#ಶ್ರೀಕೃಷ್ಣಾವತಾರದಕೊನೆಯಗಳಿಗೆಗಳು
(ಪ್ರೊ. ಕೆ.ಎಸ್. ನಾರಾಯಣಾಚಾರ್ಯರ “ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು” ಎಂಬ ಕಾದಂಬರಿಯಿಂದ ಆಯ್ದಭಾಗ )
ಉಗ್ರಸೇನ ರಾಜನ ಸಭೆ! 01
ಯಾದವ ಯುವಕರು ಸ್ತಬ್ಧರಾಗಿ ನಿಂತರು! ಹಿಂದೆ ನಿಂತಿದ್ದವರಿಗೆ ಋಷಿ ಏನು ಹೇಳಿದರೆಂಬುದೇ ಕೇಳಿಸಲಿಲ್ಲ. ಗುಸುಗುಸು ಮಾತಿನಲ್ಲಿ ಎಲ್ಲರೂ ಕೇಳಿ ಅರಿತಾದ ಮೇಲೆ ಒಬ್ಬರೂ “ತುಟಿಕ್-ಪಿಟಕ್ ”ಎನ್ನದೇ ಅಲ್ಲೇ ಒಂದೆರಡು ವಿನಾಡಿಯಷ್ಟು ಕಾಲ ನಿಂತರು!
ದುರ್ವಾಸರ ಸುತ್ತ ಇದ್ದ ಋಷಿಗಳು “ಇದೇನು ಮಾಡಿದಿರಿ?” ಎಂಬಂತೆ, ದುರ್ವಾಸರನ್ನು ದುರುಗುಟ್ಟಿಕೊಂಡು ನೋಡಿದರು.
ದುರ್ವಾಸರಿಗೂ ತಾವೇಕೆ ಹಾಗೆ ಆಡಿದರೆಂಬುದೇ ಕ್ಷಣಕಾಲ ತಿಳಿಯಲಿಲ್ಲ! ಜ್ಞಾನದೃಷ್ಟಿಯಿಂದ ಅರಿತಾದ ಮೇಲೆ, ಅದರಲ್ಲಿ ತಮ್ಮದೇನೂ ಯತ್ನವಿಲ್ಲವೆಂದೂ ಅದು ದೈವೇಚ್ಛೆಯೆಂದೂ ತೃಪ್ತಿ ತಂದುಕೊಂಡರೂ, ಆಡಿದ ಮಾತುಗಳಿಗೆ ಇತಿಹಾಸ ತಮನ್ನೇ ಹಳಿಯುತ್ತದೆಂದು ಹಳಹಳಿಸಿಕೊಂಡರು. ಕೋಪವೃದ್ಧಿಯಾದಷ್ಟೂ ತಪಸ್ಸು ಬೆಳೆಯುವುದೆಂಬ ವರ ಪಡೆದ ಈ ಋಷಿಯ ಬಲು ವಿಚಿತ್ರ ಸ್ವಭಾವವನ್ನರಿತಿದ್ದ ಇತರ ಮಹರ್ಷಿಗಳು ತಲೆತಗ್ಗಿಸಿ ಕುಳಿತಿದ್ದರು.
ಸಾಂಬನಿಗೆ ಕೊಂಚ ಪಶ್ಚಾತ್ತಾಪವಾಗಿದ್ದರೂ, ಕ್ಷಮೆ ಕೇಳುವಷ್ಟು ಮಟ್ಟಕ್ಕೆ ಆಗಿರಲಿಲ್ಲ. ಗುಂಪಿನ ಸ್ವಾಭಿಮಾನಕ್ಕೆ ಅವನ ಸ್ವಾಭಿಮಾನವೂ ತಲೆಬಾಗಿಯೇ ಇತ್ತು.
“ತಲೆತಿರುಕನೊಬ್ಬ ಏನೇನೋ ಬೊಗಳಿದರೆ ಹಾಗೇ ಆಗಬೇಕೆಂಬ ನಿಯಮವೇನುಂಟು ?” ಎಂದೊಬ್ಬ ಗುಂಪಿನಲ್ಲಿ ಕೊಂಚಹೊತ್ತಾದ ಮೇಲೆ ತಗ್ಗುಧ್ವನಿಯಲ್ಲಿ ಹೇಳಿದ.
ದುರ್ವಾಸರ ಕಿವಿಗೂ ಅದು ಬಿತ್ತು! ಮತ್ತೆಲ್ಲಿ ಕೋಪ ತಲೆಗೇರುವುದೋ ಎಂದು ಆತಂಕಪಟ್ಟುಕೊಂಡು ವಸಿಷ್ಠರು ಆ ಕಿಡಿಗೇಡಿ ನೃತದೃಷ್ಟ ಯುವಕರಿಗೆ “ಈಗಲಾದರೂ ಸುಮ್ಮನೆ ಹೋಗಿ” ಎಂಬಂತ ಕೈಸನ್ನೆ ಮಾಡಿದರು.
ಕೇಕೆಹಾಕುತ್ತಾ, ಋಷಿಗಳನ್ನು ಅವಹೇಳನ ಮಾಡುವ ಕೂಗುಗಳನ್ನು ಹಾಕುತ್ತಾ ಯುವಕರ ಗುಂಪು ದ್ವಾರಕೆಯತ್ತ ಹೊರಟುಹೋಯಿತು. ಇತ್ತ ಬರುತ್ತಿದ್ದಾಗ ಇದ್ದ ಅವರ ಸೊಕ್ಕು ಈಗ ಮುರಿದಿತ್ತಾದರೂ, ಕಳೆದುಹೋದ ಮನಸ್ಥೈರ್ಯವನ್ನು ಮತ್ತೆ ಎಬ್ಬಿಸಿ ಪ್ರತಿಷ್ಠಿಸಿಕೊಳ್ಳುವ ಅವರ ಆಗಿನ ಯತ್ನದಲ್ಲಿ ಅವರು ಮಾಡುತ್ತಿದ್ದುದೆಲ್ಲ ಶೋಚನೀಯವಾಗಿಯೇ ವಸಿಷ್ಠರಿಗೆ ಕಂಡಿತು. “ಕಾಲಾಯ ತಸ್ಮೈ ನಮ:” ಎಂದುದ್ಗರಿಸಿದರು.
ಋಷಿ ಸಂಘ ಬಹುಹೊತ್ತು ಮೌನವಾಗಿಯೇ ಕುಳಿತಿತ್ತು. ಸೂರ್ಯ ಮೆಲ್ಲ-ಮೆಲ್ಲನೆ ಪಶ್ಚಿಮದತ್ತ ಇಳಿಯಲಾರಂಭಿಸಿದ್ದ. ಋಷಿಗಳು ಅಂದು ಉಪವಾಸ ಮಾಡಲು ನಿಶ್ಚಯಿಸಿದರು. ಶ್ರೀಕೃಷ್ಣನ ಅರಮನೆಗೆ ಆಗಿಂದಾಗಲೇ ಹೋಗುವುದು ಬೇಡವೆಂದೂ, ಯುವಕರಿಂದಲೇ ಮೊದಲು ಸಮಾಚಾರ ದ್ವಾರಕೆಗೆ ತಿಳಿಯಲೆಂದೂ ಅತ್ರಿಗಳು ಸೂಚನೆ ಮಾಡಿದರು.
ದುರ್ವಾಸರು ಪರಿತಪಿಸುತ್ತಾ “ನಾನೆಲ್ಲಾದರೂ ಹಿಮಾಲಯಕ್ಕೆ ಹೀಗೆಯೇ ಹೊರಟುಬಿಡುತ್ತೇನೆ. ನಾನು ಬಂದಲ್ಲೆಲ್ಲ ಅನರ್ಥ ತಪ್ಪದು! ನನಗೆ ಮೃತ್ಯುವೂ ಬರಲಿಲ್ಲ” ಎಂದು ತಮ್ಮನ್ನೇ ಬೈದುಕೊಂಡರು.
ವಿಶ್ವಾಮಿತ್ರರು "ಹಿಂದೆ ವಾಲ್ಮೀಕಿ, ಕ್ರೌಂಚವನ್ನು ಕೊಂದ ಬೇಡನಿಗೆ ಶಾಪವಿತ್ತುದರಲ್ಲಿ ದೈವದ ಕೈವಾಡ ಈಗಲೂ ನಿಮ್ಮ ಶಾಪೋಕ್ತಿಯಲ್ಲೂ ದೈವದ ಪ್ರೇರಣೆ ಇದೆ. ನೀವೇಕೆ ಆತ್ಮನಿಂದನೆ ಮಾಡಿಕೊಳ್ಳುತ್ತೀರಿ?" ಎಂದು ಸಮಾಧಾನ ಪಡಿಸಿದರು.
***
ಉಗ್ರಸೇನ ಮಹಾರಾಜನ ಮನೆಯಲ್ಲಿ ಅಗ್ನಿಹೋತ್ರ ಆರಿಹೋಗಿತ್ತು! ಶ್ರೀಕೃಷ್ಣನ ಅರಮನೆಯಲ್ಲೂ ಹಾಗೇ ಆರಿತ್ತು! ಗಾಳಿಯಿಲ್ಲ, ಮಳೆಯಿಲ್ಲ, ಇದೇನು ಉತ್ಪಾತ! ಎಂದು ಅರಮನೆಯ ಪುರೋಹಿತರು ಚಿಂತಾಕ್ರಾಂತರಾಗಿ ದೊರಗೆ ಹೇಳಿದರು. ಉಗ್ರಸೇನನಿಗೆ ಮೊದಲು ಅದರರ್ಥ ಸರಿಯಾಗಿ ಆಗಲಿಲ್ಲ. ಶ್ರೀಕೃಷ್ಣನ ಪುರೋಹಿತ ಈ ವಿಚಾರ ತಿಳಿಸಲು ಬಂದಾಗ ಭಗವಂತನು ಯೋಗಾಸನದಲ್ಲಿ ಮೌನವಾಗಿ ಕುಳಿತು ಕಣ್ಣು ಮುಚ್ಚಿದ್ದ, ಪ್ರತೀಹಾರಿ(ದ್ವಾರಪಾಲಕ)ಯು ಬ್ರಾಹ್ಮಣನಿಗೆ ಸುಮ್ಮನೆ ಹೊರಟುಹೋಗುವಂತೆ ಸೂಚಿಸಿದ. ನಿರುಪಾಯನಾಗಿ ಪುರೋಹಿತ ಹಿಂದಿರುಗಿದ.
ರುಕ್ಮಿಣೀದೇವಿಯೊಡನೆ ಸಾಮಾನ್ಯವಾಗಿ ಹೆಚ್ಚು ಮಾತಾಡದ ಅವಳ ಪ್ರತಿಸ್ಪರ್ಧಿ ಸತ್ಯಭಾಮಾದೇವಿ, ಗಡಿಬಿಡಿಯಲ್ಲಿ ಆ ಮಧ್ಯಾಹ್ನ ಸಡಗರದಿಂದ ರುಕ್ಮಿಣಿಯ ರಾಣಿನಿವಾಸಕ್ಕೆ ಆಪ್ತ ದಾದಿಯರೊಡನೆ ಪಲ್ಲಕ್ಕಿಯಲ್ಲಿ ಧಾವಿಸಿದಳು. ಮಾಳಿಗೆಯ ಮೇಲಿಂದಲೇ ಇದನ್ನು ಗಮನಿಸಿದ್ದ ರುಕ್ಮಿಣಿ, ತಾನೇ ಮೆಟ್ಟಿಲಿಳಿದು ಬಂದು ಸತ್ಯಭಾಮೆಯನ್ನು ಸ್ವಾಗತಿಸಿ ಒಳಗೆ ಕರೆದೊಯ್ದಳು!
ಪಲ್ಲಂಗದ ಮೇಲೆ ಇಬ್ಬರೂ ಕುಳಿತಾದ ಮೇಲೆ, ರಾಣಿಯರಿಬ್ಬರೂ ಸುತ್ತಲಿನ ಚೀಟಿಯರನ್ನೊಮ್ಮೆ ದಿಟ್ಟಿಸಿ ನೋಡಿದರು! ಚೀಟಿಯರು ಅದನ್ನು ಅರ್ಥಮಾಡಿಕೊಂಡು ನಿಶ್ಯಬ್ದವಾಗಿ ಚೆದುರಿ, ಒಳಕೋಣೆಯ ಕದವನ್ನು ಹೊರಗಿಂದ ಮುಚ್ಚಿ ಅಲ್ಲಿ ಕಾಯುತ್ತಾ ಕುಳಿತರು. ಏನೋ ತುರ್ತು ಸಮಾಚಾರವಿರಬೇಕಂತೂ ಇಲ್ಲವಾದರೆ ಇವರಾರೂ ಹೀಗೆ ಸೇರುತ್ತಿರಲಿಲ್ಲವೆಂದೂ ಚೀಟಿಯರು ಅರ್ಥೈಸಿಕೊಂಡು ಆತಂಕದಿಂದ ಮೌನವಾಗಿದ್ದರು. ಒಳಗೆ ಹೀಗೆ ಮಾತು ನಡೆದಿತ್ತು.
***
ದುರ್ಯೋಧನ ಭೀಮನ ಗದಾದಂಡದ ಹೊಡೆತದಿಂದ ತೊಡೆ ಮುರಿದು ಯುದ್ಧಭೂಮಿಯಲ್ಲಿ ಬಿದ್ದಿದ್ದಾನೆ! ರಾತ್ರಿ ವೇಳೆ ನಾಯಿನರಿಗಳು ಅವನ ಹೆಣಪ್ರಾಯ ಶರೀರವನ್ನು ಬಾಯಿಗಳಿಂದ ಅತ್ತಿತ್ತ ಎಳೆದಾಡಲು ಯತ್ನಿಸಿವೆ. ಅವನ್ನು ಓಡಿಸಲೂ ಅವನಿಗೆ ಶಕ್ತಿಯಿಲ್ಲ! ಇದ್ದ ಸೊಕ್ಕಿನ ಶಕ್ತಿಯೆಲ್ಲ ಎತ್ತ ಹೋಯಿತು ? ಸೋಲಿನ ಅಪಮಾನದಿಂದ ಅವನ ಹೃದಯ ಕುದಿಯುತ್ತಿದೆ. ಸೇಡಿಗೆ ಹಾತೊರೆಯುತ್ತಿದ್ದಾನೆ...
ಆಗ ಬಂದ ಅಶ್ವತ್ಥಾಮ! ದುರ್ಯೋಧನ ತನ್ನ ಅಳಲನ್ನು ಅವನಲ್ಲಿ ತೋಡಿಕೊಂಡ. ಅವನಿಗೆ ಕೌರವ ಸೇನಾಧಿಪತ್ಯ ಪಟ್ಟವನ್ನೂ ಕಟ್ಟಿದ! ಎಂಥ ಹುಚ್ಚು! ದೊರೆಯೇ ಸಾಯುತ್ತಿದ್ದಾನೆ! ಸೈನ್ಯವೇ ಇಲ್ಲ! ಎಲ್ಲ ಸತ್ತಾಯ್ತು! ಸೇನಾಧಿಪತ್ಯವಂತೆ! ಪಾಂಡವರನ್ನು ಕೊಂದು ಅವರ ತಲೆಗಳನ್ನು ತಂದು ತೋರಿಸುವುದಾಗಿ ಹೇಳಿ ಅಶ್ವತ್ಥಾಮ ದುರ್ಯೋಧನನನ್ನು ಸಮಾಧಾನ ಪಡಿಸುತ್ತಾನೆ. ಆಗ ಅಲ್ಲಿ ಕೃಪಾಚಾರ್ಯರೂ, ಯಾದವ ವೀರ ಕೃತವರ್ಮನೂ ಇರುತ್ತಾರೆ!!
ಅದೇ ರಾತ್ರಿ ಅಶ್ವತ್ಥಾಮ ಪಾಂಡವ ಶಿಬಿರವನ್ನು ಹೊಕ್ಕು ಮಲಗಿದ್ದವರನ್ನು ಪಾಂಡವರೆಂದು ಭ್ರಮಿಸಿ ಐವರ ತಲೆಗಳನ್ನು ತುಂಡರಿಸಿದ! ಆದರೆ ಅವು ಉಪವಾಂಡವರ, ದ್ರೌಪದೇಯರ ತಲೆಗಳೆಂಬುದನ್ನು ಅವನು ತಿಳಿಯಲಿಲ್ಲ! ಬಿಸಿ ರಕ್ತ ಸುರಿಯುತ್ತಿದ್ದ ಅವನ್ನು ತೊಟ್ಟಿಕ್ಕುವ ರಕ್ತದ ಹನಿಗಳೊಂದಿಗೇ ಒಯ್ದು ದುರ್ಯೋಧನನಿಗೆ ಅವನು ತೋರಿಸಿದ. ದುರ್ಯೋಧನ ನೆಮ್ಮದಿಯಿಂದ ಸತ್ತ.
ಅಶ್ವತ್ಥಾಮನ ಅಕಾರ್ಯಕ್ಕೆ ಪ್ರೇರಣೆ ಇತ್ತುದು ಒಂದು ಗೂಗೆ! ಎಂಥ 'ದಿವ್ಯ' ಸ್ಫೂರ್ತಿ! ಮಲಗಿದ್ದ ಕಾಗೆಗಳ ಗೂಡಿಗೆ ಹೊಕ್ಕು ಗೂಗೆಯೊಂದು ನಿರ್ದಯವಾಗಿ ಅವನ್ನು ಸಂಹಾರ ಮಾಡಿದ್ದು ಇವನಿಗೆ ವಾಂಡವ ಶಿಬಿರದಲ್ಲಿ ಹಾಗೆ ಮಾಡಲು ಪ್ರೇರಣೆ ಆಯಿತು.
ಉಪದೇಶಃ ಕೃತ್ಯೋನೇನ ಪಕ್ಷಿಣಾ ಮಮ ಸಂಯುಗೇ!
ಎಂದವನೇ ಆ ಗೂಗೆಯನ್ನು ತನ್ನ ಆಚಾರ್ಯನೆಂದು ಈ ನೀಚ ಗ್ರಹಿಸಿದ! ತನ್ನ ನೀಚ ನಿಶ್ಚಯವನ್ನು ಒಡನೆಯೇ ಕೃತವರ್ಮನಿಗೂ ಕೃಪಾಚಾರ್ಯನಿಗೂ ಹೇಳಿದ! ನಿದ್ದೆಗಣ್ಣಿನಲ್ಲೂ ಕೃಪ ಅದನ್ನು ಅಧರ್ಮವೆಂದೂ ಅಕಾರ್ಯವೆಂದೂ ಹೇಳಿ ತಡೆದ. ಆದದ್ದೆಲ್ಲ ದೈವ ಪ್ರೇರಿತವೆಂದೂ, ದೈವವೇ ಕೌರವರನ್ನು ಕೊಂದಿತೆಂದೂ ಹೇಳಿದ. ಮುಂದೇನೆಂಬುದನ್ನು ವಿದುರನನ್ನು ಕೇಳೋಣವೆಂದ ಬ್ರಾಹ್ಮಣನಾಗಿಯೂ ತಾನು ಯುದ್ಧಕ್ಕಿಳಿದುದೇ ತಪ್ಪೆಂದು ಕೃಪ ಒಪ್ಪಿ ತನ್ನ ಹಳಿದುಕೊಂಡ, ಆದರೆ ಮಲಗಿರುವ ಪಂಚಾಲರನ್ನು ನಿದ್ರೆಯಲ್ಲಿ ಕೊಲ್ಲುವದಕ್ಕಿಂತ, ಎಬ್ಬಿಸಿ, ಯುದ್ಧದಲ್ಲಿ ಕೊಲ್ಲುವುದೇ ವಾಸಿ ಎಂದೂ ಹೇಳಿದ.
ಜಡನಾದ ಶೂರನೊಬ್ಬ ಪಂಡಿತನನ್ನೇ ಬಹುಕಾಲ ಆಶ್ರಯಿಸಿದರೂ ಅವನಿಗೂ ಜ್ಞಾನ ಬರುವುದಿಲ್ಲವೆಂದೂ, ಸೌಟನ್ನು ಪಾಯಸದಲ್ಲಿ, ತೊವ್ವೆಯಲ್ಲೂ ಬಹು ಹೊತ್ತು ಇಟ್ಟರೂ ಅದಕ್ಕೆ ಆ ರುಚಿ ತಿಳಿಯದಿರುವುದೇ ಇದಕ್ಕೆ ಉದಾಹರಣೆ ಎಂದೂ, ಪ್ರಾಜ್ಞನಾದವನು ಅದೇ ಪಂಡಿತನಲ್ಲಿ ಒಂದೇ ಮುಹೂರ್ತದಲ್ಲಿ ಧರ್ಮವನ್ನು ಗ್ರಹಿಸುವುದು, ನಾಲಗೆಯು ಬೇಗ ರುಚಿ ತಿಳಿಯುವಂತೆ ಎಂದೂ ಹೇಳಿ, ಅಶ್ವತ್ಥಾಮನಿಗೆ “ನೀನು ಸೌಟಾಗ ಬೇಡ, ನಾಲಗೆಯಾಗು” ಎಂದು ಉಪದೇಶಿಸಿದ. ಮಲಗಿದವರನ್ನು ಕೊಲ್ಲುವುದು ಪಾಪವೆಂದ. ಅಷ್ಟು ದೇವಾಂಶ ಅವನಲ್ಲಿನ್ನೂ ಇತ್ತು.
ಅಶ್ವತ್ಥಾಮ ಕೇಳಲಿಲ್ಲ. ಏನೇನೋ ಹರಟಿದ. ನಿಶ್ಚಯ ಬಿಡಲಿಲ್ಲ. ಕೃತವರ್ಮ ಏನೂ ಹೇಳಲಿಲ್ಲ! ಅಶ್ವತ್ಥಾಮನನ್ನು ತಡೆಯಲೂ ಇಲ್ಲ! ಇವನೋ ಯಾದವ, ಭೋಜ ವೀರ; ಸಾತ್ವತ ಕುಲದವನು; ನಾರಾಯಣ ಸೇನೆಯ ನೇತಾ!
“ನನ್ನ ಸೈನ್ಯವೆಲ್ಲ ಒಂದು ಕಡೆ; ನಾನೊಬ್ಬ ಒಂದು ಕಡೆ” ಎಂದು ಶ್ರೀಕೃಷ್ಣ ಹೇಳಿ “ಯಾವುದು ಬೇಕು?” ಎಂದು ಕೇಳಿದಾಗ, ದುರ್ಯೋಧನ “ನಿನ್ನ ಸೈನ್ಯವೇ ಇರಲಿ” ಎಂದನಲ್ಲ! ಆ ಸೈನ್ಯದ ನಾಯಕಾದ ಕೃತವರ್ಮನಿಗೆ ದುರ್ಯೋಧನತ್ತ ನಿಂತು ಯುದ್ಧ ಮಾಡುವುದರಲ್ಲಿ ಸಂಕೋಚವಾಗಲಿಲ್ಲವೆ?
ಸಾತ್ಯಕಿ ಏಕೆ ಕೃಷ್ಣನತ್ತಲೇ ಉಳಿದ? ನಮಗೇ ತಿಳಿಯುವ ಈ ವ್ಯತ್ಯಾಸ, ಶ್ರೀಕೃಷ್ಣನಿಗೆ ತಿಳಿದಿರಲಾರದೆ ?
“ನೀನು ಬೇಕಾದರೂ ನಿಲ್ಲು” ಎಂದು ಅವನೇನೋ ಹೇಳುತ್ತಾನೆ. ಕೇಳುವವನಿಗೆ ತಿಳಿಯಬಾರದೆ?
ಲೋಕಲೀಲಾ ವಿಹಾರಿಯ ತಂತ್ರ ಅದು! ಸ್ವಾತಂತ್ರ್ಯ ಕೊಟ್ಟು ನಮ್ಮ ನಿಜ ಸ್ವರೂಪವನ್ನು ಬಹಿರಂಗ ಮಾಡುವುದು! ಸ್ವರೂಪಕ್ಕೆ ಸರಿಯಾಗಿ ಸಲಹೆ ಕೊಡುವುದು! ಕೃಪ-ಕೃತವರ್ಮರಲ್ಲಿ ಈ ಭೇದ ಉಳಿಯಿತು. ಮುಂದೆ ತೋರಿಸುವುದಾಗಿ ಹೇಳಿ ಅಶ್ವತ್ಥಾಮ ದುರ್ಯೋಧನನನ್ನು ಸಮಾಧಾನ ಪಡಿಸುತ್ತಾನೆ. ಆಗ ಅಲ್ಲಿ ಕೃಪಾಚಾರ್ಯರೂ, ಯಾದವ ವೀರ ಕೃತವರ್ಮನೂ ಇರುತ್ತಾರೆ!!
ಅದೇ ರಾತ್ರಿ ಅಶ್ವತ್ಥಾಮ ಪಾಂಡವ ಶಿಬಿರವನ್ನು ಹೊಕ್ಕು ಮಲಗಿದ್ದವರನ್ನು ಪಾಂಡವರೆಂದು ಭ್ರಮಿಸಿ ಐವರ ತಲೆಗಳನ್ನು ತುಂಡರಿಸಿದ! ಆದರೆ ಅವು ಉಪವಾಂಡವರ, ದ್ರೌಪದೇಯರ ತಲೆಗಳೆಂಬುದನ್ನು ಅವರು ತಿಳಿಯಲಿಲ್ಲ! ಬಿಸಿ ರಕ್ತ ಸುರಿಯುತ್ತಿದ್ದ ಅವನ್ನು ತೊಟ್ಟಿಕ್ಕುವ ರಕ್ತದ ಹನಿಗಳೊಂದಿಗೇ ಒಯ್ದು ದುರ್ಯೋಧನನಿಗೆ ಅವನು ತೋರಿಸಿದ. ದುರ್ಯೋಧನ ನೆಮ್ಮದಿಯಿಂದ ಸತ್ತ.
ಅಶ್ವತ್ಥಾಮನ ಅಕಾರ್ಯಕ್ಕೆ ಪ್ರೇರಣೆ ಇತ್ತುದು ಒಂದು ಗೂಗೆ! ಎಂಥ 'ದಿವ್ಯ' ಸ್ಫೂರ್ತಿ! ಮಲಗಿದ್ದ ಕಾಗೆಗಳ ಗೂಡಿಗೆ ಹೊಕ್ಕು ಗೂಗೆಯೊಂದು ನಿರ್ದಯವಾಗಿ ಅವನ್ನು ಸಂಹಾರ ಮಾಡಿದ್ದು ಇವನಿಗೆ ವಾಂಡವ ಶಿಬಿರದಲ್ಲಿ ಹಾಗೆ ಮಾಡಲು ಪ್ರೇರಣೆ ಆಯಿತು.
ಉಪದೇಶಃ ಕೃತ್ಯೋನೇನ ಪಕ್ಷಿಣಾ ಮಮ ಸಂಯುಗೇ!
ಎಂದವನೇ ಆ ಗೂಗೆಯನ್ನು ತನ್ನ ಆಚಾರ್ಯನೆಂದು ಈ ನೀಚ ಗ್ರಹಿಸಿದ! ತನ್ನ ನೀಚ ನಿಶ್ಚಯವನ್ನು ಒಡನೆಯೇ ಕೃತವರ್ಮನಿಗೂ ಕೃಪಾಚಾರ್ಯನಿಗೂ ಹೇಳಿದ! ನಿದ್ದೆಗಣ್ಣಿನಲ್ಲೂ ಕೃಪ ಅದನ್ನು ಅಧರ್ಮವೆಂದೂ ಅಕಾರ್ಯವೆಂದೂ ಹೇಳಿ ತಡೆದ. ಆದದ್ದೆಲ್ಲ ದೈವ ಪ್ರೇರಿತವೆಂದೂ, ದೈವವೇ ಕೌರವರನ್ನು ಕೊಂದಿತೆಂದೂ ಹೇಳಿದ. ಮುಂದೇನೆಂಬುದನ್ನು ವಿದುರನನ್ನು ಕೇಳೋಣವೆಂದ ಬ್ರಾಹ್ಮಣವಾಗಿಯೂ ತಾನು ಯುದ್ಧಕ್ಕಿಳಿಯದೇ ತಪ್ಪೆಂದು ಕೃಪ ಒಪ್ಪಿ ತನ್ನ ಹಳೆದುಕೊಂಡ, ಆದರೆ ಮಲಗಿರುವ ಪಂಚಾಲರನ್ನು ನಿದ್ರೆಯಲ್ಲಿ ಕೊಲ್ಲುವದಕ್ಕಿಂತ, ಎಬ್ಬಿಸಿ, ಯುದ್ಧದಲ್ಲಿ ಕೊಲ್ಲುವುದೇ ವಾಸಿ ಎಂದೂ,
ಜಡನಾದ ಶೂರನೊಬ್ಬ ಪಂಡಿತನನ್ನೇ ಬಹುಕಾಲ ಆಶ್ರಯಿಸಿದರೂ ಅವನಿಗೂ ಜ್ಞಾನ ಬರುವುದಿಲ್ಲವೆಂದೂ, ಸೌಟನ್ನು ಪಾಯಸದಲಿ, ತೊವೆಯಲ್ಲೂ ಬಹು ಹೊತ್ತು ಇಟ್ಟರೂ ಅದಕ್ಕೆ ಆ ರುಚಿ ತಿಳಿಯದಿರುವುದೇ ಇದಕ್ಕೆ ಉದಾಹರಣೆ ಎಂದೂ, ಪ್ರಾಜ್ಞನಾದವನು ಅದೇ ಪಂಡಿತನಲ್ಲಿ ಒಂದೇ ಮುಹೂರ್ತದಲ್ಲಿ ಧರ್ಮವನ್ನು ಗ್ರಹಿಸುವುದು, ನಾಲಗೆಯು ಬೇಗ ರುಚಿ ತಿಳಿಯುವಂತೆ ಎಂದೂ ಹೇಳಿ, ಅಶ್ವತ್ಥಾಮನಿಗೆ “ನೀನು ಸೌಟಾಗ ಬೇಡ, ನಾಲಗೆಯಾಗು” ಎಂದು ಉಪದೇಶಿಸಿದ. ಮಲಗಿದವರನ್ನು ಕೊಲ್ಲುವುದು ಪಾಪವೆಂದ. ಅಷ್ಟು ದೇವಾಂಶ ಅವನಲ್ಲಿನ್ನೂ ಇತ್ತು.
ಅಶ್ವತ್ಥಾಮ ಕೇಳಲಿಲ್ಲ. ಏನೇನೋ ಹರಟಿದ. ನಿಶ್ಚಯ ಬಿಡಲಿಲ್ಲ. ಕೃತವರ್ಮ ಏನೂ ಹೇಳಲಿಲ್ಲ! ಅಶ್ವತ್ಥಾಮನನ್ನು ತಡೆಯಲೂ ಇಲ್ಲ! ಇವನೋ ಯಾದವ
ಭೋಜ ವೀರ; ಸಾತ್ವತ ಕುಲದವನು; ನಾರಾಯಣ ಸೇನೆಯ ನೇತಾ! “ನನ್ನ ಸೈನ್ಯವಲ್ಲ ಒಂದು ಕಡೆ; ನಾನೊಬ್ಬ ಒಂದು ಕಡೆ” ಎಂದು ಶ್ರೀಕೃಷ್ಣ ಹೇಳಿ “ಯಾವುದು ಬೇಕು?” ಎಂದು ಕೇಳಿದಾಗ, ದುರ್ಯೋಧನ “ನಿನ್ನ ಸೈನ್ಯವೇ ಇರಲಿ” ಎಂದನಲ್ಲ! ಆ ಸೈನ್ಯದ ನಾಯಕಾದ ಕೃತವರ್ಮನಿಗೆ ದುರ್ಯೋಧನತ್ತ ನಿಂತು ಯುದ್ಧ ಮಾಡುವುದರಲ್ಲಿ ಸಂಕೋಚವಾಗಲಿಲ್ಲವೆ?
ಸಾತ್ಯಕಿ ಏಕೆ ಕೃಷ್ಣನತ್ತಲೇ ಉಳಿದ? ನಮಗೇ ತಿಳಿಯುವ ಈ ವ್ಯತ್ಯಾಸ, ಶ್ರೀಕೃಷ್ಣನಿಗೆ ತಿಳಿದಿರಲಾರದೆ ?
“ನೀನು ಬೇಕಾದರೂ ನಿಲ್ಲು” ಎಂದು ಅವನೇನೋ ಹೇಳುತ್ತಾನೆ. ಕೇಳುವವನಿಗೆ ತಿಳಿಯಬಾರದೆ? ಲೋಕಲೀಲಾ ವಿಹಾರಿಯ ತಂತ್ರ ಅದು! ಸ್ವಾತಂತ್ರ್ಯ ಕೊಟ್ಟು ನಮ್ಮ ನಿಜಸ್ವರೂಪವನ್ನು ಬಹಿರಂಗ ಮಾಡುವುದು! ಸ್ವರೂಪಕ್ಕೆ ಸರಿಯಾಗಿ ಸಲಹೆ ಕೊಡುವುದು! ಕೃಪ-ಕೃತವರ್ಮರಲ್ಲಿ ಈ ಭೇದ ಉಳಿಯಿತು. ಮುಂದೆ ಅಶ್ವತ್ಥಾಮನಿಗೇನೋ ಶಿಕ್ಷೆ ಆಯಿತು. ತಲೆಯೇ ಹೋಗಬೇಕಾದಲ್ಲಿ ಮಣಿ ಹೋಗಿ ಚರಿತಾರ್ಥವಾಯಿತು, ಸಾಯುವುದಕ್ಕಿಂತ ಕೆಟ್ಟದಾಗಿ, ದುರ್ಗಂಧವಾಸಿತವಾದ, ರೋಗಗ್ರಸ್ತ ಶರೀರದೊಡನೆ ಮೂರುವರೆ ಸಾವಿರ ವರ್ಷ ಬಾಳುವ ಚಿರಂಜೀವಿತ್ವ ಪ್ರಾಪ್ತವಾಗಿ ಅವನು ಕೆಟ್ಟ.
ಕೃಪ ಚಿರಂಜೀವಿಯಾದದ್ದು ಬೇರೆ ರೀತಿಯಲ್ಲಿ.
ಕೃತವರ್ಮ ಉಳಿದ! ದ್ವಾರಕೆಯಲ್ಲೇ ಉಳಿದಿದ್ದ ಹಲವು ಯಾದವರು ಮತ್ತೆ ಅವನ ಸುತ್ತ ಸೇರಿದರು. ಕ್ಷುದ್ರ ರಾಜಕಾರಣ ಬೆಳೆಯಿತು. ಯಾದವರು ಮದ್ಯಪ್ರಿಯರೂ, ಸ್ತ್ರೀ ಕಾಮರೂ ಆದರು. ಕೃತವರ್ಮನ ಕರ್ಮ ಬೆಳೆಯಿತು. ಬೆಳೆಯುತ್ತಲೇ ಹೋಯಿತು.
ಸಾತ್ಯಕಿಯೂ ಮಹಾಭಾರತ ಯುದ್ಧಾನಂತರ ಉಳಿದ ಯಾದವ ವೀರ. ಕೃಷ್ಣಶಿಷ್ಯ ಕೃಷ್ಣಸಖಾ ಪಾಂಡವಪ್ರಿಯನೆನಿಸಿದ್ದ ಇವನೂ ಯಾದವರ ದಾರಿಯನ್ನೇ ಹಿಡಿದಿದ್ದ! ಏನು ಕಾಲ ವಿಪರ್ಯಯ! ಯುದ್ಧದಲ್ಲೂ ಇವನದೊಂದು ಅನಿಷ್ಟ ದಾಖಲೆ ಇತ್ತು.
(ಪ್ರೊ. ಕೆ.ಎಸ್. ನಾರಾಯಣಾಚಾರ್ಯರ ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು ಎಂಬ ಕಾದಂಬರಿಯಿಂದ ಆಯ್ದ ಭಾಗ )
***
No comments:
Post a Comment