, ನಿಯಮಿತ ಆರೋಗ್ಯಕರ ಆಹಾರ, ವ್ಯಾಯಾಮ, ಯೋಗ ಇತ್ಯಾದಿ ಒಳ್ಳೆಯದು.
ಇದೆಲ್ಲರ ಬದಲಾಗಿಯೂ ಒಂದು ಒಳ್ಳೆ ಪರಿಹಾರ ಇದ್ದರೆ ಹೇಗೆ.
ಅದುವೆ ಪಂಚಗವ್ಯ ಘೃತ. (ದೇಶಿ ಆಕಳ ಹಾಲು, ಮೊಸರು, ಗೋಮೂತ್ರ, ಸಗಣಿ, ತುಪ್ಪದಿಂದ ಮಾಡಲಾಗಿರುತ್ತದೆ).
ಇದನ್ನು ಮಲಗುವಾಗ ಒಂದೊಂದು ಹನಿ ಎರಡೂ ಮೂಗಿನಲ್ಲಿ ಹಾಕಿಕೊಂಡರೆ ನಿದ್ದೆಯೂ ಚೆನ್ನಾಗಿ ಆಗುತ್ತದೆ. ಇತರೆ ರೋಗಗಳು ಗುಣಮುಖವಾಗುತ್ತವೆ.
ಹಾಗಾಗಿ ಒಂದು ಒಳ್ಳೆ ಸಂದೇಶ ತಮ್ಮ ಪರಿಚಯಸ್ಥ ಅವಶ್ಯಕವಿರುವವರಿಗೆ ತಿಳಿಸಿ.
ಈ ಪಂಚಗವ್ಯ ಘೃತ ಬೇಕಾದಲ್ಲಿ ಸಂಪರ್ಕಿಸಿ ಮಲ್ಲಿನಾಥ ಹೆಮಾಡಿ 9535935622
ಅಥವಾ ತಮ್ಮ ಹತ್ತಿರದ ಗೋಶಾಲೆಗಳಲ್ಲಿಯೂ ಸಿಗಬಹುದು.
ಹೆಚ್ಚಿನ ಮಾಹಿತಿಗಾಗಿ ವಾಟ್ಸಪ ಮಾಡಿ 9535935622.
***
message received in whatsapp
೧. ನನ್ನ ಅಜ್ಜ ೮೭ನೇ ವಯಸ್ಸಿನಲ್ಲಿ ನಿಧನರಾದರು. ಬೆನ್ನು ನೋವು ಇಲ್ಲ, ಕೀಲು ನೋವು ಇಲ್ಲ, ತಲೆನೋವು ಇಲ್ಲ, ಹಲ್ಲು ನಷ್ಟವಿಲ್ಲ ಎಂದು ಶೆಟ್ಟಿ ಮಹಿಳೆ ಬರೆದಿದ್ದಾರೆ. ಅವರು ಒಮ್ಮೆ ಬೆಂಗಳೂರಿನಲ್ಲಿ ವಾಸವಾಗಿದ್ದಾಗ ಒಬ್ಬ ಮುದುಕನಿಂದ ಇದನ್ನು ತಿಳಿದಿದ್ದಾರೆಂದು ಹೇಳಿದರು. ನಾನು ಮಲಗಿದ್ದಾಗ ಕಾಲುಗಳಿಗೆ ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕುವಂತೆ ಸೂಚಿಸಲಾಯಿತು. ಇದು ಚಿಕಿತ್ಸೆ ಮತ್ತು ಫಿಟ್ನೆಸ್ನ ನನ್ನ ಏಕೈಕ ಮೂಲಮಂತ್ರವಾಗಿದೆ.
೨. ನನ್ನ ಕಾಲುಗಳಿಗೆ ತೆಂಗಿನ ಎಣ್ಣೆ ಬಳಸಲು ನನ್ನ ತಾಯಿ ಮನವೊಲಿಸಿದರು ಎಂದು ಮಣಿಪಾಲದ ವಿದ್ಯಾರ್ಥಿಯೊಬ್ಬರು ಹೇಳಿದರು. ಬಾಲ್ಯದಲ್ಲಿ ಅವರ ದೃಷ್ಟಿ ದುರ್ಬಲಗೊಂಡಿತ್ತು ಎಂದು ಹೇಳಿದರು. ಅವಳು ಈ ಪ್ರಕ್ರಿಯೆಯನ್ನು ಮುಂದುವರಿಸುತ್ತಿದ್ದಂತೆ, ನನ್ನ ಕಣ್ಣಿನ ಬೆಳಕು ಕ್ರಮೇಣ ಪೂರ್ಣವಾಯಿತು ಮತ್ತು ಆರೋಗ್ಯಕರವಾಯಿತು.
೩. ಉಡುಪಿಯ ಶ್ರೀ ಕಾಮತ್ ಎಂಬ ಉದ್ಯಮಿ ನಾನು ರಜೆಗಾಗಿ ಕೇರಳಕ್ಕೆ ಹೋಗಿದ್ದೆನು ಎಂದು ಬರೆದಿದ್ದಾರೆ. ನಾನು ಅಲ್ಲಿನ ಹೋಟೆಲ್ನಲ್ಲಿ ಮಲಗಿದ್ದೆ. ನಾನು ನಿದ್ರಿಸಲಾಗಲಿಲ್ಲ. ನಾನು ಹೊರಗೆ ಬಂದು ನಡೆದಾಡಲು ಪ್ರಾರಂಭಿಸಿದೆ. ರಾತ್ರಿಯಲ್ಲಿ ಹೊರಗೆ ಕುಳಿತಿದ್ದ ಹಳೆಯ ಸಿಬ್ಬಂದಿಯೊಬ್ಬರು ನನ್ನನ್ನು ಕೇಳಿದರು,
"ಏನು ವಿಷಯ?"
ನಾನು ಮಲಗಲು(ನಿದ್ರಿಸಲು) ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ!
ಅವನು ಮುಗುಳು ನಕ್ಕು, "ನಿಮ್ಮಲ್ಲಿ ಈಗ ತೆಂಗಿನ ಎಣ್ಣೆ ಇದೆಯೇ?" ಎಂದು ಕೇಳಿದರು.
ನಾನು ಇಲ್ಲ ಎಂದು ಹೇಳಿದಾಗ, ಅವನು ಹೋಗಿ ಸ್ವಲ್ಪ ತೆಂಗಿನ ಎಣ್ಣೆ ತೆಗೆದುಕೊಂಡು "ನಿಮ್ಮ ಪಾದಗಳನ್ನು ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ" ಎಂದು ಹೇಳಿದನು. ಹಾಗೆ ಮಾಡಿದ ನಂತರ ಕಾಮತ್ ಅವರು ಸ್ವಲ್ಪ ಸಮಯದಲ್ಲಿಯೇ ಗೊರಕೆ ಹೊಡೆಯಲು ಪ್ರಾರಂಭಿಸಿದರು. ಈಗ ನಾನು ಸಹಜ ಸ್ಥಿತಿಗೆ ಮರಳಿದ್ದೇನೆ ಎಂದು ಹೇಳಿದರು.
೪. ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆಯನ್ನು ನನ್ನ ಕಾಲುಗಳಿಗೆ ಮಸಾಜ್ ಮಾಡಲು ಪ್ರಯತ್ನಿಸಿದೆ. ಇದು ನನಗೆ ಉತ್ತಮ ನಿದ್ರೆ ಬರುವಂತೆ ಮಾಡುತ್ತದೆ ಮತ್ತು ಆಯಾಸವನ್ನು ನಿವಾರಿಸುತ್ತದೆ.
೫. ನನಗೆ ಹೊಟ್ಟೆ ಸಮಸ್ಯೆಯೂ ಇತ್ತು. ತೆಂಗಿನ ಎಣ್ಣೆಯಿಂದ ನನ್ನ ಪಾದಗಳಿಗೆ ಮಸಾಜ್ ಮಾಡಿದ ನಂತರ, ನನ್ನ ಹೊಟ್ಟೆಯ ಸಮಸ್ಯೆ ೨ ದಿನಗಳಲ್ಲಿ ಗುಣವಾಯಿತು.
೬. ನಿಜವಾಗಿಯೂ! ಈ ಪ್ರಕ್ರಿಯೆಯು ಮಾಂತ್ರಿಕ ಪರಿಣಾಮವನ್ನು ಬೀರುತ್ತದೆ. ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆಯಿಂದ ನನ್ನ ಪಾದಗಳನ್ನು ಮಸಾಜ್ ಮಾಡಿದೆ. ಈ ಪ್ರಕ್ರಿಯೆಯು ನನಗೆ ತುಂಬಾ ವಿಶ್ರಾಂತಿ ಹಾಗೂ ನಿದ್ರೆಯನ್ನು ನೀಡಿತು.
೭. ನಾನು ಕಳೆದ ೧೫ ವರ್ಷಗಳಿಂದ ಈ ಟ್ರಿಕ್ ಮಾಡುತ್ತಿದ್ದೇನೆ. ಇದು ನನಗೆ ತುಂಬಾ ನಿದ್ದೆ ಬರುವಂತೆ ಮಾಡುತ್ತಿದೆ. ನನ್ನ ಚಿಕ್ಕ ಮಕ್ಕಳ ಪಾದಗಳನ್ನೂ ಸಹ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುತ್ತೇನೆ. ಅದು ಅವರನ್ನು ತುಂಬಾ ಸಂತೋಷ ಮತ್ತು ಆರೋಗ್ಯವಾಗಿ ಇರಿಸುತ್ತದೆ.
೮. ನನ್ನ ಕಾಲುಗಳು ನೋಯುತ್ತಿದ್ದವು. ರಾತ್ರಿಯಲ್ಲಿ ಮಲಗುವ ಮೊದಲು ನಾನು ಪ್ರತಿದಿನ ೨ ನಿಮಿಷಗಳ ಕಾಲ ತೆಂಗಿನ ಎಣ್ಣೆಯಿಂದ ನನ್ನ ಪಾದದ ಅಡಿಭಾಗವನ್ನು ಮಸಾಜ್ ಮಾಡಲು ಪ್ರಾರಂಭಿಸಿದೆ. ಈ ವಿಧಾನವು ನನ್ನ ಕಾಲುಗಳಲ್ಲಿನ ನೋವಿಗೆ ಪರಿಹಾರವನ್ನು ನೀಡಿತು.
೯. ನನ್ನ ಕಾಲುಗಳು ಯಾವಾಗಲೂ ಊದಿಕೊಳ್ಳುತ್ತಿದ್ದವು ಮತ್ತು ನಾನು ನಡೆಯುವಾಗ ಬಹಳ ದಣಿದಿರುತ್ತಿದ್ದೆ. ರಾತ್ರಿಯಲ್ಲಿ ನಿದ್ರೆಗೆ ಹೋಗುವ ಮೊದಲು ನನ್ನ ಕಾಲುಗಳಿಗೆ ತೆಂಗಿನ ಎಣ್ಣೆ ಮಸಾಜ್ ಮಾಡುವ ಪ್ರಕ್ರಿಯೆಯನ್ನು ನಾನು ಪ್ರಾರಂಭಿಸಿದೆ. ಕೇವಲ ದಿನಗಳಲ್ಲಿ, ನನ್ನ ಕಾಲುಗಳಲ್ಲಿನ ಊತವು ಕಣ್ಮರೆಯಾಯಿತು.
೧೦. ರಾತ್ರಿಯಲ್ಲಿ, ಮಲಗುವ ಮೊದಲು, ನನ್ನ ಕಾಲುಗಳಿಗೆ ತೆಂಗಿನ ಎಣ್ಣೆ ಮಸಾಜ್ ಮಾಡುವ ವಿಧಾನವನ್ನು ಬಳಸಿದ್ದೇನೆ. ಅದು ನನಗೆ ತುಂಬಾ ಶಾಂತಿಯುತವಾಗಿ ನಿದ್ದೆಗೆ ಹೋಗುವಂತೆ ಮಾಡಿತು.
೧೧. ಇದು ನಿಜವಾಗಿಯೂ ಅದ್ಭುತ ವಿಷಯ. ಹಿತವಾದ ನಿದ್ರೆಗಾಗಿ, ನುಂಗುವ ನಿದ್ದೆಮಾತ್ರೆಗಳಿಗಿಂತ ಈ ವಿಧಾನವು ಬಹಳೇ ಸುರಕ್ಷಿತ ಹಾಗೂ ಉತ್ತಮ ಉಪಾಯವಾಗಿದೆ. ಈಗ ನಾನು ಪ್ರತಿ ರಾತ್ರಿ ತೆಂಗಿನ ಎಣ್ಣೆಯಿಂದ ನನ್ನ ಕಾಲುಗಳಿಗೆ ಹಚ್ಚಿಕೊಂಡು ಉಜ್ಜಿಕೊಂಡು ಮಲಗುತ್ತೇನೆ.
೧೨. ನನ್ನ ಅಜ್ಜನ ಕಾಲಿಗೆ ಉರಿಯುವ ಸಂವೇದನೆ, ಮತ್ತು ತಲೆನೋವೂ ಸಹ ಇತ್ತು. ಅವರು ಕಾಲುಗಳಿಗೆ ತೆಂಗಿನ ಎಣ್ಣೆ ಹಚ್ಚಲು ಪ್ರಾರಂಭಿಸಿದರು ಮತ್ತು ಎಲ್ಲಾ ನೋವು ದೂರವಾಯಿತು.
೧೩. ನನಗೆ ಥೈರಾಯ್ಡ್ ಕಾಯಿಲೆ ಇತ್ತು. ನನ್ನ ಕಾಲು ಸಾರ್ವಕಾಲಿಕ ನೋವುಂಟುಮಾಡುತ್ತದೆ. ಕಳೆದ ವರ್ಷ ಯಾರೋ ಒಬ್ಬ ಮಹನೀಯರು ರಾತ್ರಿ ಮಲಗುವ ಮುನ್ನ ತೆಂಗಿನ ಎಣ್ಣೆಯನ್ನು ಕಾಲುಗಳಿಗೆ ಮಸಾಜ್ ಮಾಡಲು ಸೂಚಿಸಿದ್ದರು. ನಾನು ಅದನ್ನು ಶಾಶ್ವತವಾಗಿ ಮಾಡುತ್ತೇನೆ. ನಾನು ಈಗ ನೋವು ಹಾಗೂ ಥೈರಾಯ್ಡ್ ಸಮಸ್ಯೆಯಿಂದ ಹೊರಗೆ ಬಂದಿದ್ದೇನೆ.
೧೪. ನನ್ನ ಕಾಲುಗಳಿಗೆ ಗುಳ್ಳೆಗಳು ಇದ್ದವು. ರಾತ್ರಿಯಲ್ಲಿ ಮಲಗುವ ಮುನ್ನ ನಾಲ್ಕು ದಿನಗಳ ಕಾಲ ತೆಂಗಿನ ಎಣ್ಣೆಯಿಂದ ನನ್ನ ಪಾದ ಗಳನ್ನು ಮಸಾಜ್ ಮಾಡುತ್ತಿದ್ದೇನೆ. ಅದರಿಂದ ಹೆಚ್ಚಿನ ಪರಿಹಾರ ಕಂಡಿದ್ದೇನೆ.
೧೫. ನನಗೆ ಹನ್ನೆರಡು ಅಥವಾ ಹದಿಮೂರು ವರ್ಷಗಳ ಹಿಂದೆ ಮೂಲವ್ಯಾಧಿ ಇತ್ತು. ನನ್ನ ಸ್ನೇಹಿತ ನನ್ನನ್ನು ೯೦ ವರ್ಷ ವಯಸ್ಸಿನ ಒಬ್ಬ ಋಷಿಯ ಬಳಿಗೆ ಕರೆದೊಯ್ದ. ತೆಂಗಿನ ಎಣ್ಣೆಯನ್ನು ಕೈಗಳ ಮೇಲೆ, ಬೆರಳುಗಳ ನಡುವೆ, ಬೆರಳಿನ ಉಗುರುಗಳ ನಡುವೆ ಮತ್ತು ಉಗುರುಗಳ ಮೇಲೆ ಉಜ್ಜಲು ಅವರು ಸಲಹೆ ನೀಡಿದರು:
ಹೊಕ್ಕುಳಿಗೆ ನಾಲ್ಕರಿಂದ ಐದು ಹನಿ ತೆಂಗಿನ ಎಣ್ಣೆಯನ್ನು ಸೇರಿಸಿ ನಿದ್ರೆಗೆ ಹೋಗಿ ಎಂದರು.
ನಾನು ಅವರ ಸಲಹೆಯನ್ನು ಅನುಸರಿಸಲು ಪ್ರಾರಂಭಿಸಿದೆ. ನನಗೆ ತುಂಬಾ ನೆಮ್ಮದಿ ದೊರಕಿತು. ಈ ಸಲಹೆಯು ನನ್ನ ಮಲಬದ್ಧತೆಯ ಸಮಸ್ಯೆಯನ್ನೂ ಸಹ ಪರಿಹರಿಸಿದೆ. ನನ್ನ ದೇಹವು ಆಯಾಸದಿಂದ ಮುಕ್ತವಾಗಿದೆ ಮತ್ತು ನಾನು ಈಗ ನಿರಾಳವಾಗಿದ್ದೇನೆ. ಹಾಗೂ ಇದು ಗೊರಕೆಯನ್ನೂ ಸಹ ತಡೆಯುತ್ತದೆ.
೧೬. ನನ್ನ ಕಾಲು ಮತ್ತು ಮೊಣಕಾಲುಗಳಲ್ಲಿ ನೋವು ಇತ್ತು. ನನ್ನ ಕಾಲುಗಳಿಗೆ ತೆಂಗಿನ ಎಣ್ಣೆ ಮಸಾಜ್ ಮಾಡುವ ವಿಧಾನವನ್ನು ನಾನು ಆರಂಭ ಮಾಡಿದಾಗಿನಿಂದ, ಅದು ನನಗೆ ಸುಖನಿದ್ರೆ ನೀಡುತ್ತಿದೆ.
೧೭. ರಾತ್ರಿಯಲ್ಲಿ ಮಲಗುವ ಮುನ್ನ ನನ್ನ ಕಾಲುಗಳಿಗೆ ತೆಂಗಿನ ಎಣ್ಣೆ ಮಸಾಜ್ ಮಾಡುವ ಈ ವಿಧಾನವನ್ನು ಪ್ರಾರಂಭಿಸಿದಾಗಿನಿಂದ, ನನ್ನ ಬೆನ್ನು ನೋವು ಕಡಿಮೆಯಾಗಿದೆ ಮತ್ತು ನಾನು ಚೆನ್ನಾಗಿ ನಿದ್ದೆ ಮಾಡುತ್ತಿದ್ದೇನೆ.
ಎಲ್ಲೆಡೆಗೂ, ಎಲ್ಲರಿಗೂ ಇದು ತುಂಬಾ ಸುಲಭವಾದ ವಿಧಾನ.
"ನೀವು ತೆಂಗಿನ ಎಣ್ಣೆಯನ್ನು ಮಾತ್ರ ಬಳಸಬೇಕೆಂದಿಲ್ಲ. ಯಾವುದೇ ಎಣ್ಣೆ ಅಂದರೆ, ಸಾಸಿವೆ, ಆಲಿವ್ ಇತ್ಯಾದಿಗಳನ್ನು ಎರಡೂ ಪಾದಗಳಿಗೆ, ವಿಶೇಷವಾಗಿ ಎಡ ಪಾದವನ್ನು ಮೂರು ನಿಮಿಷಗಳ ಕಾಲ ಮತ್ತು ಬಲ ಪಾದವನ್ನು ಮೂರು ನಿಮಿಷಗಳ ಕಾಲ ಉಜ್ಜುವ ವಿಧಾನವನ್ನು ಅನುಸರಿಸಬಹುದು. ಮಕ್ಕಳಿಗೂ ಸಹ ಅದೇ ರೀತಿ ಮಸಾಜ್ ಮಾಡಿ ನಿಮ್ಮ ಜೀವನದುದ್ದಕ್ಕೂ ಇದನ್ನು ದಿನಚರಿಯನ್ನಾಗಿ ಮಾಡಿಕೊಳ್ಳಿ. "ಪ್ರಕೃತಿಯ ಅದ್ಭುತವನ್ನು, ನಿಮ್ಮ ಪಾದಗಳ ಮಸಾಜ್ ಮೂಲಕ ನೋಡಿ.
ಪ್ರಾಚೀನ ಚೀನೀ ಔಷಧ ಸೂತ್ರದ ಪ್ರಕಾರ, ಪಾದಗಳ ಕೆಳಗೆ ಸುಮಾರು ೧೦೦ ಆಕ್ಯುಪ್ರೆಶರ್ ಪಾಯಿಂಟ್ಗಳಿವೆ. ಮಾನವ ಅಂಗಗಳನ್ನು ಒತ್ತುವ ಮತ್ತು ಮಸಾಜ್ ಮಾಡುವ ಮೂಲಕ ಗುಣಪಡಿಸುವುದು. ರಿಫ್ಲೆಕ್ಸೋಲಜಿ ಎಂದು ಇದನ್ನು ಹೇಳಲಾಗಿದೆ. ಕಾಲು ಮಸಾಜ್ ಚಿಕಿತ್ಸೆಯನ್ನು ವಿಶ್ವಾದ್ಯಂತ ಬಳಸಲಾಗುತ್ತಿದೆ.
***
No comments:
Post a Comment