SEARCH HERE

Friday 1 October 2021

ಒಂದೆಲಗ ಎಲೆ ಸೊಪ್ಪು

 ರೋಗ ನಿರೋಧಕ ಔಷಧಿ ಹೆಚ್ಚಿಸುವ ಒಂದೆಲಗ !!!

🌸🌸🌸🌸🌸🌸🌸🌸🌸🌸🌸

ಒಂದೆಲಗ ಗದ್ದೆ, ತೋಟಗಳಲ್ಲಿ ಕಂಡುಬರುವ, ಬಳ್ಳಿಯಂತೆ ನೆಲದಲ್ಲಿ ಹಬ್ಬಿ ಬೆಳೆಯುವ ಸಸ್ಯ. ಅದು ಎಲೆ ಒಂದಾದರೂ ಗುಣ ಹಲವು ಎಂಬಂತೆ ಆರೋಗ್ಯ ವರ್ಧಕವಂತೂ ಹೌದು. ಸಾಮಾನ್ಯವಾಗಿ ಒಂದೆಲಗವು ಹಚ್ಚಹಸುರಿನಿಂದ ಕೂಡಿ, ಉರುಟುರುಟಾದ ಎಲೆ ಹೊಂದಿರುತ್ತದೆ. ಜೌಗು ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುವ ಇದು ಮೂರರಿಂದ ನಾಲ್ಕು ಅಂಗುಲಗಳಷ್ಟು ಎತ್ತರಕ್ಕೂ ಹಬ್ಬಬಲ್ಲುದು. ಒಂದೆಲಗದ ಮೂಲ ಏಷ್ಯಾ ಎಂದು ಗುರುತಿಸಲಾಗಿದೆ. ಸುಶ್ರುತ ಸಂಹಿತೆಧಿಯಲ್ಲಿಯೂ ಒಂದೆಲಗದ ಉಲ್ಲೇಖವಿದ್ದು, ಆಹಾರ, ಬ್ರಾಹ್ಮಿ ಔಷಧವಾಗಿಯೂ ಇದನ್ನು ಉಪಯೋಗಿಸಲಾಗುತ್ತದೆ. ಭಾರತವಲ್ಲದೆ ದಕ್ಷಿಣ ಆಫ್ರಿಕಾ, ಚೀನಾಗಳಲ್ಲೂ ಸಾಂಪ್ರದಾಯಿಕ ಔಷಧವಾಗಿ ಬಳಸುತ್ತಾರೆ.


ವೈಜ್ಞಾನಿಕವಾಗಿ ‘ಸೆಂಟಿಲ್ಲಾ ಏಸಿಯಾಟಿಕ್‌’ ಎಂದು ಕರೆಯಿಸಿಕೊಳ್ಳುವ ಇದು ವಿವಿಧ ಭಾಷೆಗಳಲ್ಲಿ ಬೇರೆ ಬೇರೆ ಹೆಸರನ್ನು ಹೊಂದಿದೆ. ಕನ್ನಡದಲ್ಲಿ ಒಂದೆಲಗ, ಸಂಸ್ಕೃತದಲ್ಲಿ ಮಂಡೂಕಪರ್ಣಿ, ಹಿಂದಿಯಲ್ಲಿ ಬ್ರಾಹ್ಮಿ, ತುಳುವಿನಲ್ಲಿ ತಿಮರೆ, ಆಡುಭಾಷೆಯಲ್ಲಿ ಉರಗೆ, ಕೊಂಕಣಿ, ಮರಾಠಿ ಭಾಷೆಗಳಲ್ಲಿ ಕರಾನ್ನೊ, ತೆಲುಗಿನಲ್ಲಿ ಸರಸ್ವತೀ ಇವುಗಳಲ್ಲದೆ ವಲ್ಲಾಡಿ, ನುಂಡೂಕ, ದಿವ್ಯಾ, ಪರ್ಣಿ, ಏಕಪಾನಿ ಇತ್ಯಾದಿ ಹೆಸರುಗಳಿಂದಲೂ ಕರೆಯಲಾಗುತ್ತದೆ.ಒಂದೆಲಗ ತನ್ನಷ್ಟಕ್ಕೇ ಹುಟ್ಟಿ ಬೆಳೆಯುತ್ತದೆ. ಇದನ್ನು ನಾಟಿಗೈದು ಕೃಷಿ ಮಾಡುವ ಕ್ರಮ ಸಾಮಾನ್ಯವಾಗಿ ಇಲ್ಲ. ಧಾರಾಳ ನೀರಿನ ಆಶ್ರಯವುಳ್ಳ ನೆರಳು ಮತ್ತು ತಂಪಿನ ಪ್ರದೇಶಗಳಲ್ಲಿ ಮಣ್ಣಿನಲ್ಲಿರುವ ಸತ್ವ ಹೀರಿ ಬೆಳೆಯುತ್ತದೆ.


ಒಂದೆಲಗ ಔಷಧೀಯ ಗುಣಗಳು ಒಂದೆಲಗದಲ್ಲಿ ಔಷಧೀಯ ಗುಣವಿರುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇದರಲ್ಲಿರುವ ಬೆಕೊಸೈಡ್‌ ಎ ಮತ್ತು ಬಿ ರಾಸಾಯನಿಕವು ಮೆದುಳಿನಲ್ಲಿರುವ ನೆನಪು ಶಕ್ತಿಗೆ ಸಂಬಂಧಿಸಿದ ಜೀವಕೋಶಗಳಿಗೆ ಪುನಶ್ಚೇತನ ನೀಡುವುದು.

ಒಂದೆಲಗದ ಬಳ್ಳಿ, ಎಲೆ, ಕಾಂಡ ಇವುಗಳನ್ನು ಚಟ್ನಿ, ತಂಬುಳಿ, ಹಾಗೂ ತಲೆಗೆ ಹಚ್ಚುವ ಎಣ್ಣೆಯ ತಯಾರಿಕೆಗಾಗಿ ಉಪಯೋಗವಾಗುವ ಗಿಡಮೂಲಿಕೆಯಾಗಿದೆ. ಇದೊಂದು ಉತ್ತಮ ಸ್ಮರಣಶಕ್ತಿ ವರ್ಧಕ ಔಷದೀಯ ಗುಣಗಳುಳ್ಳ ಬಳ್ಳಿ. ಒಂದೆಲಗ ಅಥವಾ ಉರಗದ ಸೊಪ್ಪಿನ ರಸವನ್ನು ಒಂದು ಚಮಚ ಶುದ್ಧ ಜೇನು ತುಪ್ಪ ಬೆರೆಸಿ ನಿತ್ಯವೂ ಮಕ್ಕಳಿಗೆ ನೀಡಿದರೆ ಮಕ್ಕಳ ಸ್ಮರಣಶಕ್ತಿ ಹೆಚ್ಚುತ್ತದೆ. ಜೀರ್ಣಕ್ರಿಯೆಯನ್ನೂ ಉತ್ತಮಗೊಳಿಸುತ್ತದೆ. ಅಲ್ಲದೆ ರಕ್ತಹೀನತೆಯನ್ನೂ ನಿವಾರಿಸುತ್ತದೆ. ಮಕ್ಕಳಿಗೆ ವಯಸ್ಸಿಗೆ ತಕ್ಕಂತೆ ಅರ್ಧ ಚಮಚದಿಂದ ನಾಲ್ಕು ಚಮಚದವರೆಗೆ ಜೇನು ತುಪ್ಪ ಬೆರೆಸಿ ನೀಡುವುದರಿಂದ ದೇಹ ಮನಸ್ಸು ಎರಡರ ಆರೋಗ್ಯವೂ ವೃದ್ಧಿಸುತ್ತದೆ. ಅಲ್ಲದೆ ಮನಸ್ಸನ್ನು ಶಾಂತಗೊಳಿಸಲು, ಸ್ಥಿರಗೊಳಿಸಲು, ಏಕಾಗ್ರತೆ, ಹೆಚ್ಚಿಸಲು ಹಾಗೂ ಸಾತ್ವಿಕತೆ ವರ್ಧಿಸಲು ಒಂದೆಲಗ ಸಹಕಾರಿ ಹಾಗಾಗಿ ಆಧ್ಯಾತ್ಮ ಸಾಧಕರು ಪ್ರಾಚೀನದಿಂದಲೂ ಬಳಸುತ್ತಿರುವ ಈ ಗಿಡಮೂಲಿಕೆಗೆ ದಿವ್ಯಾ, ಸರಸ್ವತೀ ಎಂಬ ಹೆಸರುಗಳೂ ಇವೆ.


ಅರ್ಧ ಚಮಚ ಒಂದೆಲಗದ ರಸಕ್ಕೆ ಒಂದು ಚಮಚದಷ್ಟು ಜೇನುತುಪ್ಪ ಸೇರಿಸಿ ಒಂದು ತಿಂಗಳ ಕಾಲ ಸೇವಿಸಿದರೆ ರಕ್ತಹೀನತೆ ನಿವಾರಣೆಯಾಗುತ್ತದೆ.


• ಹತ್ತು ಒಂದೆಲಗದ ಎಲೆ ಮತ್ತು 5 ಕಾಳುಮೆಣಸನ್ನು ಅರೆದು ಒಂದು ಬಟ್ಟಲು ಮಜ್ಜಿಗೆಯಲ್ಲಿ ಸೇರಿಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಬೇಕು. ಇದನ್ನು ಕೆಲ ಸಮಯದವರೆಗೆ ಮಾಡಿದರೆ ಹೃದಯದ ದೌರ್ಬಲ್ಯ ಗುಣವಾಗುತ್ತದೆ.


• ಒಂದೆಲಗ ಸೊಪ್ಪುನ್ನು ಅರೆದು ಅದರ ರಸವನ್ನು ಒಂದು ಲೋಟ ಬಿಸಿ ಹಾಲಿಗೆ ಸೇರಿಸಿ ದಿನಕ್ಕೆರಡು ಬಾರಿ ಸೇವಿಸುತ್ತಿದ್ದರೆ ಮಹಿಳೆಯರ ಬಿಳಿ ಸೆರಗಿನ ಸಮಸ್ಯೆ ದೂರವಾಗುತ್ತದೆ.


• ನೆರಳಿನಲ್ಲಿ ಚೆನ್ನಾಗಿ ಒಣಗಿಸಿದ ಒಂದೆಲಗ ಸೊಪ್ಪುನ್ನು ಚೆನ್ನಾಗಿ ಕುಟ್ಟಿ ಪುಡಿಮಾಡಿ ಇಡಬೇಕು. ಪ್ರತಿದಿನ ಒಂದು ಚಮಚದಷ್ಟು ಚೂರ್ಣವನ್ನು ಸಮಪ್ರಮಾಣದ ಕಲ್ಲುಸಕ್ಕರೆ ಪುಡಿಯೊಂದಿಗೆ ಬರಿ ಹೊಟ್ಟೆಯಲ್ಲಿ ಸೇವಿಸಿದರೆ ದೇಹಕ್ಕೆ ಪುಷ್ಟಿ, ಶಕ್ತಿ ದೊರೆಯುತ್ತದೆ.


• ಮೂರು – ನಾಲ್ಕು ಚಮಚದಷ್ಟು ಒಂದೆಲಗ ಸೊಪ್ಪಿನ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಮೂರು – ನಾಲ್ಕು ಬಾರಿ ಸೇವಿಸುವುದರಿಂದ ಸ್ವರದ ಸಮಸ್ಯೆ ನಿವಾರಣೆಯಾಗುತ್ತದೆ.


• ಆನೆಕಾಲು ರೋಗದಿಂದ ಬಳಲುತ್ತಿರುವವರಿಗೆ ಒಂದೆಲಗದ ರಸವನ್ನು ಪ್ರತಿನಿತ್ಯ ಸೇವಿಸುವುದರಿಂದ ಪ್ರಯೋಜವಾಗುತ್ತದೆ.


• ಒಂದೆಲಗದ ರಸವನ್ನು ಗಾಯ ಮತ್ತು ಹುಣ್ಣುಗಳಿಗೆ ಹಚ್ಚಿದರೆ ಅವು ಬೇಗನೆ ವಾಸಿಯಾಗುತ್ತದೆ.


• ಕೆಮ್ಮು ದಮ್ಮು ನಿವಾರಣೆಗೆ ಒಂದೆಲಗ ಸೊಪ್ಪುನ್ನು ಜಜ್ಜಿ, ಶುಂಠಿ ಮತ್ತು ಕಾಳುಮೆಣಸನ್ನು ಜಜ್ಜಿ ಹಾಕಿ ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿದ ಕಷಾಯವನ್ನು ಕುಡಿಯಬೇಕು.


• ಎಳ್ಳೆಣ್ಣೆಯನ್ನು ಒಂದೆಲಗದ ರಸದೊಂದಿಗೆ ಬೆರಸಿ ಕುದಿಸಿದ ತೈಲವನ್ನು ತಣಿಸಿ, ಶೋದಿಸಿ ತಲೆಗೆ ಹಚ್ಚಿಕೊಳ್ಳತ್ತಿದ್ದರೆ ದೃಷ್ಟಿಶಕ್ತಿ ಹೆಚ್ಚುತ್ತದೆ.


• ತೀವ್ರವಾದ ತಲೆನೋವು ಕಾಡುತ್ತಿರುವಾಗ ಒಂದೆಲಗ ಸೊಪ್ಪುನ್ನು ಅರೆದು ರಸವನ್ನು ತೆಗೆದು ಹಣೆಗೆ ಲೇಪಿಸಿಕೊಳ್ಳಬೇಕು.


• ತೆಂಗಿನೆಣ್ಣೆಗೆ ಒಂದೆಲಗದ ರಸವನ್ನು ಮಿಶ್ರಮಾಡಿ ತಲೆಗೆ ಹಚ್ಚಿಕೊಂಡರೆ ತಲೆ ಕೂದಲಿನ ಆರೊಗ್ಯಕ್ಕೆ ಒಳ್ಳೆಯದು.


• ಸೈನಸೈಟಿಸ್ ಸಮಸ್ಯೆ ಇದ್ದಾಗ ಹುರುಳಿಯನ್ನು ಒಂದೆಲಗ ಸೊಪ್ಪಿನೊಂದಿಗೆ ಬೇಯಿಸಿ, ಕಾಳುಮೆಣಸಿನ ಪುಡಿ ಮತ್ತು ಉಪ್ಪು ಬೆರಸಿ ಸೇವಿಸಿದರೆ ಕಫವು ಕರಗಿ ಸೈನಸ್ ಸಮಸ್ಯೆ ನಿವಾರಣೆಯಾಗುತ್ತದೆ


ಅಪೌಷ್ಟಿಕತೆ ಹಾಗೂ ಪಿತ್ತದೋಷದಿಂದ ಕೂದಲು ಉದುರುವುದು, ಬಿಳಿಯಾಗುವುದನ್ನು ತಡೆಯಲು ಒಂದೆಲಗದ ಎಲೆ ಸಹಿತ ಬಳ್ಳಿಯನ್ನು ತೊಳೆದು, ಅರೆದು ಅದರ ರಸಕ್ಕೆ ಸ್ವಲ್ಪ ಜೇನು ಮತ್ತು ಹಸುವಿನ ತುಪ್ಪ ಬೆರೆಸಿ ನಿತ್ಯ ಖಾಲಿಹೊಟ್ಟೆಗೆ ಸೇವಿಸುವುದು ಒಳ್ಳೆಯದು.

ಬಾಣಂತಿಯರಿಗೆ ಒಂದೆಲಗವನ್ನು ಒಣಗಿಸಿ ಹುಡಿ ಮಾಡಿ, ಜೀರಿಗೆ ಪುಡಿಯೊಂದಿಗೆ ಹಾಲಿನಲ್ಲಿ ಬೆರೆಸಿ ಸೇವಿಸಲು ನೀಡುವುದರಿಂದ ಎದೆಹಾಲು ವೃದ್ಧಿಸುತ್ತದೆ.

ಉರಿಮೂತ್ರ, ಮೂತ್ರಕಟ್ಟು ಉಂಟಾದಾಗ ಒಂದು ಕಪ್‌ ಎಳನೀರಿಗೆ 4 ಚಮಚ ಒಂದೆಲಗದ ರಸ, ಅರ್ಧ ಚಮಚ ಕೊತ್ತಂಬರಿ ಬೀಜದ ಹುಡಿ ಬೆರೆಸಿ ಕುಡಿದರೆ ಶಮನವಾಗುವುದು.


ಮಲಬದ್ಧತೆಯಿಂದ ಬಳಲುವವರು ಒಂದೆಲಗದಿಂದ‌ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸಿದರೆ ಉತ್ತಮ.

ಒಂದೆಲಗದ ಪಲ್ಯ, ತಂಬುಳಿ, ಚಟ್ನಿ, ಸಲಾಡ್‌ ಬಲು ರುಚಿ. ಅಲ್ಲದೆ ಚಾ, ಕಾಫಿಯ ಬದಲಾಗಿ ಒಂದೆಲಗದ ಪುಡಿಯಿಂದ ಕಷಾಯ ತಯಾರಿಸಿ ಸೇವಿಸುವವರೂ ಇದ್ದಾರೆ. ಬೇಸಗೆಯಲ್ಲಿ ಇದರ ಜ್ಯೂಸ್‌ ಆರೋಗಕ್ಕೆ ಹಿತಕರ.

ನಿದ್ರಾಹೀನತೆ ಇರುವವರು ಒಂದೆಲಗದಿಂದ ತಯಾರಿಸಿದ ಗುಳಿಗೆಗಳನ್ನು ಸೇವಿಸುವುದರಿಂದ ಹಾಯಾಗಿ ನಿದ್ರಿಸಬಹುದು.


ಹೀಗೆ ಹಿತ್ತಲ ಬಳ್ಳಿಯ ಔಷಧೀಯ ಗುಣಗಳು ವೈದ್ಯಕೀಯ ಲೋಕದಲ್ಲೂ ಪ್ರಸಿದ್ಧಿಯನ್ನು ಪಡೆದಿವೆ. ನಮ್ಮಲ್ಲಿ ಇಂದಿಗೂ ಸಣ್ಣ ಮಕ್ಕಳಿಗೆ ಮುಂಜಾನೆ ಖಾಲಿ ಹೊಟ್ಟೆಗೆ ಒಂದು ಚಮಚ ಒಂದೆಲಗ ರಸ ಹಾಗೂ ಆಗಾಗ ತುಳಸಿ ರಸವನ್ನು ನೀಡುವ ಪದ್ದತಿ ಇದೆ. ಹಿಂದೆ ಎಲ್ಲಡೆ ಕಾಣ ಸಿಗುತ್ತಿದ್ದ ಈ ಬಳ್ಳಿಗಳು ಇಂದು ಅಲ್ಲಲ್ಲಿ ಮಾತ್ರ ಕಾಣ ಸಿಗುತ್ತವೆ

ಈ ಒಂದೆಲಗ ವನ್ನು ನೀವು ಬಳಸಿ ಉಪಯೋಗ ಪಡೆಯಿರಿ


ವಿಜಯಕರ್ನಾಟಕ.

***

ಕೂದಲಿಗೆ ಆಗುವ ಲಾಭಗಳು ಒಂದೆಲಗ ಸೊಪ್ಪಿನಿಂದ

 ಒಂದೆಲಗ ಸೊಪ್ಪಿನಿಂದ ಆರೋಗ್ಯ, ತ್ವಚೆ ಹಾಗೂ ಕೂದಲಿಗೆ ಆಗುವ ಲಾಭಗಳು




ಭಾರತದಲ್ಲಿ ವಿಶೇಷವಾಗಿ ಸಿಗುವಂತಹ ಒಂದೆಲಗ ಎನ್ನುವ ತುಂಬಾ ಸಣ್ಣ ಗಿಡಮೂಲಿಕೆಯು ಜೌಗು ಪ್ರದೇಶ ಮತ್ತು ನೈಸರ್ಗಿಕವಾಗಿ ಹರಿಯುವ ನೀರಿನ ಪ್ರದೇಶಗಳಲ್ಲಿ ಬೆಳೆಯುವುದು. ಇದನ್ನು ತರಕಾರಿಯಾಗಿಯೂ ಪ್ರತಿನಿತ್ಯ ಸೇವಿಸಬಹುದು ಮತ್ತು ಔಷಧಿಗೆ ಗಿಡಮೂಲಿಕೆಯಾಗಿಯೂ ಬಳಸಬಹುದು. ಒಂದೆಲಗದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ಇದರಲ್ಲಿರುವ ಆರೋಗ್ಯ ಗುಣಗಳ ಬಗ್ಗೆ ವಿಜ್ಞಾನಿಗಳು ದೃಢಪಡಿಸಿದ್ದರೂ ಕೆಲವರು ಇನ್ನೂ ಇದರ ಬಗ್ಗೆ ಚರ್ಚಿಸುತ್ತಿದ್ದಾರೆ. ಒಂದೆಲಗದಿಂದ ಆರೋಗ್ಯಕ್ಕೆ, ತ್ವಚೆ ಹಾಗೂ ಕೂದಲಿಗೆ ಯಾವ ರೀತಿಯ ಲಾಭಗಳು ಇವೆ ಎಂದು ತಿಳಿಯುವ....




ಒಂದೆಲಗದ ಆರೋಗ್ಯ ಲಾಭಗಳು


ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕು ನಿವಾರಿಸುವುದು




ಈ ಗಿಡಮೂಲಿಕೆಯನ್ನು ಸಾಮಾನ್ಯ ಶೀತ, ಮೂತ್ರನಾಳದ ಸೋಂಕು, ಸರ್ಪಸುತ್ತು, ಕ್ಷಯರೋಗ, ಕುಷ್ಟರೋಗ, ಹಂದಿಜ್ವರ, ಭೇದಿ, ಕಾಲರಾ ಇತ್ಯಾದಿಗಳ ಚಿಕಿತ್ಸೆಗೆ ಬಳಸಿಕೊಳ್ಳಬಹುದು. ಮನುಷ್ಯರಲ್ಲಿ ಕಾಣಿಸುವ ವೈರಲ್, ಬ್ಯಾಕ್ಟೀರಿಯಾ ಮತ್ತು ಪರಾವಲಂಬಿ ಸೋಂಕಿಗೆ ಇದನ್ನು ಬಳಸಲಾಗುವುದು.




ಬಳಲಿಕೆ ನಿವಾರಿಸುವುದು


ಬಳಲಿಕೆ ನಿವಾರಿಸುವುದು


ಇದು ಬಳಲಿಕೆ ನಿವಾರಣೆ ಮಾಡಲು ತುಂಬಾ ಸಹಕಾರಿ. ಈ ಗಿಡಮೂಲಿಕೆ ಸೇವಿಸಿದರೆ ನಿಮ್ಮಲ್ಲಿನ ಬಳಲಿಕೆಯು ದೂರವಾಗಿ ಶಕ್ತಿ ಬರುವುದು.




ನೆನಪಿನ ಶಕ್ತಿ ಹೆಚ್ಚಿಸುವುದು


ಒಂದೆಲಗ ನೆನಪಿನ ಶಕ್ತಿ ಹಾಗೂ ಬುದ್ಧಿ ಹೆಚ್ಚಿಸಿ, ಅಲ್ಝೈಮರ್, ಖಿನ್ನತೆ ಮತ್ತು ಆತಂಕ ಇತ್ಯಾದಿ ದೂರ ಮಾಡಲು ನೆರವಾಗುವುದು.




ಗಾಯ ಹಾಗೂ ಸುಟ್ಟ ಗಾಯ ಶಮನ


ಗಾಯ ಹಾಗೂ ಸುಟ್ಟ ಗಾಯ ಶಮನ


ವೈಜ್ಞಾನಿಕವಾಗಿ ಸೆಂಟೆಲ್ಲಾ ಏಷಿಯಾಟಿಕಾ ಎಂದು ಕರೆಯಲ್ಪಡುವಂತಹ ಈ ಗಿಡಮೂಲಿಕೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ, ವೈರಲ್ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದರಿಂದಾಗಿ ಈ ಗಿಡಮೂಲಿಕೆಯನ್ನು ಗಾಯ, ಸುಟ್ಟ ಗಾಯ, ಸೋರಿಯಾಸಿಸ್, ಡರ್ಮಟೈಟಿಸ್ ಇತ್ಯಾದಿಗಳ ಚಿಕಿತ್ಸೆಗೆ ಬಳಸಬಹುದು. ಇದು ಗಾಯ, ಸುಟ್ಟಗಾಯ ಶಮನ ಮಾಡುವುದು. ಯಾಕೆಂದರೆ ಇದು ಬಾಧಿತ ಜಾಗಕ್ಕೆ ರಕ್ತಸಂಚಾರ ಹೆಚ್ಚಿಸಿ, ಆ್ಯಂಟಿಆಕ್ಸಿಡೆಂಟ್ ಮಟ್ಟ ವೃದ್ಧಿಸುವುದು. ಆ್ಯಂಟಿಆಕ್ಸಿಡೆಂಟ್ ಗಳು ಹೆಚ್ಚಾದರೆ ಆಗ ನಾರಿನ ಉತ್ಪತ್ತಿಯು ಹೆಚ್ಚಾಗುವುದು. ನಾರು ಕಾಲಜನ್ ನ್ನು ಸಂಶ್ಲೇಷಣೆ ಮಾಡಿ ಚರ್ಮದಲ್ಲಿ ಮೂಡಿರುವಂತಹ ಗಾಯದ ಗುರುತುಗಳನ್ನು ತೆಗೆಯಲು ನೆರವಾಗುವುದು.




ಸರಿಯಾಗಿ ನಿದ್ದೆ ಬರದಿದ್ದರೆ... 




ಸರಿಯಾಗಿ ನಿದ್ದೆ ಬರದಿದ್ದರೆ...


ತಲೆಯ ಚರ್ಮವನ್ನು ಬ್ರಾಹ್ಮಿ ತೈಲದಿಂದ ಮಸಾಜ್ ಮಾಡಿ ಕೊಂಚ ನಡೆದಾಡಿ ಒಂದು ಲೋಟ ಹಾಲು ಕುಡಿದು ಮಲಗಿದಾಗ ಗಾಢ ನಿದ್ದೆ ಆವರಿಸುವುದನ್ನು ಕಂಡುಕೊಳ್ಳಲಾಗಿದೆ. ಉತ್ತಮ ಆರೋಗ್ಯಕ್ಕೆ ನಿದ್ದೆ ತುಂಬಾ ಅಗತ್ಯ ನಿದ್ರಾರಾಹಿತ್ಯದ ಕಾರಣ ಮನೋವಿಕಲ್ಪ, ಖಿನ್ನತೆ, ಒತ್ತಡ ಮೊದಲಾದವುಗಳಿಂದ ರಕ್ಷಣೆ ಪಡೆದಂತಾಗುತ್ತದೆ. ಅಷ್ಟೇ ಅಲ್ಲ, ಕೆಲವು ಮಕ್ಕಳು ಅಗತ್ಯಕ್ಕಿಂತಲೂ ಹೆಚ್ಚು ಚುರುಕಾಗಿರುವುದು (hyperactive) ಅಪಾಯಕ್ಕೆ ಎದುರಾಗ ಬಹುದಾದುದರಿಂದ ಮಕ್ಕಳ ತಲೆಗೂ ಬ್ರಾಹ್ಮಿ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ಸಹಜ ಸ್ಥಿತಿಗೆ ತರಲು ಸಾಧ್ಯ.




ಸೆಲ್ಯೂಲೈಟ್ ವಿರುದ್ಧ ಹೋರಾಡುವುದು


ಸೆಲ್ಯೂಲೈಟ್ ವಿರುದ್ಧ ಹೋರಾಡುವುದು


ಒಂದೆಲಗ ಚರ್ಮದಲ್ಲಿ ಸೆಲ್ಯೂಲೈಟ್ ವಿರುದ್ಧ ಹೋರಾಡಲು ಹಿಂದಿನಿಂದಲೂ ಬಳಸಿಕೊಂಡು ಬರಲಾಗುತ್ತಾ ಇದೆ. ಸೆಲ್ಯೂಲೈಟ್ ಬೊಕ್ಕೆ, ಮೊಡವೆ ಉಂಟು ಮಾಡುವುದು. ಸೆಲ್ಯೂಲೈಟ್ ಕೈಯ ಮೇಲ್ಭಾಗ, ತೊಡೆ ಹಾಗೂ ಪೃಷ್ಠದದಲ್ಲಿ ಕಾಣಿಸಿಕೊಳ್ಳುವುದು. ಒಂದೆಲೆಗ ಈ ಭಾಗದಲ್ಲಿ ರಕ್ತಸಂಚಾರವನ್ನು ಹೆಚ್ಚಿಸಿ, ಉರಿಯೂತ ಕಡಿಮೆ ಮಾಡುವುದು.




ವಯಸ್ಸಾಗುವ ಚರ್ಮಕ್ಕೆ




ವಯಸ್ಸಾಗುವ ಚರ್ಮಕ್ಕೆ


ಒಂದೆಲಗ ತ್ವಚೆಗೆ ಟೋನರ್ ಆಗಿ ಕೆಲಸ ಮಾಡುವುದು. ಇದು ಚರ್ಮವನ್ನು ಬಿಗಿಗೊಳಿಸುವುದು. ಇದರಿಂದಾಗಿ ವಯಸ್ಸಾಗುವ ಲಕ್ಷಣ ತಡೆಯುವ, ನೆರಿಗೆ ನಿವಾರಣೆ ಮಾಡುವಂತಹ ಕ್ರೀಮ್ ಗಳಲ್ಲಿ ಒಂದೆಲಗ ಬಳಸುವರು. ಈ ಗಿಡಮೂಲಿಕೆಯು ಕಾಲಜನ್ ಉತ್ಪತ್ತಿ ಹೆಚ್ಚಿಸುವುದು. ಇದರಿಂದ ವಯಸ್ಸಾಗುವ ಚರ್ಮ, ನೆರಿಗೆ ಮತ್ತು ಗೆರೆಗಳನ್ನು ನಿವಾರಿಸುವುದು. ಕಾಲಜನ್ ಉತ್ಪತ್ತಿಯು ಕಡಿಮೆಯಾದರೆ ಅದರಿಂದ ನೆರಿಗೆ, ವಯಸ್ಸಾಗುವಾಗ ಮೂಡುವ ಗೆರೆಗಳು ಮೂಡುವುದು. ಒಂದೆಲಗ ಕಾಲಜನ್ ಉತ್ಪತ್ತಿ ಹೆಚ್ಚಿಸುವ ಕಾರಣದಿಂದಾಗಿ ಇದನ್ನು ವಯಸ್ಸಾಗುವ ಲಕ್ಷಣ ತಡೆಯುವ ಕ್ರೀಮ್ ಗಳಲ್ಲಿ ಬಳಸುವರು.




ಚರ್ಮದ ಕಾಂತಿ ಹೆಚ್ಚಿಸುತ್ತದೆ 


ಚರ್ಮದ ಕಾಂತಿ ಹೆಚ್ಚಿಸುತ್ತದೆ


ಬ್ರಾಹ್ಮಿ ಎಣ್ಣೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ನಿವಾರಿಸಲು ಸಮರ್ಥವಾಗಿವೆ. ವಿಶೇಷವಾಗಿ ಚರ್ಮದ ಹೊರಪದರ (epidermis ಅಥವಾ epithilial layer)ದಲ್ಲಿ ಅಂಟಿಕೊಂಡಿದ್ದ ವಿಷಕಾರಿ ವಸ್ತುಗಳನ್ನು ನಿವಾರಿಸಲು ನೆರವಾಗುತ್ತದೆ. ಪರಿಣಾಮವಾಗಿ ಚರ್ಮ ಹೊಸ ಜೀವಕೋಶಗಳನ್ನು ಪಡೆಯುವ ಮೂಲಕ ಸಹಜಕಾಂತಿಯನ್ನು ಹೆಚ್ಚಿಸಿಕೊಳ್ಳುತ್ತದೆ.ಅಷ್ಟೇ ಅಲ್ಲ, ಚರ್ಮದ ಕೆಳಪದರ (ಹೈಪೋಡರ್ಮಿಸ್) ಮತ್ತು connective tissueಗಳಲ್ಲಿ ರಕ್ತಪರಿಚಲನೆ, ತೈಲಗಳ ಉತ್ಪಾದನೆ ಹೆಚ್ಚಿಸುವ ಮೂಲಕ ಚರ್ಮದ ಆರೋಗ್ಯ ಹೆಚ್ಚಿಸಲು ನೆರವಾಗುತ್ತದೆ. ತನ್ಮೂಲಕ ಚರ್ಮವ್ಯಾಧಿಗಳಾದ ಸೋರಿಯಾಸಿಸ್ (psoriasis), ತುರಿಕೆ (eczema), ಕೀವು (abscess) ಮತ್ತು ವ್ರಣ (ulceration) ಗಳಾಗುವುದನ್ನು ತಡೆಯುತ್ತದೆ ಹಾಗೂ ಈಗಾಗಲೇ ಇದ್ದರೆ ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ.




ಕೂದಲು ಉದುರುವಿಕೆ ತಡೆಯಲು ಹೇಗೆ ನೆರವಾಗುವುದು?




ಕೂದಲು ಉದುರುವಿಕೆ ತಡೆಯಲು ಹೇಗೆ ನೆರವಾಗುವುದು?


ಒಂದೆಲಗವನ್ನು ತುಂಬಾ ಹಿಂದಿನಿಂದಲೂ ಕೂದಲು ಉದುರುವಿಕೆ ತಡೆಯಲು ಬಳಸಲಾಗುತ್ತಿದೆ. ಇದು ಕೂದಲಿನ ಮರುಬೆಳವಣಿಗೆಗೆ ನೆರವಾಗುವುದು. ಕೂದಲಿನ ಕಿರುಚೀಲಗಳು ಪೋಷಣೆಯಿಲ್ಲದೆ ದುರ್ಬಲಗೊಂಡಾಗ ಕೂದಲು ಉದುರುವುದು. ಈ ಗಿಡಮೂಲಿಕೆಯು ಕೂದಲಿನ ಕಿರುಚೀಲಗಳನ್ನು ಬಲಗೊಳಿಸಿ, ತಲೆಬುರುಡೆಗೆ ಪೋಷಣೆ ನೀಡುವುದು. ಇದು ರಕ್ತಸಂಚಾರ ಉತ್ತಮಪಡಿಸಿ, ಕೂದಲ ಬೆಳವಣಿಗೆಗೆ ನೆರವಾಗುವುದು.




ತಲೆಬುರುಡೆಯಲ್ಲಿ ರಕ್ತಸಂಚಾರ ಸುಧಾರಣೆ


ತಲೆಬುರುಡೆಯಲ್ಲಿ ರಕ್ತಸಂಚಾರ ಸುಧಾರಣೆ


ಒಂದೆಲಗದಿಂದಾಗಿ ರಕ್ತನಾಳಗಳು ಆರಾಮವಾಗಿ ರಕ್ತ ಸಂಚಾರವು ಉತ್ತಮವಾಗುವುದು. ಇದರಿಂದ ಆಮ್ಲಜನಕ ಮತ್ತು ಇತರ ಪೋಷಕಾಂಶಗಳು ತಲೆಬುರುಡೆಗೆ ಪ್ರವೇಶಿಸಲು ಜಾಗ ಸಿಗುವುದು. ಒಂದೆಲಗವು ತಲೆಬುರುಡೆಗೆ ಪೋಷಣೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವುದು, ಕೂದಲು ಉದುರುವುದನ್ನು ತಡೆಯುವುದು ಮತ್ತು ಕೂದಲು ಬೆಳೆಯಲು ನೆರವಾಗುವುದು. ಇದರಿಂದ ಬಲಿಷ್ಠ, ಕಾಂತಿಯುತ ಕೂದಲು ನಮ್ಮದಾಗುವುದು.


***



No comments:

Post a Comment