SEARCH HERE

Tuesday 1 January 2019

uttan dwadashi tulasi ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬ karteeka shukla dwadashi




read more here



deepavali fest     DEEPAVALI
karteeka maasa          KARTEEKA MASA

bali padyami    BALI PADYAMI


dhatri havana             DHATRI HAVANA
read more here-->   ತುಳಸೀ TULASI 

ತುಳಸಿ ಹಬ್ಬ 
ಉತ್ಥಾನ ದ್ವಾದಶಿ Karthika Shudda Dwadashi by narhari sumadhwa

ಆಷಾಢದಲ್ಲಿ ಶಯನೀ ಏಕಾದಶಿಯಂದು ಲೋಕ ವಿಡಂಬನೆಗಾಗಿ ಶಯನಿಸಿರುವ ಶ್ರೀ ವಿಷ್ಣುವು ಕಾರ್ತೀಕ ಶುದ್ಧ ದ್ವಾದಶಿಯಂದು – ಪ್ರಭೋಧಿನಿಯಂದು ಏಳುವುದರಿಂದ ಇದನ್ನು ಉತ್ಥಾನ ದ್ವಾದಶಿ ಎಂದು ಕರೆಯುತ್ತಾರೆ.  ತುಲಸೀ ಸಹಿತ ಧಾತ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥವಾಗಿ ಈ ವ್ರತವನ್ನು ಮಾಡುವುದು  ರೂಢಿಯಲ್ಲಿದೆ.
 

ಈ ದಿನ ಪ್ರಭೋದೋತ್ಸವ ಮತ್ತು ತುಳಸಿ ವಿವಾಹವನ್ನು ಆಚರಿಸುತ್ತಾರೆ.
ಉತ್ಥಾನ ದ್ವಾದಶಿ ಪೂಜ ಆಚರಣೆ :

ಅನುಕೂಲವಿದ್ದರೆ ಧಾತ್ರಿ ವೃಕ್ಷದ ಮುಂದೆ ತುಳಸಿ ಸಸಿಯನ್ನಿಟ್ಟು ಪೂಜಿಸಬೇಕು. ಇಲ್ಲದಿದ್ದರೆ ತುಳಸೀ ವೃಂದಾವನದ ಹತ್ತಿರ / ಧಾತ್ರೀ ವೃಕ್ಷದ ಕೊಂಬೆಯನ್ನಿಟ್ಟು ಅದರ ಮುಂದ ಶ್ರಿಕೃಷ್ಣನ ಪ್ರತಿಮೆ ಮತ್ತು /ಅಥವಾ ಸಾಲಿಗ್ರಾಮಗಳನ್ನಿಟ್ಟು ಪೂಜೆ ಮಾಡತಕ್ಕದ್ದು. ತುಳಸಿ ಕಟ್ಟೆಗೆ ಬಣ್ಣವನ್ನು ಹಚ್ಚಿ, ರಂಗೋಲಿ ಹಾಕಿ, ಅಲಂಕಾರ ಮಾಡಬೇಕು.
 

ದೇವರ ಪೂಜೆಯ ನಂತರ ತುಳಸೀ ಪೂಜೆಯನ್ನು ಮಾಡಬೇಕು. ನೈವೇದ್ಯ ಮಾಡುವಾಗ ದೇವರಿಗೆ ನೈವೇದ್ಯ ಮಾಡಿ, ಮಹಾಲಕ್ಷ್ಮಿಗೆ ನೈವೇದ್ಯ ಮಾಡಿ, ಪ್ರಾಣದೇವರಿಗೆ ನೈವೇದ್ಯ ಮಾಡಿ ನಂತರ ತುಳಸಿಗೆ ನೈವೇದ್ಯ ಮಾಡಬೇಕು. ಯಥಾಶಕ್ತಿ ಭಕ್ಷ್ಯ, ಭೋಜ್ಯ ತಯಾರಿಸಿ ಸಮರ್ಪಿಸಬೇಕು.
ಧಾತ್ರಿ ಕಾಯಿಯಲ್ಲಿ (ನೆಲ್ಲಿಕಾಯಿಗಳಲ್ಲಿ)- ಐದು, ಏಳು, ಒಂಭತ್ತು ನೆಲ್ಲಿಕಾಯಿಗೆ ತುಪ್ಪದ ದೀಪ ಹಚ್ಚಿ ಆರತಿ ಬೆಳಿಗ್ಯೆ ಮತ್ತು ಸಂಜೆ ಮಾಡತಕ್ಕದ್ದು.
 

What is Uttana Dwadashi ?
In Chaturmasya Ashada Shukla Ekadashi Srihari pretends to go on sleeping and in Bhadrapa Shukla he will change the direction of his sleeping.  In Karteeka Shukla Dwadashi Srihari will get up, that day is called as Uttana Dwadashi.  On this Dwidalavratha and Chaturmasya Vrata samapthi must be done with the mantra :
Uthwana Dwadashi also signifies the beginning of Ksheera sagar mathan (churning of the milky Ocean).
Tulasi was born during Amruta Mathana.  She is mostly liked by Srihari.  We are plucking Tulasi for the pooja of Srihari.
ಇದಂ ವ್ರತಂ ಮಯಾದೇವ ಕೃತಂ ಪ್ರೀತ್ಯೈ ತವ ಪ್ರಭೋ |
ನ್ಯೂನಂ ಸಂಪೂರ್ಣತಾಂ ಯಾತು ತ್ವತ್ಪ್ರಸಾದಾತ್ ಜನಾರ್ಧನ||
इदं व्रतं मयादेव कृतं प्रीत्यै तव प्रभो ।
न्यूनं संपूर्णतां यातु त्वत्प्रसादात् जनार्धन॥
This dwadashi is also called as Prabhodini Dwadashi. – a day said to be the waking in of Srihari and the samapthi of Chaturmaasya also.


ಶ್ರೀ ಸಖಿತ್ವಂ ಸದಾನಂದೇ ಮುಕುಂದಸ್ಯ ಸದಾ ಪ್ರಿಯೇ |
ವರದಾಭಯ ಹಸ್ತಾಭ್ಯಾಂ ಮಾಂ ವಿಲೋಕಯ ದುರ್ಲಭೇ |
श्री सखित्वं सदानंदे मुकुंदस्य सदा प्रिये ।
वरदाभय हस्ताभ्यां मां विलोकय दुर्लभे ।
“ಸಕಲ ಸಾಧನಗಳಿದ್ದು ತುಳಸಿಯಿಲ್ಲದ ಪೂಜೆ ಶ್ರೀಹರಿ ಕೊಳ್ಳನು”
 

Importance of Tulasi (Purandara vaaNi)

ಶ್ರೀ ತುಳಸಿ ಇಲ್ಲದಿರೆ, ಶ್ರೀ ಕೃಷ್ಣ ತುಳಸಿ |  ತುಳಸಿದಳ ಇಲ್ಲದಿರೆ, ತುಳಸಿಕಾಷ್ಟ |
ಇಲ್ಲದಿರೆ ತುಳಸಿ ಶುಷ್ಕ , ಅದು ಹಳೇತಾದರೆ ಏನು |ಅವನೀಶಗರ್ಪಿಸಬಹುದು |
ಇಲ್ಲದಿರೆ, ಚಿಗುರು ತುಳಸಿ ಇಲ್ಲದಿರೆ, ಮುಗುಳುತೆನೆ |                ಇಲ್ಲದಿರೆ ಬೇರು, ಮಣ್ಣು |
ಇಲ್ಲದಿರೆ ತುಳಸಿ ತುಳಸಿ ಎಂದು ಕೂಗಿದರೆ ಸಾಕು |                  ಇಲ್ಲದಿರೆ ಪುರಂದರವಿಠಲಯ್ಯ |  ಎಲ್ಲ ವಸ್ತುಗಳ ಈಡ್ಯಾಡುವ ||
 

ತುಳಸಿಯು ಶ್ರೀಲಕ್ಷ್ಮಿಯ ಸನ್ನಿಧಾನಯುತವಾಗಿದೆ. ಹರಿಪೂಜೆಗೆ ಅತ್ಯಂತ ಅವಶ್ಯಕ, ತುಳಸಿ ಪೂಜೆಗೆ ಲಭ್ಯವಿಲ್ಲದಿದ್ದ ಪಕ್ಷದಲ್ಲಿ ತುಳಸಿಯ ಎಲೆ, ಕಾಷ್ಟಗಳಿಂದಲೂ ಅಥವಾ ತುಳಸಿಗಿಡದ ಮೃತ್ತಿಕೆಯಿಂದಲಾದರೂ ಪೂಜಿಸಬಹುದು. ಅದೂ ಇಲ್ಲದಿದ್ದಾಗ ತುಳಸಿ ಒಣಗಿದ್ದರೂ ಪರವಾಗಿಲ್ಲ ಉಪಯೋಗಿಸಬಹುದು. ಕೊನೆಯ ಪಕ್ಷ ತುಳಸಿ, ತುಳಸಿ ಎಂದು ಬಾಯಿಯಿಂದ ಸ್ಮರಿಸುತ್ತಲಾದರೂ ಪೂಜಿಸಬೇಕು.
 

shrI tuLasi illadire, shrI kRuShNa tuLasi |                                                    tuLasidaLa illadire, tuLasikaaShTa |                                                                  illadire tuLasi shuShka , adu haLEtaadare Enu | 
avanIshagarpisabahudu | illadire,
chigugu tuLasi illadire, muguLutene |  illadire bEru, maNNu |
illadire tuLasi tuLasi eMdu kUgidare saaku |
illadire puraMdaraviThalayya |  ella vastugaLa IDyaaDuva


Pooja of Srihari without Tulasi is nishprayojaka


Stotra on Tulasi 

ಪ್ರಸೀದ ತುಲಸೀದೇವೀ ಪ್ರಸೀದ ಹರಿವಲ್ಲಭೇ
ಕ್ಷೀರೋದಮಥನೋದ್ಭೋತೇ ತುಲಸೀತ್ವಾಂ ನಮಾಮ್ಯಹಂ |
ಯಾದೃಷ್ಠಾ ನಿಖಿಲಾಘಸಂಗಶಮನೀ ಸ್ಪ್ರುಷ್ಟ್ಪಾವಪುಪಾವನೀ
ರೋಗಾಣಾಮಭಿವಂದಿತಾ ನಿರಸನಿ ಸಿಕ್ತಾಂತಕತ್ರಾಸಿನಿ |
ಪ್ರತ್ಯಾಸತ್ತಿವಿಧಾಯಿನೀ ಭಗವತ: ಕೃಷ್ಣಸ್ಯ ಸಂರೋಪಿತಾ |
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮ: |
 

प्रसीद तुलसीदेवी प्रसीद हरिवल्लभे
क्षीरोदमथनोद्भोते तुलसीत्वां नमाम्यहं ।
यादृष्ठा निखिलाघसंगशमनी स्प्रुष्ट्पावपुपावनी
रोगाणामभिवंदिता निरसनि सिक्तांतकत्रासिनि ।
प्रत्यासत्तिविधायिनी भगवत: कृष्णस्य संरोपिता ।
न्यस्ता तच्चरणे विमुक्तिफलदा तस्यै तुलस्यै नम: ।
 

prasīda tulasīdēvī prasīda harivallabhē
kṣīrōdamathanōdbhōtē tulasītvāṁ namāmyahaṁ |
yādr̥ṣṭhā nikhilāghasaṁgaśamanī spruṣṭpāvapupāvanī
rōgāṇāmabhivaṁditā nirasani siktāṁtakatrāsini |
pratyāsattividhāyinī bhagavata: kr̥ṣṇasya saṁrōpitā |
nyastā taccaraṇē vimuktiphaladā tasyai tulasyai nama: |


Who is Tulasi?  –   “ತುಳಸಿ” – {Ocimum tenuiflorum} 
 

ಸುಧೆಗಡಲ ಮಥಿಸುವ ಸಮಯದಿ ವೈದ್ಯನಾಗಿ
ಪದುಮನಾಭನು ತಾನು ಉದ್ಭವಿಸಿ ಬರಲಂದು
ಉದುರಿದವು ಕಣ್ಣಿಂದ ಉದವುತ್ಸಹದಿಂದಲದೆ
ತುಳಸಿನಾಮವಾಗೆ |
ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು
ಒದಗಿ ಸುಜನರು ತಮ್ಮ ಸದನದಿ ನಿತ್ಯ ಸ
ತ್ಪದವಿದೆ ಸಿದ್ದವೆಂದು ಮುದದಿಂ ತಿಳಿದು
ವೃಂದಾವನವ ರಚಿಸಿದರೈಯ್ಯಾ |
 

ಹಿಂದೆ ಅಮೃತಪ್ರಾಪ್ತಿಗಾಗಿ ದೇವದಾನವರು ಕ್ಷೀರಸಮುದ್ರದಲಿ ಮಂದರ ಪರ್ವತವನ್ನು ಕಡುಗೋಲಾಗಿಯೂ, ವಾಸುಕಿಯನ್ನು ಹಗ್ಗವನ್ನಾಗಿಯೂ, ಮಾಡಿಕೊಂಡು ಶ್ರೀಹರಿಯ ಅದ್ಭುತ ಮಹಿಮೆಯ ಸಹಾಯದಿಂದ ಸಮುದ್ರ ಮಥನ ಮಾಡಿದರು. ಆಗ ಅಮೃತಕಲಶವನ್ನು ಹಿಡಿದುಕೊಂಡು ಶ್ರೀಹರಿಯು ವೈದ್ಯರೂಪನಾಗಿ ಸಮುದ್ರಮಧ್ಯದಿಂದ ಧನ್ವಂತರೀರೂಪದಿಂದ ಅವತರಿಸಿದನು. ಆ ದಿನ ಕಾರ್ತಿಕ ಹುಣ್ಣಿಮೆ ಯಾಗಿತ್ತು. ತಕ್ಷಣ ಅವನ ಕಣ್ಣಿಂದ ಆನಂದಾಶ್ರುವಿನ ಹನಿಗಳು ಅಮೃತಕಲಶದಲ್ಲಿ, ಬೀಳಲು ತುಳಸಿಯ ಜನನವಾಯ್ತು.  
 

Tulasi is the avatara of Sri Mahalakshmi.   During Samudra Mathana, Srihari came in as Dhanvantary, Srihari’s Vaidya Roopa,  who came holding Suvarna Kalasha comprising of Amrutha from the ocean.  At that time aanandashru (eye drops ಆನಂದಾಶ್ರು) came out of Sri Dhanvantari roopi paramathma and this drops turned out to be Tulasi.  It was on Karthika Hunnime that the birth of Tulasi during the early morning  took place.  
As soon as she was born, Tulasi went to the mountainous region of Badarinatha to practice severe penance. Though many persons tried to dissuade her, no one was able to;  for she was determined to stay and pray in the forest till  Krishna appeared and agreed to become her husband.
Ceremonial marriage of Tulasi plant with Lord Vishnu is performed on this day.   It is customary to put Saligrama and Tulasi plant and getting marriage of them.
 

Vaishnavaites traditionally use japa malaas made from tulsi stems or roots.  Tulsi mani mala is referred to be auspicious for the wearer, and believed to put them under the protection of Srihari.   This japa maals is used to count ramanama smarana, krishna nama smarana, raghavendra nama smarana, narayana nama smarana, etc.


ತುಲಸಿ ನಮಸ್ಕಾರ – तुलसि नमस्कार –

ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ | 
ನಮಸ್ತೇ ನಾರದನುತೇ ನಾರಾಯಣ ಮನ:ಪ್ರಿಯೇ |
तुलसि श्रीसखि शुभे पापहारिणि पुण्यदे ।
 नमस्ते नारदनुते नारायण मन:प्रिये ।
 

तुलसी मृत्तिकाधारण मंत्र – ತುಲಸೀ ಮೃತ್ತಿಕಾಧಾರಣ ಮಂತ್ರ –

 ललाटे यस्य दृश्यते तुलसीमूलमृत्तिका ।
 यमस्तं नेक्षितुं शक्त: दूता भयंकरा: ।
ಲಲಾಟೇ ಯಸ್ಯ ದೃಶ್ಯತೇ ತುಲಸೀಮೂಲಮೃತ್ತಿಕಾ |
ಯಮಸ್ತಂ ನೇಕ್ಷಿತುಂ ಶಕ್ತ: ದೂತಾ ಭಯಂಕರಾ: |

ತುಲಸೀಮಾಲಾಧಾರಣ ಮಂತ್ರ – तुलसीमालाधारण मंत्र –

ತುಲಸೀಕಾಷ್ಟಸಂಭೂ:ತೇ ಮಾಲೇ ಕೃಷ್ಣಜನಪ್ರಿಯೇ |
ಬಿಭರ್ಮಿ ತ್ವಾಮಹಂ ಕಂಠೇ ಕುರು ಮಾಂ ಕೃಷ್ಣವಲ್ಲಭಂ |
तुलसीकाष्टसंभू:ते माले कृष्णजनप्रिये ।
बिभर्मि त्वामहं कंठे कुरु मां कृष्णवल्लभं ।
 

तुलसि अर्घ्यमंत्र: ತುಲಸಿ ಅರ್ಘ್ಯಮಂತ್ರ:

श्रिय: प्रिये श्रीयावासे नित्यं श्रीधरवल्लभे ।
भक्त्यादत्तं मयार्घ्यं हि तुलसि प्रतिगृह्यतां ।
ಶ್ರಿಯ: ಪ್ರಿಯೇ ಶ್ರೀಯಾವಾಸೇ ನಿತ್ಯಂ ಶ್ರೀಧರವಲ್ಲಭೇ |
ಭಕ್ತ್ಯಾದತ್ತಂ ಮಯಾರ್ಘ್ಯಂ ಹಿ ತುಲಸಿ ಪ್ರತಿಗೃಹ್ಯತಾಂ |
 

ತುಲಸ್ಯಾಹರಣ ಮಂತ್ರ  तुलस्याहरण मंत्र

ತುಲಸ್ಯಮೃತಜನ್ಮಾಸಿ ಸದಾ ತ್ವಂ ಕೇಶವಪ್ರಿಯೇ |
ಕೇಶವಾರ್ಥೇ ಚಿನೋಮಿ ತ್ವಾಂ ಕ್ಷಮಸ್ವ ಹರಿವಲ್ಲಭೇ |
तुलस्यमृतजन्मासि सदा त्वं केशवप्रिये ।
केशवार्थे चिनोमि त्वां क्षमस्व हरिवल्लभे ।
 

नवविध तुलसी पूजा ನವವಿಧ ತುಲಸೀ ಪೂಜಾ

दृष्ट्वा स्पृष्ट्वा स्मृत्वा ध्यात्वा नामत: स्तुता ।
रूपिता सेचिता नित्यं पूजिता तुलसी शुभा ।
ದೃಷ್ಟ್ವಾ ಸ್ಪೃಷ್ಟ್ವಾ ಸ್ಮೃತ್ವಾ ಧ್ಯಾತ್ವಾ ನಾಮತ: ಸ್ತುತಾ |
ರೂಪಿತಾ ಸೇಚಿತಾ ನಿತ್ಯಂ ಪೂಜಿತಾ ತುಲಸೀ ಶುಭಾ |

ತುಳಸಿಯ ಮಹಾಮಹಿಮೆ 

ಯಾ ದೃಷ್ಟಾ ನಿಖಿಲಾಘಸಂಘಶಮನೀ ಸ್ಪೃಷ್ಟ್ವಾ ವಪು: ಪಾವನೀ 
ರೋಗಾಣಾಂ ಅಭಿವಂದಿತಾ ನಿರಸನೀ ಸಿಕ್ತಾಂತಕತ್ರಾಸಿನೀ |
ಪ್ರತ್ಯಾಸತ್ತಿವಿಧಾಯಿನೀ ಭಗವತ: ಕೃಷ್ಣಸ್ಯ ಸಂರೋಪಿತಾ
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮ: ||
ತುಳಸಿಗೆ ನಮಸ್ಕರಿಸಬೇಕು – ಆ ತುಳಸಿಯು ಏನೇನು ಮಾಡತಕ್ಕಂತವಳು ಎಂಬುದನ್ನು ಈ ಶ್ಲೋಕ ಹೇಳುತ್ತದೆ –
ತನ್ನ ದರ್ಶನಮಾತ್ರದಿಂದ ಸಕಲಪಾಪಗಳ ಹಿಂಡನ್ನೇ ಪರಿಹರಿಸುತ್ತದೆ.
ತನ್ನ ಸ್ಪರ್ಶನದಿಂದ ಇಡೀ ದೇಹವನ್ನೇ ಪಾವನಗೊಳಿಸುತ್ತದೆ

ವಂದನೆ ಮಾತ್ರದಿಂದ ಸಕಲರೋಗಗಳನ್ನೂ ಗುಣಪಡಿಸುತ್ತದೆ.
ಪ್ರೋಕ್ಷಣದಿಂದ ಯಮನ ಭಯವನ್ನು ಪರಿಹರಿಸುತ್ತದೆ
ಮನೆಯಲ್ಲಿ ಬೆಳೆಸುವುದರಿಂದ ಭಗವಂತನಾದ ಶ್ರೀ ಕೃಷ್ಣನಲ್ಲಿ ಭಕ್ತಿಯನ್ನು ಕರುಣಿಸುತ್ತದೆ
ತುಳಸಿಯನ್ನು ಪರಮಾತ್ಮನ ಪಾದಕಮಲದಲ್ಲಿ ಸಮರ್ಪಣದಿಂದ ಮುಕ್ತಿ ಫಲವನ್ನು ನೀಡುತ್ತದೆ.

ತುಳಸಿಯನ್ನು ಕೀಳಬಾರದ ದಿನಗಳು :

ಕವಿ ಮಂಗಳವಾರ ವೈಧೃತಿ ವ್ಯತೀಪಾತ
ರವಿಶಶಿಯ ಸಂಗಮ ಪರ್ವಣಿ ಪುಣ್ಯಕಾಲ
ದಿವಸ ದ್ವಾದಶಿ ಶ್ರೇಷ್ಠ ಉಪರಾಗ
ಪಿತೃಶ್ರಾದ್ಧ ಇವುಗಳಲಿ ತೆಗೆಯದಿರಿ |
ನವವಸನ ಪೊದ್ದು ಊಟವ ಮಾಡಿ ತಂಬೂಲ
ಸವಿಯುತ್ತ ಮುಟ್ಟದಿರಿ ಯುವತಿ ಶ್ರೂದ್ರರಿಂ ತರಿ-
ಸುವುದುಚಿತವಲ್ಲವೆಂದು ತಿಳಿದು ಕೊಂಡಾಡುತಿರು
ದಿವಸ ದಿವಸಗಳೊಳಯ್ಯ 
 

Sannidhana of different devataas in Tulasi – 

In Tulasi, there is sannidhana of various Tirthaas like Pushkara, Ganga, etc.   Brahma Rudra and Vishnu all do have their sannidhana,  There is Surya, All Grahaas, Vishve devate, Ashta vasu, Manus, Rushees, Vidyaadharaas, Gandharvaas, Siddaas, Kinnaraas, kimpurushaas, apsare, in each leaves.    Srihari leaves in the centre of Tulasi leaf, where as Brahma and Rudra leaves in the two corners of the tulasi leaf.    Similarly Mahalakshmi, Sarswathi, Gayatri, Shachi, etc. , Indra, Agni, Yama, Niruti, VaruNa, kubera, vaayu, etc.,
It is said that Hanumaan crossed the sea only after doing the vandana of Tulasi.    Nandeeshwara got the opportunity of worshipping Rudra only after did the pooja of Tulasi.   Padmapurana says that pooja without Tulasi is not pooja at all.  Snaana without Tulasi Mruttika is not snaana.,    Any daana given must be supported by Tulasi only.
Garuda Purana says even though Tulasi is dry, it can be used for pooja.


ತುಲಸೀಪ್ರದಕ್ಷಿಣೆ ಮಾಡುವಾಗ ಹೇಳಬೇಕಾದ ಮಂತ್ರ –

ತುಲಸೀಲಾನನಂ ಯತ್ರ ಯತ್ರ ಪದ್ಮವನಾನಿ ಚ |
ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿ: |
ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾ: ಸರಿತಸ್ತಥಾ |
ವಾಸುದೇವಾದಯೋ ದೇವಾ ವಸಂತಿ ತುಲಸೀವನೇ |
ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಂ |
 

तुलसीलाननं यत्र यत्र पद्मवनानि च ।
वसंति वैष्णवा यत्र तत्र सन्निहितो हरि: ।
पुष्कराद्यानि तीर्थानि गंगाद्या: सरितस्तथा ।
वासुदेवादयो देवा वसंति तुलसीवने । 
प्रसीद तुलसीदेवि प्रसीद हरिवल्लभे ।
क्षीरोद मथनोद्भूते तुलसि त्वां नमाम्यहं ।
 

Prohibited days for plucking Tulasi –

ಸಂಕ್ರಾಂತೌ ಪಕ್ಷಯೋರಂತೇ ದ್ವಾದಶ್ಯಾಂ ನಿಶಿ ಸಂಧ್ಯಯೋ : |
ತುಲಸೀಂ ಯೇ ವಿಚಿಂನ್ವಂತಿ ವಿಚಿನ್ವಂತಿ ಹರೇ: ಶಿರ: ||
How to pluck the Tulasi leaves –
a. Bath should be taken,
b. Achamana to be done,
c. Water to be poured at the roots of Tulasi.
d. Then Prarthana to be done to Tulasi
e. Tulasi after plucking to be kept in a vessel
f.  Tulasi should not be washed. But Flowers must be washed

Importance of Tulasi as per various puranas  

As per Shiva purana on Dwadashi, sankramana period, both eclipses, Sundays, Fridays – Tulasi should not be gathered from the trees. Tulasi should not be plucked from the tree by wearing cloth on the head, or with chappals on the feet, or with unclean body stage.
As per Lingapurana, Puja should not be done without Tulasi.
As per Garuda Purana, Tulasi is the supreme amongst all the flowers.  Tulasi is mandatory.    Tulasi to be brought by self preferably.  However, if brought by others, only fifty percent phala is obtained.
As per Brahma Purana, there is none equal to Tulasi.  Puja performed to Srihari without Tulasi has no use at all.  Even when Tulasi is unavailable, atleast dry sticks of Tulasi should be offered after nirmalya visarjana.    If even the Tulasi stick is also unavailable, then atleast the name “Tulasi” should be pronounced.


Vishnu Purana states that the darshan of Tulasi will bring and would give all phalas equivalent to taking bath in all sacred and holy thirthas.  When the japa is made of the mantras relating to Srihari with Tulasi Kashta Japamala, then the phala would be ten times more than the usual phala.
Naradeeya Purana states that one who collects and does puja to Srihari reciting Vishnu Sahasra Nama would get the kingdom itself.  The number of Tulasi leaves that are submitted on the shira (head) of Srihari during puja, the devotee would live so much thousand of years.
Agneya Purana states that one who does smarana of Tulasi, Vishnu and Ganga and do the puja, would definitely reach Vaikunta.
Skanda Purana states that one who remembers Tulasi and does the puja would attain “Saarupya Moksha”  and would not be born again.
Bhavishyat Purana states that the recital of the names Srihari, Tulasi would provide jnanam and bhakthi.  All our sins would be destgroyes.
Brahma Vaivarta purana states that one who tender Tulasi to Sri Krishna paramathma would be granted Saayujya Moksha.
Markandeya Purana states that the person who has Tulasimala in his neck and who chants Srihari nama with his tongue – would never be in trouble from Kali.   and he will never be disturbed by the servants of Yamadharma.

Vamana Purana states that in the roots of Tulasi all the sacred Tirthas reside.  In the middle, all devatas reside.  At the tip of the Tulasi, all the vedas are there and for such Tulasi namaskaras are to be submitted.
Varaha Purana states that Varaha devaru to worshipped with devotion by Tulasi leaves.  There is no birth for a devotee who does dhyana of Sri Varaha and Tulasi.  Whoever does Puja without Tulasi being used in the puja, has to live in the hells for one manvantara.
Brahmanda Purana states that whoever does puja to Srihari with one hundred Tulasi leaves, his punya is undescribable.    He would be clearing off crores of sins like Brahmahatya and other henious crimes.
Vishnu Rahasya states Bath to be taken early in the morning before sunrise and Gayathri Japa to be done.  Then Srihari to be worshipped by pooja with Tulasi leaves.  Such devotee would reach Saayujya roopa moksha.

ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವ ದೇವತಾ: |
ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಂ |

ಎಲ್ಲಿ ತುಳಸಿಯ ವನವು
ಅಲ್ಲೊಪ್ಪುವರು ಸಿರಿನಾರಾಯಣನು | ಪ |
ಗಂಗೆಯಮುನೆ ಗೋದಾವರಿ ಕಾವೇರಿ
ಕಂಗೊಳಿಸುವ ಮಣಿಕರ್ಣಿಕೆಯು |
ತುಂಗಭದ್ರೆ ಕೃಷ್ಣವೇಣಿತೀರ್ಥಗಳೆಲ್ಲ
ಸಂಗಡಿಸುತ ವ್ರುಕ್ಷಮೂಲದಲ್ಲಿರುವುವು | ೧ |
ಸರಸಿಜಭವ ಸುರಪ ಪಾವಕ ಚಂ-
ದಿರ ಸೂರ್ಯ ಮೊದಲಾದವರು |
ಸಿರಿರಮಣನ ಆಜ್ಞೆಯಲಿ ಅಗಲದಂತೆ
ತರುಮದ್ಯದೊಳು ನಿತ್ಯನೆಲೆಸಿಪ್ಪರು | ೨ |
ಋಗ್ವೇದ ಯಜುರ್ವೇದ ಸಾಮ ಅಥರ್ವಣ
ಅಗ್ಗಳಿಸಿ ವೇದ ಘೋಷಗಳು |
ಅಗ್ರಭಾಗದಲಿದೆ ಬೆಟ್ಟದೊಡೆಯನು ಅಲ್ಲಿ
ಶೀಘ್ರದಿ ಒಲಿದ ಶ್ರೀಪುರಂದರವಿಠಲ | ೩ | 

ದಾಸರು ತುಳಸಿಯ ಮೂಲದಲ್ಲಿ ಸಕಲ ತೀರ್ಥಾಭಿಮಾನಿಗಳಾದ ಗಂಗಾ, ಯುಮುನ, ಗೋದಾವರಿ, ಕಾವೇರಿ, ಮಣಿಕರ್ಣಿಕಾ, ತುಂಗ, ಭದ್ರಾ, ಕೃಷ್ಣವೇಣಿ, ಮುಂತಾದ ಸಕಲ ನದ್ಯಭಿಮಾನಿಗಳು ನೆಲೆಸಿರುವರು ಎಂದಿದ್ದಾರೆ. ಪ್ರತಿನಿತ್ಯ ತುಳಸಿ ಗಿಡದಮೂಲಕ್ಕೆ ಭಕ್ತಿಯಿಂದ ನೀರು ಉಣಿಸಿದಲ್ಲಿ ಸಕಲ ತೀರ್ಥಗಳ ದರ್ಶನ, ಸ್ನಾನ ಪುಣ್ಯ ಪ್ರಾಪ್ತಿಯಾಗುತ್ತದೆ.
ಎರಡನೇ ಪದ್ಯದಲ್ಲಿ ಬ್ರಹ್ಮದೇವರು (ಸರಸಿಜಭವ), ರುದ್ರ (ಭವ), ಇಂದ್ರ (ಸುರಪ), ಅಗ್ನಿ (ಪಾವಕ), ಸೂರ್ಯಚಂದ್ರರ ಸನ್ನಿಧಾನವಿದೆ. ಗಿಡದ ಮಧ್ಯದಿ ಸಕಲ ಭಗವಂತನ ಅನುಚರ ದೇವತೆಗಳು ಸನ್ನಿಹಿತರಾಗಿರುತ್ತಾರೆ ಎಂದಿದ್ದಾರೆ.
ಮೂರನೇ ನುಡಿಯಲ್ಲಿ ತುಳಸಿಯ ಅಗ್ರದಲ್ಲಿ ಋಗಾದಿ ಚತುರ್ವೇದಾಭಿಮಾನಿಗಳು ನಿತ್ಯವೂ ಶ್ರೀಹರಿಯ ಸ್ತುತಿಸುತಲಿಹರು, ಅಗ್ರಭಾಗದಲ್ಲಿ ಶ್ರೀಹರಿಯು ಸ್ವತ: ಲಕ್ಷ್ಮೀಸಹಿತನಾಗಿ ನೆಲೆಸಿಹನೆಂದಿದ್ದಾರೆ.
ಹೀಗೆ ತುಳಸಿಯ ಪೂಜೆಯಿಂದ ಸಕಲ ಅಭೀಷ್ಟಗಳೂ ಪೂರೈಸುವುವು ಎಂಬುದು ತಾತ್ಪರ್ಯ

ಸಂಗ್ರಹ - ನರಹರಿ ಸುಮಧ್ವ     Mobile - 9042729165
****

ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುವರು. ಇದನ್ನು ಕಿರು ದೀಪಾವಳಿ ಎಂದೂ ಕರೆಯುತ್ತಾರೆ. ಈ ದಿನ ತುಳಸಿ ಕಟ್ಟೆ /ಬೃಂದಾವನವನ್ನು ಅಲಂಕಾರ ಮಾಡುತ್ತಾರೆ. ತುಳಸಿಯ ಗಿಡದ ಜೊತೆ ನಲ್ಲಿಕಾಯಿ ಗಿಡವನ್ನು ಇಟ್ಟು ಪೂಜೆ ಮಾಡುತ್ತಾರೆ. ತುಳಸಿಯು ಶ್ರೀ ಕೃಷ್ಣನನ್ನು ಈ ದಿನ ವಿವಾಹ ಆದಳು ಎಂಬ ನಂಬಿಕೆ ಇದೆ. ಆದ್ದರಿಂದ ತುಳಸಿಯ ಜೊತೆ ಕೃಷ್ಣನ ಪಟ ಇಟ್ಟು , ಇಬ್ಬರಿಗೂ ಪೂಜೆ ಮಾಡುತ್ತಾರೆ. ನಲ್ಲಿಕಾಯಿಯಲ್ಲಿ ತುಪ್ಪದ ಆರತಿ ಮಾಡುತ್ತಾರೆ. 

ಪೂಜಾ ವಿಧಾನ

ಪೂಜೆ ಎಂದರೆ ಹಲವಾರು ವಿಧಿ-ವಿಧಾನಗಳು, ಮಂತ್ರಗಳು ,ಇವುಗಳ ತಲೆ-ಬುಡ ಗೊತ್ತಿಲ್ಲ ಅಂತ ಪೇಚಾಡುತ್ತ ಇದ್ದೀರಾ. ಈ ಗೊಂದಲದಲ್ಲಿ ಸಿಕ್ಕಿ ಹಾಕಿಕೊಳ್ಳ ಬೇಕಿಲ್ಲ. ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ , ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು ಅಷ್ಟೆ.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು.
ಸಂಕಲ್ಪ 
ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು. ಸಂಕಲ್ಪ ಮಂತ್ರ ಇಲ್ಲಿದೆ
ಧ್ಯಾನ 
ನೀವು ಪೂಜೆ ಮಾಡುತ್ತಿರುವ ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ ಮಾಡುವುದು.

ಪೂಜಾ ಸಂಕಲ್ಪ ಮಂತ್ರ

.ಶುಭೇ ಶೋಭನೇ ಮುಹೂರ್ತೇ
ಆದ್ಯಬ್ರಹ್ಮಣಃ,  ದ್ವಿತೀಯ ಪರಾರ್ಧೇ, ಶ್ವೇತ ವರಾಹ ಕಲ್ಪೇ, ಅಷ್ಟಾವಿಂಶತಿ ಚತುರ್ಯುಗೇ, ಕಲಿಯುಗೇ, ಪ್ರಥಮ ಚರಣೇ (ಪಾದೇ ), ಜಂಬೂ ದ್ವೀಪೇ,  ಭರತ ವರ್ಷೇ, ಭರತ ಖಂಡೇ, ಗೋದಾವರ್ಯಾಃ, ದಕ್ಷಿಣೆ ತೀರೇ,  ಅಸ್ಮಿನ್ ವರ್ತಮಾನೇ,ಬೌದ್ಧಾವತಾರೇ,ಶ್ರೀರಾಮಕ್ಷೆತ್ರೇ,ವ್ಯಾವಹಾರಿಕೇ, ಶಾಲೀವಾಹನಶಖೇ, ಚಾಂದ್ರಮಾನೇ, ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇಸ್ವಸ್ತಿ ಶ್ರೀ ----ನಾಮ ಸಂವತ್ಸರೇ, (ಉತ್ತರಾ/ದಕ್ಷಿಣಾ) ----ಯನೇ, ------ಋತೌ-------- ಮಾಸೇ (ಶುಕ್ಲ/ಕೃಷ್ಣ) ----ಪಕ್ಷೇ, --------ತಿಥೌ ( ... ತಿಥಿಯಾಂ) -------ವಾಸರೇ -----ನಕ್ಷತ್ರೇ -----ಯೋಗೆ -----ಕರಣೆ -ಏವಂಗುಣ ವಿಶಿಷ್ಟಾಯಾಂ ಶುಭ ವಾಸರ  ಯುಕ್ತಾಯಾಂ ಶುಭನಕ್ಷತ್ರ ಶುಭತಿಥೌ
 
(ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೋ ದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ .....ನಾಮ ಸಂವತ್ಸರೇ, ಉತ್ತರಾಯನೇ/ದಕ್ಷಿಣಾಯನೇ ,... ಋತೌ , .... ಮಾಸೇ ,ಶುಕ್ಲ/ಕೃಷ್ಣ ಪಕ್ಷೇ , ... ತಿಥಿಯಾಂ , ... ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ,

ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ ವಿಜಯ ವೀರ್ಯ ಅಭಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ ದುರಿತೋಪಶಾಂತ್ಯರ್ಥಂ ಸಮಸ್ತ ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ....(ದೇವರ ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ.

ಸಾಮಾನ್ಯವಾಗಿ ಷೋಡಶೋಪಚಾರದಿಂದ ಪೂಜೆ ಮಾಡಿ ಅಂತ ನೀವು ಕೇಳಿರಬಹುದು. ಷೋಡಶ ಅಂದರೆ 16. ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ ಎಂದರ್ಥ. ಇವುಗಳ ವಿವರ ಕೆಳಗಿದೆ: 

1.ಆವಾಹನೆ - ಅಂದರೆ ಆಹ್ವಾನ . ದೇವರನ್ನು ನಿಮ್ಮ ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ ಆಹ್ವಾನ ಮಾಡುವುದು.

2.ಆಸನ - ಅಂದರೆ ಕುಳಿತುಕೊಳ್ಳುವ ಜಾಗ . ದೇವರ ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಆಸೀನ ಮಾಡಿಸುವುದು.

3.ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.

4.ಅರ್ಘ್ಯ - ಕೈ ತೊಳೆದುಕೊಳ್ಳುವುದಕ್ಕೆ ನೀರು ಕೊಡುವುದು.

5.ಆಚಮನ - ಕುಡಿಯುವುದಕ್ಕೆ ನೀರು ಕೊಡುವುದು.

6.ಸ್ನಾನ - ಶುದ್ಧೋದಕ (ನೀರು) ಮತ್ತು ಪಂಚಾಮೃತದಿಂದ ಸ್ನಾನ ಮಾಡಿಸುವುದು.

7.ವಸ್ತ್ರ - ಧರಿಸಲು ಉಡುಪು ಕೊಡುವುದು . ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ ಉಪವೀತ (ಜನಿವಾರ), ಆಭರಣವನ್ನು (ಬಳೆ-ಬಿಚ್ಚೋಲೆ )ಸಮರ್ಪಿಸುವುದು.

8.ಹರಿದ್ರ, ಕುಂಕುಮ, ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ , ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.

9.ಪುಷ್ಪ ಮಾಲ - ಹೂವು, ಪತ್ರೆಗಳಿಂದ ದೇವರಿಗೆ ಅಲಂಕಾರ ಮಾಡುವುದು.

10. ಅರ್ಚನೆ/ಅಷ್ಟೋತ್ತರ - ನೂರೆಂಟು ನಾಮಗಳಿಂದ ದೇವರನ್ನು ಸ್ಮರಣೆ ಮಾಡುವುದು.

11.ಧೂಪ - ಪರಿಮಳಯುಕ್ತವಾದ ಧೂಪವನ್ನು ಅರ್ಪಿಸುವುದು.

12.ದೀಪ - ದೀಪ ಸಮರ್ಪಣೆ ಮಾಡುವುದು.

13.ನೈವೇದ್ಯ, ತಾಂಬೂಲ - ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ ಅರ್ಪಿಸುವುದು . ಊಟದ ನಂತರ ವೀಳೆಯ, ಅಡಿಕೆ, ತೆಂಗಿನಕಾಯಿ ತಾಂಬೂಲ ಕೊಡುವುದು.

14. ನೀರಾಜನ - ಕರ್ಪುರದಿಂದ ಮಂಗಳಾರತಿ ಮಾಡುವುದು.

15. ನಮಸ್ಕಾರ - ಪ್ರದಕ್ಷಿಣೆ ಮಾಡಿ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು.

16. ಪ್ರಾರ್ಥನೆ - ನಿಮ್ಮ ಇಷ್ಟಗಳನ್ನು ನಡೆಸಿ ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ ಮಾಡುವುದು. ಪೂಜೆಯ ನಂತರದೇವರು ಅನುಗ್ರಹಿಸಿರುವ ಅರಿಶಿನ, ಕುಂಕುಮ, ನೈವೇದ್ಯವನ್ನು ಪ್ರಸಾದ ರೂಪವಾಗಿ ಸ್ವೀಕಾರ ಮಾಡುವುದು.
-from ಸರಳ ಪರಿಹಾರ
***
ತುಳಸೀ ಅಷ್ಟೋತ್ತರಶತ ನಾಮಾವಳಿಃ

ಓಂ ಶ್ರೀ ತುಲಸ್ಯೈ ನಮಃ
ಓಂ ನಂದಿನ್ಯೈ ನಮಃ
ಓಂ ದೇವ್ಯೈ ನಮಃ
ಓಂ ಶಿಖಿನ್ಯೈ ನಮಃ
ಓಂ ಧಾರಿಣ್ಯೈ ನಮಃ
ಓಂ ಧಾತ್ರ್ಯೈ ನಮಃ
ಓಂ ಸಾವಿತ್ರ್ಯೈ ನಮಃ
ಓಂ ಸತ್ಯಸಂಧಾಯೈ ನಮಃ
ಓಂ ಕಾಲಹಾರಿಣ್ಯೈ ನಮಃ
ಓಂ ಗೌರ್ಯೈ ನಮಃ    || ೧೦ ||
ಓಂ ದೇವಗೀತಾಯೈ ನಮಃ
ಓಂ ದ್ರವೀಯಸ್ಯೈ ನಮಃ
ಓಂ ಪದ್ಮಿನ್ಯೈ ನಮಃ
ಓಂ ಸೀತಾಯೈ ನಮಃ
ಓಂ ರುಕ್ಮಿಣ್ಯೈ ನಮಃ
ಓಂ ಪ್ರಿಯಭೂಷಣಾಯೈ ನಮಃ
ಓಂ ಶ್ರೇಯಸ್ಯೈ ನಮಃ
ಓಂ ಶ್ರೀಮತ್ಯೈ ನಮಃ
ಓಂ ಮಾನ್ಯಾಯೈ ನಮಃ
ಓಂ ಗೌತಮಾರ್ಚಿತಾಯೈ ನಮಃ || ೨೦ ||
ಓಂ ತ್ರೇತಾಯೈ ನಮಃ
ಓಂ ತ್ರಿಪಥಗಾಯೈ ನಮಃ
ಓಂ ತ್ರಿಪಾದಾಯೈ ನಮಃ
ಓಂ ತ್ರೈಮೂರ್ತ್ಯೈ ನಮಃ
ಓಂ ಜಗತ್ರಯಾಯೈ ನಮಃ
ಓಂ ತ್ರಾಸಿನ್ಯೈ ನಮಃ
ಓಂ ಗಾತ್ರಾಯೈ ನಮಃ
ಓಂ ಗಾತ್ರಿಯಾಯೈ ನಮಃ
ಓಂ ಗರ್ಭವಾರಿಣ್ಯೈ ನಮಃ
ಓಂ ಶೋಭನಾಯೈ ನಮಃ  || ೩೦ ||
ಓಂ ಸಮಾಯೈ ನಮಃ
ಓಂ ದ್ವಿರದಾಯೈ ನಮಃ
ಓಂ ಆರಾಧ್ಯೈ ನಮಃ
ಓಂ ಯಜ್ಞವಿದ್ಯಾಯೈ ನಮಃ
ಓಂ ಮಹಾವಿದ್ಯಾಯೈ ನಮಃ
ಓಂ ಗುಹ್ಯವಿದ್ಯಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕುಲಾಯೈ ನಮಃ
ಓಂ ಶ್ರೀಯೈ ನಮಃ
ಓಂ ಭೂಮ್ಯೈ ನಮಃ  || ೪೦ ||
ಓಂ ಭವಿತ್ರ್ಯೈ ನಮಃ
ಓಂ ಸಾವಿತ್ರ್ಯೈ ನಮಃ
ಓಂ ಸರ್ವವೇದವಿದಾಂವರಾಯೈ ನಮಃ
ಓಂ ಶಂಖಿನ್ಯೈ ನಮಃ
ಓಂ ಚಕ್ರಿಣ್ಯೈ ನಮಃ
ಓಂ ಚಾರಿಣ್ಯೈ ನಮಃ
ಓಂ ಚಪಲೇಕ್ಷಣಾಯೈ ನಮಃ
ಓಂ ಪೀತಾಂಬರಾಯೈ ನಮಃ
ಓಂ ಪ್ರೋತ ಸೋಮಾಯೈ ನಮಃ
ಓಂ ಸೌರಸಾಯೈ ನಮಃ || ೫೦ ||
ಓಂ ಅಕ್ಷಿಣ್ಯೈ ನಮಃ
ಓಂ ಅಂಬಾಯೈ ನಮಃ
ಓಂ ಸರಸ್ವತ್ಯೈ ನಮಃ
ಓಂ ಸಂಶ್ರಯಾಯೈ ನಮಃ
ಓಂ ಸರ್ವ ದೇವತ್ಯೈ ನಮಃ
ಓಂ ವಿಶ್ವಾಶ್ರಯಾಯೈ ನಮಃ
ಓಂ ಸುಗಂಧಿನ್ಯೈ ನಮಃ
ಓಂ ಸುವಾಸನಾಯೈ ನಮಃ
ಓಂ ವರದಾಯೈ ನಮಃ
ಓಂ ಸುಶ್ರೋಣ್ಯೈ ನಮಃ  || ೬೦ ||
ಓಂ ಚಂದ್ರಭಾಗಾಯೈ ನಮಃ
ಓಂ ಯಮುನಾಪ್ರಿಯಾಯೈ ನಮಃ
ಓಂ ಕಾವೇರ್ಯೈ ನಮಃ
ಓಂ ಮಣಿಕರ್ಣಿಕಾಯೈ ನಮಃ
ಓಂ ಅರ್ಚಿನ್ಯೈ ನಮಃ
ಓಂ ಸ್ಥಾಯಿನ್ಯೈ ನಮಃ
ಓಂ ದಾನಪ್ರದಾಯೈ ನಮಃ
ಓಂ ಧನವತ್ಯೈ ನಮಃ
ಓಂ ಶೋಚಮನಸ್ಯಾಯೈ ನಮಃ
ಓಂ ಶುಚಿನ್ಯೈ ನಮಃ  ||  ೭೦ ||
ಓಂ ಶ್ರೇಯಸ್ಯೈ ನಮಃ
ಓಂ ಪ್ರೀತಿಚಿಂತೇಕ್ಷಣಾಯೈ ನಮಃ
ಓಂ ವಿಭೂತ್ಯೈ ನಮಃ
ಓಂ ಆಕೃತ್ಯೈ ನಮಃ
ಓಂ ಆವಿರ್ಭೂತ್ಯೈ ನಮಃ
ಓಂ ಪ್ರಭಾವಿನ್ಯೈ ನಮಃ
ಓಂ ಗಂಧಿನ್ಯೈ ನಮಃ
ಓಂ ಸ್ವರ್ಗಿನ್ಯೈ ನಮಃ
ಓಂ ಗದಾಯೈ ನಮಃ
ಓಂ ವೇದ್ಯಾಯೈ ನಮಃ || ೮೦ ||
ಓಂ ಪ್ರಭಾಯೈ ನಮಃ
ಓಂ ಸಾರಸ್ಯೈ ನಮಃ
ಓಂ ಸರಸಿವಾಸಾಯೈ ನಮಃ
ಓಂ ಸರಸ್ವತ್ಯೈ ನಮಃ
ಓಂ ಶರಾವತ್ಯೈ ನಮಃ
ಓಂ ರಸಿನ್ಯೈ ನಮಃ
ಓಂ ಕಾಳಿನ್ಯೈ ನಮಃ
ಓಂ ಶ್ರೇಯೋವತ್ಯೈ ನಮಃ
ಓಂ ಯಾಮಾಯೈ ನಮಃ
ಓಂ ಬ್ರಹ್ಮಪ್ರಿಯಾಯೈ ನಮಃ  || ೯೦ ||
ಓಂ ಶ್ಯಾಮಸುಂದರಾಯೈ ನಮಃ
ಓಂ ರತ್ನರೂಪಿಣ್ಯೈ ನಮಃ
ಓಂ ಶಮನಿಧಿನ್ಯೈ ನಮಃ
ಓಂ ಶತಾನಂದಾಯೈ ನಮಃ
ಓಂ ಶತದ್ಯುತಯೇ ನಮಃ
ಓಂ ಶಿತಿಕಂಠಾಯೈ ನಮಃ
ಓಂ ಪ್ರಯಾಯೈ ನಮಃ
ಓಂ ಧಾತ್ರ್ಯೈ ನಮಃ
ಓಂ ಶ್ರೀವೃಂದಾವನ್ಯೈ ನಮಃ
ಓಂ ಕೃಷ್ಣಾಯೈ ನಮಃ || ೧೦೦ ||
ಓಂ ಭಕ್ತವತ್ಸಲಾಯೈ ನಮಃ
ಓಂ ಗೋಪಿಕಾಕ್ರೀಡಾಯೈ ನಮಃ
ಓಂ ಹರಾಯೈ ನಮಃ
ಓಂ ಅಮೃತರೂಪಿಣ್ಯೈ ನಮಃ
ಓಂ ಭೂಮ್ಯೈ ನಮಃ
ಓಂ ಶ್ರೀಕೃಷ್ಣಕಾಂತಾಯೈ ನಮಃ ‌                                   
ಓಂ ಶ್ಯಾಮಸುಂದರಾಯೈ ನಮಃ                       
 ಓಂ ಭೂಲೋಕಾಮೃತರೂಪಾಯೈ ನಮಃ 

ಇತಿ ಶ್ರೀ ತುಳಸೀ ಅಷ್ಟೋತ್ತರಶತನಾಮಾವಳಿಃ ಸಂಪೂರ್ಣಂ
***

ತುಳಸಿ ಹಬ್ಬ - 

ವೃಂದಾವನವೆ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ || ಪ ||

ನಂದನಂದನ ಮುಕುಂದಗೆ ಪ್ರಿಯಳಾದ ಚಂದದ ಶ್ರೀ ತುಳಸೀ || ಅ.ಪ ||

ತುಳಸಿಯ ವನದಲಿ ಹರಿ ಇಹನೆಂಬುದ ಶ್ರುತಿ ಸಾರುತಿದೆ ಕೇಳಿ
ತುಳಸಿ ದರ್ಶನದಿಂದ ದುರಿತಗಳೆಲ್ಲವೂ ದೂರವಾಗುವುವು ಕೇಳಿ |
ತುಳಸಿ ಸ್ಪರ್ಶವ ಮಾಡೆ ದೇಹ ಪಾವನವೆಂದು ತಿಳಿದುದಿಲ್ಲವೆ ಪೇಳಿ
ತುಳಸಿ ಸ್ಮರಣೆ ಮಾಡಿ ಸಕಲೇಷ್ಟವ ಪಡೆದು ಸುಖದಲಿ ಬಾಳಿ ನೀವು || ೧ ||

ಮೂಲ ಮೃತ್ತಿಕೆಯನು ಮುಖದಲಿ ಧರಿಸಲು ಮೂರ್ಲೋಕ ವಶವಹುದು
ಮಾಲೆ ಕೊರಳಲ್ಲಿಟ್ಟ ಮನುಜಗೆ ಮುಕ್ತಿಯ ಮಾರ್ಗವ ತೋರುವುದು |
ಕಾಲಕಾಲಗಳಲ್ಲಿ ಮಾಡುವ ದುಷ್ಕರ್ಮ ಕಳೆದು ಬಿಸಾಡುವುದು
ಕಾಲಕಾಲಗಳಲ್ಲಿ ಮಾಡುವ ದುಷ್ಕರ್ಮ ಕಳೆದು ಬಿಸಾಡುವುದು
ಕಾಲನ ದೂತರ ಕಳಚಿ ಕೈವಲ್ಯದ ಲೀಲೆಯ ತೋರುವುದು || ೨ ||

ಧರೆಯೊಳು ಸುಜನರ ಮರೆಯದೆ ಸಲಹುವ ವರಲಕ್ಷ್ಮೀ ಶ್ರೀ ತುಳಸಿ
ಪರಮಭಕ್ತರ ಘೋರಪಾಪಗಳನು ತರಿದು ಪಾವನ ಮಾಡುವ ಶ್ರೀ ತುಳಸಿ |
ಸಿರಿ ಆಯು ಪುತ್ರಾದಿ ಸಂಪದಗಳನಿತ್ತು ಹರುಷಗೊಳಿಪ ತುಳಸಿ
ಪುರಂದರವಿಠಲನ ಚರಣ ಕಮಲವ ಸ್ಮರಣೆ ಕೊಡುವಳು ತುಳಸಿ ||

ಈ ದೇವರನಾಮದಲ್ಲಿ ಶ್ರೀ ಪುರಂದರದಾಸರು ತುಳಸಿಯ ಮಹಾತ್ಮೆಯನ್ನು ಶ್ರುತಿವಾಕ್ಯ ರೀತ್ಯ ವರ್ಣಿಸಿದ್ದಾರೆ.
ತುಳಸಿಯ ದರ್ಶನ, ಸ್ಪರ್ಶನ, ಸ್ಮರಣೆ, ಧಾರಣ, ವಂದನ, ಉಪಾಸನೆ, ಮುಂತಾದವುಗಳಿಂದ ಶ್ರೀಹರಿಯು ಒಲಿವನೆಂದು ಹೇಳುತ್ತಾರೆ.
 
ವಾದಿರಾಜರು ತುಳಸಿಯ ಬಗ್ಗೆ :
ಒಂದು ಪ್ರದಕ್ಷಿಣವನು ಮಾಡಿದವರ
ಹೊಂದುಪುದು ಭೂಪ್ರದಕ್ಷಿಣ ಪುಣ್ಯ
ಎಂದೆಂದಿವಳ ಸೇವಿಪ ನರರಿಗೆ
ಇಂದಿರೆಯರಸ ಕೈವಲ್ಯವೀವ ||

ವಿಜಯದಾಸರು ತುಳಸಿಯ ಬಗ್ಗೆ :
ಉದಯಕಾಲದೊಳೆದ್ದು ಆವನಾದರೂ ತನ್ನ
ಹೃದಯ ನಿರ್ಮಲನಾಗಿ ಭಕುತಿ ಪೂರ್ವಕದಿಂದ
ಸದಮಲಾ ತುಳಸಿಯನು ಸ್ತೋತ್ರ ಮಾಡಿದ
ಕ್ಷಣಕೆ ಮದಗರ್ವ ಪರಿಹಾರವೂ
ಇದೆ ತುಳಸಿ ಸೇವಿಸಲು ಪೂರ್ವದಲಿ ಕಾವೇರಿ
ನದಿಯ ತೀರದಲ್ಲೊಬ್ಬ ಭೂಸುರ ಪದಕೆ ಪೋದ
ಪದಪದೆಗೆ ಸಿರಿ ವಿಜಯವಿಠಲಗೆ
ಪ್ರಿಯಳಾದ ಮದನತೇಜಳ ಭಜಿಸಿರಯ್ಯಾ

Paramathma is residing in 5317 roopas in Tulasi as per Harikathamruthasara vibhuti sandhi shloka 8
ಮೂರೆರಡು ಸಾವಿರದ ಮೇಲ ಮುನ್ನೂರು 
ಹದಿನೇಳು ಎನಿಪ ಶ್ರೀತುಳಸೀದಳದಿ |

Tulasi & Sri Surendra Tirtharu –
Once Sri Vyuasarajaru was performing pooja and he took the golden vessel in which Tulasi leaves were there.  He took Tulasi leaves in his hand for archana but did not submit to the Srihari saying that they are nirmalya.  The Shishya who had brought the leaves fresh from the tulasi plant was surprised and shocked to hear this.  After the pooja, Vyasarajaru asked that shishya as to tell from which place he had brought.  Then Vyasarajaru went to the Tulasi vana where the Tulasi leaves were plucked.  There he saw Sri Surendra Tirtharu, the guru of Sri Vijayeendra Tirtharu doing paatha – pravachana.  He realised that the entire Tulasi leaves were offered by Surendra Tirtharu already.  As such, it had become nirmalya.


Tulasi & Sri Satyavara Tirtharu –

Sri Satyavara Tirtharu had offered one crore Tulasi leaves to Mula Ramachandradevaru in the presence of Sri Satyabodha Tirtharu.
(Source  :
Mahimas of Vanabhojana by Sri T S Raghavendran
pavitra Tulasi by Sri Vyasanakere Prabhanjanacharya,
Haridaasa vaahini)
ನರಹರಿ ಸುಮಧ್ವ 
ಸುಮಧ್ವಸೇವಾ
***

ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬ

ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುವರು. ಈ ದಿನ ತುಳಸಿ ಕಟ್ಟೆ /ವೃಂದಾವನವನ್ನು ಅಲಂಕಾರ ಮಾಡುತ್ತಾರೆ. ತುಳಸಿಯ ಗಿಡದ ಜೊತೆ ನಲ್ಲಿಕಾಯಿ ಗಿಡವನ್ನು ಇಟ್ಟು ಪೂಜೆ ಮಾಡುತ್ತಾರೆ. ತುಳಸಿಯು ಶ್ರೀ ಕೃಷ್ಣನನ್ನು ಈ ದಿನ ವಿವಾಹ ಆದಳು ಎಂಬ ನಂಬಿಕೆ ಇದೆ. ಯೋಗ ನಿದ್ರೆಯಲ್ಲಿರುವ ಶ್ರೀಮಹಾವಿಷ್ಣುವು ಈ ದಿನ ಎಚ್ಚರಗೊಂಡು ತುಳಸಿಯ ಸಾನಿಧ್ಯದಲ್ಲಿ ಪೂಜೆಯನ್ನು ಪಡೆಯುತ್ತಾನೆ. ಆದ್ದರಿಂದ ತುಳಸಿಯ ಜೊತೆ  ಕೃಷ್ಣನ ಮೂರ್ತಿ ಅಥವ ಸಾಲಿಗ್ರಾಮಗಳನ್ನು ಇಟ್ಟು ಪೂಜೆ ಮಾಡುತ್ತಾರೆ, ನೆಲ್ಲಿಕಾಯಿಯಲ್ಲಿ ತುಪ್ಪದ ಆರತಿ ಮಾಡುತ್ತಾರೆ. ತುಳಸಿ ಸಾನಿಧ್ಯದಲ್ಲಿ ಹಾಲಿನಿಂದ
 ಅರ್ಘ್ಯವನ್ನು ಕೊಟ್ಟು ಉತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ ನೆಂದು ಪರಮಾತ್ಮನನ್ನು ಎಚ್ಚರಗೊಳಿಸುವ ಪ್ರಕ್ರಿಯೆಯು ಇಲ್ಲಿ ಇದೆ.

ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುವರು. ಇದನ್ನು ಕಿರು ದೀಪಾವಳಿ ಎಂದೂ ಕರೆಯುತ್ತಾರೆ. ಈ ದಿನ ತುಳಸಿ ಕಟ್ಟೆ /ಬೃಂದಾವನವನ್ನು ಅಲಂಕಾರ ಮಾಡುತ್ತಾರೆ. ತುಳಸಿಯ ಗಿಡದ ಜೊತೆ ನಲ್ಲಿಕಾಯಿ ಗಿಡವನ್ನು ಇಟ್ಟು ಪೂಜೆ ಮಾಡುತ್ತಾರೆ. ತುಳಸಿಯು ಶ್ರೀ ಕೃಷ್ಣನನ್ನು ಈ ದಿನ ವಿವಾಹ ಆದಳು ಎಂಬ ನಂಬಿಕೆ ಇದೆ. ಆದ್ದರಿಂದ ತುಳಸಿಯ ಜೊತೆ ಕೃಷ್ಣನ ಪಟ ಇಟ್ಟು , ಇಬ್ಬರಿಗೂ ಪೂಜೆ ಮಾಡುತ್ತಾರೆ. ನಲ್ಲಿಕಾಯಿಯಲ್ಲಿ ತುಪ್ಪದ ಆರತಿ ಮಾಡುತ್ತಾರೆ.

ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, ನಲ್ಲಿಕಾಯಿ ಗಿಡ ಉಪಯೋಗಿಸುತ್ತಾರೆ. ಗಣಪತಿ ಪೂಜೆ ಮಾಡಿ ನಂತರ ತುಳಸಿ ಪೂಜೆ ಮಾಡಬೇಕು . 

ತುಳಸಿ ಸ್ತೋತ್ರ

ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವದೇವತಾ|
ಯದಾಗ್ರೆ ಸರ್ವ ವೇದಶ್ಚ ತುಳಸಿ ತ್ವಂ ನಮಾಮ್ಯಹಂ||

ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸೀ ಗಿಡಕ್ಕೆ ತುಂಬ ಪ್ರಾಮುಖ್ಯತೆ ಇದೆ. ತುಳಸೀ ದರ್ಶನದಿಂದ ಪಾಪ ಪರಿಹಾರ, ಸ್ಪರ್ಶದಿಂದ ಪವಿತ್ರತೆ , ರೋಗ ಪರಿಹಾರ, ಪ್ರೋಕ್ಷಿಸಿದರೆ ಆಯಸ್ಸು ವೃದ್ಧಿ, ಸಸಿಯನ್ನು ನೆಡುವುದರಿಂದ ಶ್ರೀ ಕೃಷ್ಣನ ಸಾನ್ನಿಧ್ಯ ಲಭ್ಯ, ಅರ್ಚಿಸಿ ಪೂಜಿಸಿದರೆ ಮೋಕ್ಷ ಸಿಗುತ್ತದೆ ಎಂದು ಸನಾತನ ಧರ್ಮ ಹೇಳುತ್ತದೆ. ಹೀಗಾಗಿ ಎಲ್ಲರ ಮನೆಯಲ್ಲೂ ತುಳಸಿ ಗಿಡವನ್ನುಬೆಳೆಸುತ್ತಾರೆ. ಅದಕ್ಕೆ ದಿನ ಪೂಜೆ, ಪ್ರದಕ್ಷಿಣೆ , ನಮಸ್ಕಾರ ಮಾಡುತ್ತಾರೆ.
***


another version for madhwas
........................॥ॐ॥....................

ಗಣಾನಾಂತ್ವಾ ಗಣಪತಿಂ ಹವಾಮಹೇ 
ಕವಿಂಕವೀನಾಮುಪಮಶ್ರ ವಸ್ತಮಂ।
ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ 
ಆನ:ಶೃಣ್ವನ್ನೂತಿಭಿ: ಸೀದಸಾದನಂ ॥

ಶ್ರೀ ಕಾತೀ೯ಕ ರಾಧಾ ದಾಮೋದರ ಪ್ರೀತ್ಯಥ೯೦
ನಮಸ್ತೇ ಸವ೯ಲೋಕಾನಾಂ 
ಜನನ್ಯೈ ಪುಣ್ಯಮೂತ೯ಯೇ।
ನಮಸ್ತೇ ದೇವಿ ಕಲ್ಯಾಣಿ ನಮಸ್ತೇ ಮುನಿಪುಜಿತೆ ॥ 

          * ಶ್ರೀ ತುಳಸಿ ಮಹಾತ್ಮೆ *
----------------------------------------------------
ಶ್ರೀ ತುಳಸಿ ದೇವಿ ಮಹಾತ್ಮೆ ಅವತಾರ ದೇವತೆಗಳು ದೈತ್ಯರು ಸಮುದ್ರಮಥನ ಕಾಲದಲ್ಲಿ ,ಐರಾವತ ಮೊದಲಾದ (ಹದಿನಾಲ್ಕು) ರತ್ನಗಳು ಉದ್ಭವವಾದವು.
 ಈ ಸಂದರ್ಭದಲ್ಲಿ ಅಮೃತವೂ ಹುಟ್ಟಿತು .ಅದನ್ನು ಕಂಡಾಗ ಶ್ರೀ ಕೃಷ್ಣ ಪರಮಾತ್ಮ ಅಮೃತ ಕಲಶದಲ್ಲಿ ಆನಂದ ಭಾಷ್ಪ ಸುರಿಸಿದ. ಇದರಿಂದ ತುಳಸಿ ದೇವಿ ಅವತಾರ ಆಯಿತು ,ಎಂದು ಪುರಾಣಗಳಿಂದ ಉಲ್ಲೇಖ ತಿಳಿಯುವುದು .

ಹಿಂದೊಮ್ಮೆ ಶ್ರೀಕೃಷ್ಣನ ತುಲಾಭಾರ ಸಂದರ್ಭದಲ್ಲಿ ರುಕ್ಮಿಣಿದೇವಿ ಒಂದು ತುಳಸಿ ದಳವನ್ನು ಹಾಕಿ ತುಲಾಭಾರ ಪೂರ್ಣ ಮಾಡಿದಳು.
 ಆಗ ತುಳಸಿಗೆ ತುಲನೀಯವಾದುದು( ಸಮಾನವಾದುದು) ಯಾವುದು ಇಲ್ಲ ಎಂದು ನಿರ್ಣಯವಾಯಿತು. ಆದ್ದರಿಂದ ಈ ಹೆಸರು ಎಂದು ಬ್ರಹ್ಮ ವೈವರ್ತ ಪುರಾಣ ದಲ್ಲಿ ಉಲ್ಲೇಖ ಲಭ್ಯ .

 ಶ್ರೀ ತುಳಸಿ ಪೂಜಾ :
ಕಾರ್ತಿಕ ಶುದ್ಧ ದ್ವಾದಶಿ ತಿಥಿ ಶ್ರೀ ವಿಷ್ಣುಯೋಗ  ನಿದ್ರೆಯಿಂದ ಎಳುತ್ತಾನೆ .ಆ ದಿನ ಉತ್ಥಾನ ದ್ವಾದಶಿ ಎಂದು ಕರೆಯುತ್ತಾರೆ .ತುಳಸಿಯೂ ಕಾರ್ತಿಕ ಮಾಸದಲ್ಲಿ ಅವತರಿಸಿದ್ದರಿಂದ ,ಕಾರ್ತಿಕ ದ್ವಾದಶಿ ವಿವಾಹ ನಡೆಯುವ ವಾಡಿಕೆ .
ನೆಲ್ಲಿಕಾಯಿಗೆ ಧಾತ್ರಿ ಎನ್ನುತ್ತಾರೆ ,ತುಳಸಿ ಎಲ್ಲಿ ಇದೆಯೋ ಅಲ್ಲಿ ಶ್ರೀಹರಿ ಸನ್ನಿಧಾನ.

 ತುಳಸಿಯಲ್ಲಿ ಪ್ರಕಾರಗಳು :( ವಿಧಗಳು) 
---------------------------------------------------
 ಶ್ರೀ ತುಳಸಿಯಲ್ಲಿ ನಾವು ಆರು, ಏಳು,  ವಿಧಗಳನ್ನು ಕಾಣಬಹುದು.
 ಶ್ರೀ ತುಳಸಿ .
ಕ್ಷುದ್ರ ಪತ್ರ .
ಬಿಲ್ವ ಗಂಧ.
 ವವ೯ರಿ.
ರಕ್ತ  ತುಳಸಿ. 
 ಕೃಷ್ಣ ತುಳಸಿ.
ರಾಮ ತುಳಸಿ .
ಎನ್ನುವ ಪ್ರಭೇದಗಳನ್ನು ನಾವು ಕಾಣಬಹುದು.

 * ನಿತ್ಯ ತುಳಸಿ ಪೂಜಾ ವಿಧಾನ ಇದೆ .* 
----------------------------------------------
 ಪ್ರಾರ್ಥನೆ :

ತನ್ಮೂಲೇ ಸವ೯ತೀಥಾ೯ನೀ 
 ತನ್ಮಧ್ಯೆ ಸರ್ವದೇವತಾಂ 
ತದಾಗ್ರೇ  ಸರ್ವ ವೇದಶ್ಚ 
ತುಳಸೀತ್ವಾಂ ನಮಾಮ್ಯಹಂ.॥ 

 ತುಳಸಿ ತೆಗೆಯುವ ಮಂತ್ರ :
ಶ್ರೀಯ : ಪ್ರಿಯೇ ಶ್ರೀಯಾವಾಸೇ 
ನಿತ್ಯಂ ಶ್ರೀಧರ ವಲ್ಲಭೆ 
ಭಕ್ತ್ಯಾ ದತ್ತಂ ವಯಾಟಿಘ್ಯ೯ ಹಿ 
 ತುಳಸಿ ಪ್ರತಿಗೃಹ್ಯತಾಂ.॥ 
 ಹೇ ದೇವಿ ದೇವರ ಪೂಜೆಗಾಗಿ ನಿನ್ನ ಸಂಗ್ರಹ ಅಂತ ಪ್ರಾರ್ಥಿಸಬೇಕು .

 ವಿಧಾನ : 
ಉಗುರು ಹತ್ತಬಾರದು.
 ದ್ವಿದಳ .
ತ್ರಿದಳ, 
 ಎಡಗೈ ಸ್ಪರ್ಶವಿಲ್ಲದೆ, ತಾಮ್ರ ಪಾತ್ರೆಯಲ್ಲಿ ಸಂಗ್ರಹಿಸಬೇಕು .
ನಿಷೇಧ ದಿನಗಳು :
ಸಂಕ್ರಮಣ ,
ಹುಣ್ಣಿಮೆ ,
ಅಮಾವಾಸ್ಯೆ ,
ದ್ವಾದಶಿ ತಿಥಿ ,
ರಾತ್ರಿ ಕಾಲ,
ಸಂಧ್ಯಾಕಾಲ,
 ಗ್ರಹಣ ಸಮಯ ,
ಇವು ವಜ್ಯ೯ ಸಮಯಗಳು .

ಶ್ರೀ ಇಂದಿರಾಪತಿ ದಾಮೋದರ ದೇವ ಈ ಮಾಸದ ನಿಯಾಮಕ ಅಧಿಪತಿ .
ಕಾರ್ತಿಕ ಮಾಸದಲ್ಲಿ  ಶ್ರೀ ತುಳಸಿ ದಾಮೋದರ ವಿವಾಹದ ನಂತರ ವಿವಾಹ ಮುಹೂರ್ತಗಳು ಲಭಿಸುವವು.
 ಸ್ಕಂದಪುರಾಣದಲ್ಲಿ ಶ್ರೀ ನಾರದರ ವಚನ : 

ತುಳಸೀಕಾಷ್ಠ  ಸಂಭೂತೇ  ಮಾತೇ 
 ಕೃಷ್ಣ ಜನಪ್ರಿಯೆ।
ಬಿಭಮಿ೯ತ್ವಾ ಮಹಂ  ಕಂಠೇ 
ಕುರುಮಾಂ  ಕೃಷ್ಣ ವಲ್ಲಭಾಂ ॥ 

   ವಿಧಿವತ್ತಾಗಿ ಶ್ರೀವಿಷ್ಣುವಿಗೆ ಅರ್ಪಿಸಿದ, ತುಳಸಿ ಮಾಲೆಯನ್ನು ಧರಿಸಿದರೆ ವಿಷ್ಣುಪದ  ಪ್ರಾಪ್ತಿ. 
ನಿರ್ಣಯ ಸಿಂಧುವಿನಲ್ಲಿ ಉಲ್ಲೇಖವಿದೆ.

ಎಲ್ಲಾ ಸಾಧನವಿದ್ದು ಶ್ರೀ ತುಳಸಿ ಇಲ್ಲದ ಪೂಜೆ, ವಲ್ಲನೊ ಹರಿ ಕೊಳ್ಳನೊ 
 ಎಂದು ದಾಸವಾಣಿ .ದೇವರ ಪೂಜೆ ,
ಪಿತೃ ಪೂಜೇ,ಮಾಡುವಾಗ ತುಳಸಿ ಮಾಲೆ ಧಾರಣೆ ಬೇಕು.

 ಇನ್ನು ಶ್ರೀ ತುಳಸಿಯ ಅನಂತ ನಾಮಗಳನ್ನು ನೋಡಿದಾಗ:
------------------------------------------------------------------
 ಸಂಸ್ಕೃತದಲ್ಲಿ ,
ತುಳಸಿ ,
ಸುಲಭಾ,
ಸುರನಾ ,
ಬಹುಮಂಜರಿ,
ಶೂ  ಲಕ್ಷ್ಮಿ, 
ದೇವ ದುಂದುಭಿ,
ಪಾವನಿ ,
ವಿಷ್ಣುಪ್ರಿಯಾ,
 ದಿವ್ಯ ,
ಭಾರತಿ ,
  ಹೀಗೆ ಅನೇಕ ನಾಮಗಳಿಂದ ಸಂಬೋಧಿಸುವರು.

* ಶ್ರೀ ತುಳಸಿಯ ಔಷಧೀಯ ಗುಣಗಳನ್ನು ನೋಡಿದಾಗ : * 
--------'-------------------------------------------------------
ತುಳಸಿಯದುವಿಶಿಷ್ಟ ಸುವಾಸನೆ,  ಅನೇಕ ಔಷಧಿ ಗುಣ ಹೊಂದಿದೆ. ಔಷಧಿ ವಲಯದಲ್ಲಿ ಇದರ ಬೇಡಿಕೆ ಅಧಿಕ ಹೊರದೇಶಗಳಲ್ಲಿಯೂ ಇದರ ಬೇಡಿಕೆಯಿದೆ.
 ಆಯುರ್ವೇದದಲ್ಲಿಯೂ ಅನೇಕ ರೀತಿಯ ಚಿಕಿತ್ಸೆಗೆ ಇದರ ಬಳಕೆ ಮಾಡುವರು .
ಯುರೋಪಿನಲ್ಲಿ ಆಹಾರವಾಗಿ ಬಳಸುತ್ತಾರೆ .ಇದು ಕೀಟನಾಶಕ ಗುಣವನ್ನು ಹೊಂದಿದೆ ,ಇನಫೆಕ್ಷನ್  ತಡೆಗಟ್ಟುವುದು.  ರೋಗ ಪ್ರತಿರೋಧಕ ಶಕ್ತಿ ವೃದ್ಧಿಗೆ ಪೂರಕ ಫಲಕಾರಿ. ಯ್ಯಾಂಟಿಬೆಕ್ಟೇರಿಯಲ್ಲ,  ಯಾಂಟಿವೈರಲ್,  ಯಾಂಟಿಸೆಪ್ಟಿಕ,   ಆಗಿಯೂ ಇದನ್ನು ಬಳಸುವರು.
ಈಜಿಪ್ತಿನಲ್ಲಿ ಆಹಾರ ಪದಾರ್ಥ ಕೆಡದಂತೆ ರಕ್ಷಿಸಲು ಇದರ ಬಳಕೆ ಉಂಟು,
 ತುಳಸಿತೈಲ  ನರರೋಗಕ್ಕೆ  ಉತ್ತಮ ಔಷಧೀಯ ಗುಣ ಹೊಂದಿರುವದು.ಒತ್ತಡ ಖಿನ್ನತೆ ನಿವಾರಕವೂ ಹೌದು ,ಶ್ವಾಸ ಸಂಬಂಧಿ ಜ್ವರ ನಿವಾರಕ ಹಾಗೂ ನೆಗಡಿಗೆ ಉಪಯುಕ್ತ ಔಷಧ ವಿದು.  ಬಹುಮುಖಿ ಗುಣಕಾರಿ ಸ್ವಭಾವ ತುಳಸಿ ಗುಣಧರ್ಮ.
 *
*  ವಾಸ್ತು ಪ್ರಕಾರ ತುಳಸಿ ಮನೆಯಲ್ಲಿ ಪ್ರತಿಷ್ಠಾಪನೆ:** 
‐--------------------------------------------------------------
1) ನೈರುತ್ಯ ಭಾಗ ಶ್ರೇಷ್ಠ ಎತ್ತರದ ಸ್ಥಳದಲ್ಲಿ ಸ್ಥಾಪಿಸಬೇಕು .
2) ಪೂರ್ವ ಮುಖ ದ್ವಾರದಲ್ಲಿ ಮನೆಯ ಆಗ್ನೇಯ ಪೂರ್ವದಲ್ಲಿ ಸೂಕ್ತ .
3) ಮೂರನೆಯ ಭಾಗ, ಪಶ್ಚಿಮ ನೈರುತ್ಯ ಭಾಗ ಮಧ್ಯಮ .
4) ಉತ್ತರ ವಾಯುವ್ಯ ಭಾಗ ಮಧ್ಯಮ .
5) ಈಶಾನ್ಯ ಆರೋಗ್ಯ ಹಾನಿ.
6) ದಕ್ಷಿಣ ಹಾಗೂ ಪಶ್ಚಿಮ ಭಾಗ ಮನೆಯಲ್ಲಿ ಗಿಡಗಳನ್ನು ನಡುವುದು ಸೂಕ್ತ,

 * ಇನ್ನು ಮರಗಳು ಹಗಲು ಇಂಗಾಲವನ್ನು ಗ್ರಹಿಸಿ ರಾತ್ರಿ ಸಮಯ ಆಮ್ಲಜನಕ ಗ್ರಹಿಸುವವು,  ಆದರೆ ತುಳಸಿ ಮಾತ್ರ ಹಗಲು ಹಾಗೂ ರಾತ್ರಿ ಪ್ರಾಣ ವಾಯುವನ ಬಿಡುವುದು.

ವೃಕ್ಷ ಗಳಲ್ಲಿಯೂ ಜೀವ ಇದೆ :
ಅನೇಕ ವೃಕ್ಷಗಳು ಹಾಗೂ ಸಸ್ಯಗಳು ಔಷಧೀಯ ಗುಣ ಹೊಂದಿವೆ .
ಬನ್ನಿಮರ,
ಆಲದಮರ,
ತೆಂಗು,( ಕಲ್ಪವೃಕ್ಷ ಉಪನಾಮ )
ಸತ್ವಗುಣ ಪ್ರಭಾವಿಗಳು.

 ಜಾಲಿ ಗಿಡ,
ಡಬಗೊಳ್ಳಿ ಗಿಡ,
ಪಾಥೆ೯ನಿಯಂ ಕಳೆ, 
ಈ ಅನೇಕ ಕಳೆಗಳು ತಾಮಸಿ ಜೀವಿಗಳು. 

 ಶ್ರೀತುಳಸಿ ಸಾಕ್ಷಾತ್ ಲಕ್ಷ್ಮೀಸಾನಿಧ್ಯ ಇದರಲ್ಲಿ ಹೊಂದಿದ್ದಾಳೆ.
ಶ್ರೀ ತುಳಸಿ ಪೂಜೆಯಿಂದ ದಾರಿದ್ರ ನಾಶ ಆಗುವುದು, ಜ್ಞಾನ, ಭಕ್ತಿ ,ವೈರಾಗ್ಯ ,ಲಭಿಸುವುದು .ದುಷ್ಟಶಕ್ತಿ ದೃಷ್ಟಿ ದೋಷ ನಿವಾರಕ ವಿದು, ಶುಭ ಫಲಕಾರಿ.

 ತುಳಸಿಯಲ್ಲಿ ಸಕಲ ವೇದಾಭಿಮಾನಿ ದೇವತೆಗಳೂ, ಸ್ತ್ರೀ ಶ್ರವಣಿ ಕರು ನಿತ್ಯದಲ್ಲಿಯೂ ವಾಸಿಸುತ್ತಾರೆ.

 ತುಳಸಿ ಮೃತ್ತಿಕಾ  ಧಾರಣೆಯಿಂದ ಆ ದೇವತೆಗಳ ಅನುಗ್ರಹ ವನ್ನು ಸುಲಭದಲ್ಲಿ ಸಂಪಾದಿಸಬಹುದು.

 ಸ್ತ್ರೀಯರಲ್ಲಿ ವಿಶೇಷ ಬಾಲಗ್ರಹ ಪೀಡೆಯನ್ನು ಉಂಟುಮಾಡುವ ಬಾಲಗ್ರಹ ಪೀಡಾ  ಬಾಧಿಸುವುದಿಲ್ಲ.
 ಸ್ತ್ರೀಯರಲ್ಲಿ ಗರ್ಭನಿರೋಧಕ ದುಷ್ಟಶಕ್ತಿಗಳ ದೋಷ ಪರಿಹಾರವಾಗುವುದು .
ತುಳಸಿ ಪೂಜೆಯಿಂದ ಚರ್ಮದಲ್ಲಿ ಕಾಂತಿ ಬರುವುದು. 

 ಪ್ರದಕ್ಷಣೆ ನಮಸ್ಕಾರ ಫಲ : 
-------------------------------------
ಒಂದು ಪ್ರದಕ್ಷಿಣೆ ನಮಸ್ಕಾರ ಹಾಕಿದರೆ ಪಾಪ ಖಂಡನ ವಾಗುವುದು .
ಎರಡು ಪ್ರದಕ್ಷಿಣೆ ಕುಂದದ ಭಾಗ್ಯ ಲಭ್ಯ .
ಮೂರು ಪ್ರದಕ್ಷಿಣೆ ಮುತ್ತೈದೆತನ ಭಾಗ್ಯ .
 ನಾಲ್ಕು ಪ್ರದಕ್ಷಿಣೆ ಹಾಕಿದರೆ ನಾರಾಯಣ ಲೋಕ ಪ್ರಾಪ್ತಿ ವಾಸ .
  ಐದು ಪ್ರದಕ್ಷಿಣೆ ಹಾಕಿದರೆ ಅಯೋಧ್ಯಾಪುರದಲ್ಲಿ ಸೀತಾದೇವಿಯ ಚರಣಸೇವೆ ಮಾಡಿದ ಪುಣ್ಯ ಬರುವುದು. 

ತನ್ಮೂಲೆ ಸರ್ವ ತೀರ್ಥಾನಿ 
ತನ್ಮಧ್ಯೆ ಸರ್ವದೇವತಾಂ।
ತದಾಗ್ರೇ ಸವ೯ವೇದಶ್ಚ 
ತುಲಸೀತ್ವಾಂ ನಮಾಮ್ಯಹಂ ॥

 ॥ ಶ್ರೀ ಗುರುಮಧ್ವಾಂತಗ೯ತ ಶ್ರೀ ಕೃಷ್ಣಾಪ೯ಣ 
 ನಮಸ್ತು ॥ 
( ಶ್ರೀ ಮಧ್ವತನಯ ರಾಘವ ಹುನಗುಂದ ಗ್ರಾಮ)
(ವಿವಿಧ ಮೂಲಗಳಿಂದ ಸಂಗ್ರಹ. )
**********


another version

ಉತ್ಥಾನ ದ್ವಾದಶಿ ಮಹತ್ವ ಮತ್ತು ತುಲಸೀವಿವಾಹವಿಧಿ

ಚಾತುರ್ಮಾಸ್ಯದಲ್ಲಿ ಆಷಾಢಶುಕ್ಲ ಏಕಾದಶಿಯoದು ಮಲಗಿದಂತೆ ನಟಿಸಿದ ಭಗವಂತನು ಭಾದ್ರಪದ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಮಗ್ಗಲು ಬದಲಿಸುವನು.ಕಾರ್ತೀಕ ಮಾಸದ ಶುಕ್ಲಪಕ್ಷದ ದ್ವಾದಶಿ ಯಂದು ಭಗವಂತನು ಏಳುವನು ಇದನ್ನೇ ಉತ್ಥಾನದ್ವಾದಶೀ ಎಂದು ಕರೆಯುವರು ದ್ವಿದಳವ್ರತ ಮತ್ತು ಚಾತುರ್ಮಾಸ್ಯದ ಸಮಾಪ್ತಿಯು ಇಂದೇ.

ಪ್ರಭೋಧಿನೀ ದ್ವಾದಶೀ ಮಹಾತ್ಮೇ

ಶುಕ್ಲಕಾರ್ತೀಕಮಾಸಸ್ಯ  ದ್ವಾದಶ್ಯಾo ಪರಮೋತ್ಸವಂ
ಪ್ರಾತರಾರಭ್ಯ ಯಃ ಕುರ್ಯಾತ್ ಸ್ನಾನದಾನದಿಕಂ ತಥಾ |
ದ್ವಾದಶೀ ಪುಣ್ಯದಾ ಪ್ರೋಕ್ತಾ ಸರ್ವಪಾಪೌಘನಾಶಿನೀ ||

ಪ್ರಭೋಧಿನಿ ದ್ವಾದಶಿಯಂದು ಪ್ರಾತಃಕಾಲದಲ್ಲಿ ಸ್ನಾನ ಮಾಡಿ ಶುದ್ಧವಾದ ವಸ್ತ್ರವನ್ನು ಧರಿಸಿ ನಂತರ ನಿತ್ಯ ನೈಮಿತ್ತಿಕ ಕಾರ್ಯಗಳನ್ನು ಮುಗಿಸಿ ದಾಮೋದರನನ್ನು ನಾನಾವಿಧ ಪುಷ್ಪ ತುಲಸೀ ಧಾತ್ರೀ ಇವುಗಳಿoದ ಪೂಜಿಸಬೇಕು.ಧಾತ್ರೀ ದೀಪಗಳನ್ನು ಬೆಳಗಬೇಕು ನಾನಾವಿಧ ಭಕ್ಷ್ಯಗಳ ಜೊತೆ ಸೂಪ(ತೊವ್ವೆಯನ್ನು)ವನ್ನು ಮಾಡಿ ನಿವೇದಿಸಬೇಕು.

ಯಸ್ತಸ್ಯ ಸೂಪನೈವೇದ್ಯಂ ನ ದದಾತಿ ನರಾಧಮಃ
ನರಕೇ ನಿಯತಂ ಪಾಪಃ ಭವತೀತ್ಯನುಶುಶ್ರಮ  ||

ಉತ್ಥಾನ ದ್ವಾದಶಿಯಂದು ಬ್ರಾಹ್ಮಣಭೋಜನವನ್ನು ಮಾಡಿಸಬೇಕು. ಧಾತ್ರಿಯ ನೆರಳಿನಲ್ಲಿ ಯಾರು ಕಾರ್ತೀಕ ದಾಮೋದರನನ್ನು ಪೂಜಿಸುರೋ ಅವನ ಪುಣ್ಯಕ್ಕೆ ಇತಿ ಮಿತಿಯಿಲ್ಲ ಕಾರ್ತೀಕದಲ್ಲಿ ಧಾತ್ರಿಯ ಹಾಗೂ ತುಲಸಿಯ ಮಹಿಮೆಯನ್ನು ಶ್ರವಣ ಮಾಡಿದರೊ .ಮಹಿಮೆಯನ್ನು ವರ್ಣಿಸಿದರೊ ಸಂಸಾರದಿoದ ಮುಕ್ತಿ.ವಿಷ್ಣುವಿಗೇ ಧಾತ್ರೀ ಹಾಗೂ ತುಲಸಿಯು ಅತ್ಯoತ ಪ್ರೀತಿಕರಗಳಾಗಿವೆ.

ಉತ್ತಿಷ್ಠೋತಿಷ್ಠ ಗೋವಿoದ ತ್ಯಜ ನಿದ್ರಾಂ ಜಗತ್ಪತೇ  |
ತ್ವಯಿ ಸೂಪ್ತೇ ಜಗನ್ನಾಥ ಜಗತ್ಸುಪ್ತಂ ಭವೇದಿದಂ |
ಉತ್ಥಿತೇ ಸರ್ವಮುತ್ತಿಷ್ಥೇತ್ ಉತ್ತಿಷ್ಠೋತ್ತಿಷ್ಠ ಮಾಧವ. ||

ಇಯಂ ತು ದ್ವಾದಶೀದೇವ ಪ್ರಭೋದಾರ್ಥಂ ವಿನಿರ್ಮೀತಾ
ತ್ವಯೈವ ಸರ್ವಲೋಕಾನಂ ಹಿತಾರ್ಥಂ ಶೇಷಶಾಯಿನಾ ||

ಹೀಗೆ ಪರಮಾತ್ಮನನ್ನು ಪ್ರಾರ್ಥಿಸಿ ಅರ್ಘ್ಯವನ್ನು ಕೂಡಬೇಕು  ಇದಂ ವಿಷ್ಣುರ್ವಿಚಕ್ರಮೆ ಎಂದು ವಿಷ್ಣುಸೂಕ್ತವನ್ನು ಪಠಿಸಿ ಭಗವಂತನನ್ನು ಏಳಲು ಪ್ರಾರ್ಥಿಸಬೇಕು.

ತುಲಸೀ ವಿವಾಹವಿಧಿ

ಉತ್ಥಾನದ್ವಾದಶಿಯಂದು ಸಂಜೆ ವೃoದಾವನದಲ್ಲಿ ತುಲಸೀ ಹಾಗೂ ದಾಮೋದರನ ವಿವಾಹೊತ್ಸವವನ್ನು ಮಾಡಬೇಕು.
ಮಹಾರಾಜೋಪಚಾರವನ್ನು ಮಾಡಬೇಕು. 

ದ್ವಾದಶ್ಯಾಂ ಕಾರ್ತಿಕೇಮಾಸೀ ರಾತ್ರೌ ವೃoದಾವನೇ ಶುಭೇ ಪೂಜಯೇತ್

ತುಲಸೀ ವಿವಾಹ ಸಂಕಲ್ಪ

ಶುಭತಿಥೌ-ಭಾರತೀರಮಣ

ಮುಖ್ಯಪ್ರಾಣಾಂತರ್ಗತ

ಶ್ರೀಕಾರ್ತೀಕ ದಾಮೋದರ ಫ್ರೆರಣಯಾ ಪ್ರೀತ್ಯರ್ಥಂ ಪ್ರಭೋಧೋತ್ಸವಂಂ ತಥಾ ತುಲಸೀ ದಾಮೋದರ ವಿವಾಹo ಚ ಕರಿಷ್ಯೇ

ಹೀಗೆ ಸಂಕಲ್ಪಿಸಿ ದಾಮೋದರರೂಪಿ ಪರಮಾತ್ಮನಿಗೆ  ಪುರುಷಸೂಕ್ತದಿoದ ಷೋಡಷೋಪಚಾರಪೂಜೆಯನ್ನು  ಮಾಡಬೇಕು  ಹಾಗೆಯೇ ಶ್ರೀಸೂಕ್ತದಿಂದ ತುಲಸಿಗೆ ಷೋಡಶೋಪಚಾರಪೂಜೆಯನ್ನು ಮಾಡಬೇಕು.

ಈ ದಿನ ಪ್ರಾತಃಕಾಲದಲ್ಲಿ ಭಗವಂತನಿಗೆ ವಿವಾಹಾoಗಭೂತವಾದ ಅಭ್ಯಂಜನವನ್ನು ಮಾಡಬೇಕು. ಹನುಮಂತದೇವರು ಭಗವಂತನ ಕೈಹಿಡಿದು ಕರೆತಂದು ಪಾದುಕೆಗಳನ್ನು ನೀಡುವರುದ್ರದೇವರು ವೇತ್ರದಂಡವನ್ನು ಹಿಡಿದು ಮುoದೆ ನಿಲ್ಲುವನು. ಸೂರ್ಯ ಚಂದ್ರರು ದೀಪಗಳನ್ನು ಹಿಡಿಯುವರು ಶೇಷನು ದಾರಿಯಲ್ಲಿ ಮರಳುಗಳನ್ನು ದೂರಮಾಡುವನು.

ರಮಾದೇವಿಯು ಭಗವಂತನಿಗೆ ಸುಗಂಧ ತೈಲವನ್ನು ಹಚ್ಚಿ .ಮರ್ಧನಮಾಡುವಳು .ಬ್ರಹ್ಮಾದಿಗಳು ಅಂಗಗಳಿಗೆ ತೈಲವನ್ನು ಲೇಪಿಸುವರು. ದುರ್ಗಾದೇವಿ ,ಸೌಪರ್ಣಿ,ವಾರುಣಿದೇವಿಯರು ನೀರನ್ನು ಕಾಸುವರು. ಇಂದ್ರಶಚೀದೇವಿಯರು ಕಟ್ಟಿಗೆಯನ್ನು ತರುವರು.ಶ್ರೀದೇವಿಯು ಬಿಸಿನೀರಿನಿಂದ ಸ್ನಾನ ಮಾಡಿಸುವಳು ಉಳಿದವರು ಸ್ತೋತ್ರಮಾಡುವರು ಹೀಗೆ ಅನುಸಂಧಾನ ಮಾಡುತ್ತ  ಭಗವಂತನಿಗೆ ತೈಲವನ್ನು ಲೇಪಿಸಿ ಉಷ್ಣೋದಕ ಸ್ನಾನವನ್ನು ಮಾಡಿಸಿ ಪಂಚಾಮೃತಭಿಷೇಕವನ್ನು  ನೈವೇದ್ಯಾದಿಗಳನ್ನು ಮಾಡಿ ತುಲಸೀ ಪೂಜೆಯನ್ನು ಮಾಡಬೇಕು .ಅಂಗಪೂಜೆ ,ಧೂಪ ದೀಪ ನೈವೇದ್ಯಗಳನ್ನು ಅರ್ಪಿಸಿ ನೀರಾಜನವನ್ನು ಮಾಡಬೇಕು.

ವಿವಾಹೋತ್ಸವ:- 

ದಾಮೋದರನ ಪ್ರತಿಮೆಯನ್ನು ತುಲಸಿಯ ಅಭಿಮುಖವಾಗಿ ಇಟ್ಟು  ಅಂತರ್ಪಟವನ್ನು ಹಿಡಿಯಬೇಕು 

ಸತ್ತ್ಯೇನೋತ್ತಭಿತಾ ಭೂಮಿ ಎಂಬ ಸೂರ್ಯ ಸೂಕ್ತವನ್ನು ,ಮಂಗಳಾಷ್ಟಕವನ್ನು ಘಂಟಾನಾದಪೂರ್ವಕಪಠಿಸಬೇಕು. ಅವಕಾಶಕ್ಕೆ ತಕ್ಕoತೆ ಪೂರ್ಣವಾಗಿ ಪಠಿಸಿ  ಮಂಗಳಷ್ಟಕವನ್ನು ಅಂತರ್ಪಟವನ್ನು ಉತ್ತರ ದಿಕ್ಕಿಗೆ ಎಳೆದು.ಮಂತ್ರಾಕ್ಷತೆಯನ್ನು ಭಗವಂತನಿಗೆ ಆರ್ಪಿಸಬೇಕು.

ದಾಮೋದರನ ಹಸ್ತದಲ್ಲಿ ತುಲಸಿಯನ್ನು ಇಟ್ಟು(ಮುಟ್ಟಿಸಿ)ಹೀಗೆ ಪ್ರಾರ್ಥಿಸಬೇಕು.

ಕನ್ಯಾo(ದೇವಿo) ಕನಕಸಂಪನ್ನಾಂ.....ವರವರಾಯ ತುಭ್ಯಮಹಂ ಸಂಪ್ರದೇ

ಈ ಮಂತ್ರವನ್ನು ಹೇಳಿ ಮಂತ್ರಾಕ್ಷತೆ ನೀರನ್ನು ಭಗವಂತನ ಮುoದೆ ಬಿಡಬೇಕು.

ಇಮಾo ದೇವಿo ಪ್ರತಿಗೃಹ್ಣಾತು ಭವಾನ್ ಎಂದು ಪ್ರಾರ್ಥಿಸಬೇಕು ಭಗವಂತನ ಹಸ್ತವನ್ನು ತುಲಸಿಗೇ ಸ್ಪರ್ಶ ಮಾಡಿಸಬೇಕು.ಭಗವಂತನ ಪರವಾಗಿ ಪೂಜಕನೇ ಅಥವ ಆಚಾರ್ಯಾರೆ ಹೀಗೆ ಹೇಳಬೇಕು 

ಕ ಇದಂ ಕಸ್ಮಾ ......ಪೃಥಿವೀ ಪ್ರತಿಗೃಹ್ಣಾತು
ತ್ವಂ ದೇವಿ ಮೇsಗ್ರತೋ.....ತ್ವದ್ದಾನತ್ ಮೋಕ್ಷಮಾಫುನುಯಾಮ್

ದಾನಸ್ಯ ಪ್ರತಿಷ್ಠಾಸಿಧ್ಯಾರ್ಥಂ ಇಮಾಂ ಸೌವರ್ಣಿಂ ದಕ್ಷಿಣಾಂ ಸಂಪ್ರದದೇ ಎಂದು ಹೇಳಿ ಭಗವಂತನ ಮುಂದೆ ದಕ್ಷಿಣೆಯನ್ನು ಅರ್ಪಿಸಬೇಕು.

ಮಾಂಗಲ್ಯಧಾರಣೆ:

ಮಾಂಗಲ್ಯವನ್ನು ತೆಗೆದುಕೊಡು ಪೂಜಿಸಿ

ಮಾಂಗಲ್ಯತಂತುನಾನೇನ ಜಗಜ್ಜೀವನ ಹೇತುನಾ 
ಕoಠೇ ಭಧ್ನಾತಿ ಭಗವಾನ್ ಸರ್ವಲೋಕಹಿತಯಾ ವೈಧ್ರುವಧ್ಯೌಃ ...ರಾಜಾ ವಿಶಾಮಯಮ್

ಭಗವಂತನ ಕೈಯಿಂದ ತುಲಸಿಯ ಕಂಠಕ್ಕೆ ಆಚಾರ್ಯನೇ ಕಟ್ಟುವುದು.
ಇತ್ಯಾದಿ ಮಂತ್ರಗಳನ್ನು ಪಠಿಸಿ ನೀರಾಜನವನ್ನು ಮಾಡುವುದು.

ಶ್ರೀಯೇಜಾತಃ ಶ್ರಿಯ ಜಯತ್ಯಜೋಖಂಡಗುಣೋರು ಮಂಡಲ

ಈ ಮಂತ್ರಗಳಿಂದ ನೀರಾಜನವನ್ನು ಮಾಡಿ ಮಂತ್ರಪುಷ್ಪಗಳನ್ನು ಅರ್ಪಿಸಿ ಪ್ರದಕ್ಷಿಣೆ ನಮಸ್ಕಾರಗಳನ್ನು ಹಾಕಬೇಕು.

ನಮಸ್ತೇ ಸರ್ವಲೋಕೇಶ ನಮಸ್ತೇ ಲೋಕವಂದಿತ
ನಮಸ್ತೇsಸ್ತು ಸದಾ ದೇವ ತ್ರಾಹಿ ಮಾಂ ದುಃಖಸಾಗರಾತ್
ಇದಂ ವ್ರತಂ ಮಯದೇವ  ತವ ಪ್ರೀತ್ಯೇಯೈ ಕೃತಂ ಪ್ರಭೋ
ನ್ಯೂನಂ ಸಂಪೂರ್ಣತಾಂ ಯಾತು ತ್ವತ್ಪ್ರಸಾದಾತ್ ರಮಾಪತೇ
ಯಸ್ಯತ್ಸ್ಮೃತ್ಯಾಚ...ಅನೇನ ಪ್ರಭೋಧೋತ್ಸವೇನ, ಶ್ರೀದಾಮೋದರ- ತುಲಸೀ ವಿವಾಹಾಂಗ ಶ್ರೀದಾಮೋದರ ಷೋಡಶೋಪಚಾರ ಪೂಜಾ  ಕರ್ಮಣಾ ಚ,
ಶ್ರೀಭಗವಾನ್  ಶ್ರೀಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀತುಲಸೀ
ಸಮೇತ ಕಾರ್ತೀಕ ದಾಮೋದರ ಪ್ರಿಯತಾಮ್
ಅನಂತರ ಬ್ರಾಹ್ಮಣರಿಗೆ ಗಂಧ -ಅಕ್ಷತೆ ತಾಂಬೂಲಾದಿಗಳನ್ನು ಕೊಟ್ಟು ವ್ರತವನ್ನು ಭಗವಂತನಿಗೆ ಸಮರ್ಪಿಸಬೇಕು
          || ಶ್ರೀಕೃಷ್ಣಾರ್ಪಣಮಸ್ತು ||

ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್
***********


ಸಂಚಿಕೆ-1

ತುಲಸೀ ಶಬ್ದದ ಅರ್ಥ ತುಲಸಿಯ ಮಹತ್ವ


ಯಸ್ಯಾ ದೇವ್ಯಾಸ್ತುಲಾ ನಾಸ್ತಿ ವಿಶ್ವೇಶು ನಿಖಿಲೇಷು ಚ |
ತುಲಸೀ ಯೇನ  ವಿಖ್ಯಾತ ತಾಂ ಯಾಮಿ ಶರಣಂ ಪ್ರಿಯೇ ||

ವಿಶ್ವದ ಸಕಲ ವೃಕ್ಷಗಳಲ್ಲೂ ಇದಕ್ಕೆ ಸಮನಾದ ಮತ್ತೊಂದು ವೃಕ್ಷವಿಲ್ಲ ಅದಕ್ಕೇಂದೇ ಇದಕ್ಕೆ ತುಲಸಿ ಎಂದು ಹೆಸರು .
 -ಬ್ರಹ್ಮವೈವರ್ತಪುರಾಣ(1-22-24)

 ತುಲಸೀ ಶಬ್ದದ ಅರ್ಥ

ಯಸ್ಯಾ ದೇವ್ಯಾಸ್ತುಲಾ ನಾಸ್ತಿ ವಿಶ್ವೇಶು ನಿಖಿಲೇಷು ಚ |
ತುಲಸೀ ಯೇನ  ವಿಖ್ಯಾತ ತಾಂ ಯಾಮಿ ಶರಣಂ ಪ್ರಿಯೇ ||

ವಿಶ್ವದ ಸಕಲ ವೃಕ್ಷಗಳಲ್ಲೂ ಇದಕ್ಕೆ ಸಮನಾದ ಮತ್ತೊಂದು ವೃಕ್ಷವಿಲ್ಲ ಅದಕ್ಕೇಂದೇ ಇದಕ್ಕೆ ತುಲಸಿ ಎಂದು ಹೆಸರು .
 -ಬ್ರಹ್ಮವೈವರ್ತಪುರಾಣ(1-22-24)
****


ಸಂಚಿಕೆ-2

   ತುಳಸಿದಳದ ಮಹಿಮೆ

ತುಲಸಿದಲಮಾಹತ್ಮ್ಯಂ ಶ್ರುಣುಷ್ವಾದ್ಯ ಸಮಾಹಿತಃ |
ತೇನಾಧೀತಂ ಶ್ರುತಂ ತೇನ ತೇನ ಸರ್ವಮನುಷ್ಠಿತಮ್||

ತುಲಸೀದಳದ ಮಾಹತ್ಮ್ಯಾ ಆಪಾರವಾದುದು .ಅದನ್ನು ತಿಳಿಯುವುದು ಸಹ ಸಕಲ ಶಾಸ್ತ್ರಗಳ ಅಧ್ಯಯನ , ಶ್ರವಣಗಳ ಹಾಗೂ ಸಕಲಸತ್ಕಾರ್ಯಗಳ ಅನುಷ್ಠಾನ ಫಲಕ್ಕೆ ಸಮವೆನ್ನಿಸುವುದು .
        -ವಿಷ್ಣುಧರ್ಮೋತ್ತರ ಪುರಾಣ
*******

ಸಂಚಿಕೆ-3

ತುಲಸಿಯ ಸೇವೆಯ ಪಲ

ದೃಷ್ಟಾ ಸ್ಪೃಷ್ಟಾsಥವಾ ಧ್ಯಾತಾ ಕೀರ್ತೀತಾ ಶ್ರುತಾ |
ರೋಪಿತಾ ಸೇಚಿತ ನಿತ್ಯಂ ತುಲಸೀ ಪುಜಿತಾ ಶುಭಾ ||

ನವಧಾ ತುಲಸೀಭಕ್ತಿಂ ಯೇ ಕುರ್ವಂತಿ ದಿನೇ ದಿನೆ |
ಯುಗಕೋಟಿ ಸಹಸ್ರಾಣಿ ತೇ ವಸಂತಿ ಹರೇರ್ಗೃಹೇ ||

ತುಲಸಿಯ ದರ್ಶನ , ಸ್ಪರ್ಶನ ,ಧ್ಯಾನ, ಕೀರ್ತನ ,ಶ್ರವಣ ,ರೋಪಣ ಸೇಚನ, ಪೂಜನ ,ಹಾಗೋ  ವಂದನ ಈರೀತಿಯಾಗಿ ಒಂಬತ್ತುಭಗೆಯಲ್ಲಿ ಭಕ್ತಿಯಿಂದ ತುಲಸಿಯನ್ನು ಯಾರು ಪ್ರತಿದಿನವೂ ಸೇವಿಸುವರೋ ಅವರು ಶ್ರೀಹರಿಯ ಮಂದಿರದಲ್ಲಿ ಕೋಟಿಯುಗಗಳಷ್ಟು ಕಾಲ ನೆಲೆಸುವರು .
            -ಪದ್ಮಪುರಾಣ
ರೋಪಣ- ತುಲಸಿಯನ್ನು ದೇವರಿಗಾಗಿ ಬೇಳೆಸುವುದು
ಸೇಚನ- ತುಲಸಿಗೆ ಯಥಾಯೋಗ್ಯವಾಗಿ ನೀರನ್ನು ಹಾಕುವುದು.
*****

ಸಂಚಿಕೆ-4

ತುಲಸಿಯ ಸೇವೆಯ ಫಲ

ತುಲಸ್ಯಾ ಸಹಿತಂ ದತ್ತಂ ತತ್ ಶ್ರೀಕೃಷ್ಣಸ್ಯ ತುಷ್ಟಯೇ|
ತುಲಸ್ಯಾ ಸಹಿತಂ ದಾನಂ ತದ್ದಾನಂ ಚ ಸುಖಾಪ್ತಯೇ||

ಯಾವುದೇ ದಾನವನ್ನು ತುಲಸಿಯ ಸಮೇತವಾಗಿಯೇ ಶ್ರೀಕೃಷ್ಣಪರಮಾತ್ಮನ ಪ್ರೀತಿಗೆಂದು ಸಮರ್ಪಿಸಬೇಕು .ಅಂತಹ ದಾನವು ಸುಖಪ್ರಾಪ್ತಿಗೆ ಸಾಧನವಾಗುವುದು .
       -ಶಾಂಡಿಲ್ಯ ಸಂಹಿತೆ
*******


ತುಲಸಿಯ ಮಹತ್ವ-5

ಕಾರ್ತೀಕ ಮಾಸದಲ್ಲಿ ತುಲಸಿಯ ವಿಶೇಷ ಪೂಜೆ

ಕಾರ್ತೀಕ ಮಾಸವು ವರ್ಷದ ಶ್ರೇಷ್ಠ ಮಾಸಗಳಲ್ಲಿ ಒಂದು ಈ ಮಾಸದಲ್ಲಿ ಮಾಡುವ ಸಕಲ ಕಾರ್ಯಗಳು ಶ್ರೇಷ್ಠ ಅದರಲ್ಲೂ ತುಲಸಿಪೂಜೆಯು ವಿಶೇಷ. ದೀಪದಾನವಂತೂ ತುಂಬ ಶ್ರೇಷ್ಠವಾದ ದಾನ. ಕಾರ್ತೀಕಮಾಸದಲ್ಲಿ ಇದು ಇನ್ನಷ್ಟು ಪವಿತ್ರ .ಕಾರ್ತೀಕವು ದೇವತೆಗಳ ಅರುಣೋದಯದ ಕಾಲ.ಆದಕ್ಕೆಂದೇ ದೀಪರಾಧನಯ  ಮಹತ್ವ. ಮತ್ತು ದೀಪದಾನವೂ ಮಹತ್ವಪೂರ್ಣ.ತುಲಸೀ ಸಮೇತವಾದಾಗ ಇದಕ್ಕೆ ಇರುವ ಮಹತ್ವ ವರ್ಣನೆಗೆ ಮೀರಿದ್ದು ಕಾರ್ತೀಕಮಾಸವು ಮಾರ್ಗಶಿರ ಮಾಸದಿಂದ ಪ್ರಾರಂಭವಾಗುವ ಕೇಶವಾದಿ ಮಾಸಗಳಲ್ಲಿ ಕೊನೆಯದು ಎಂದರೆ ಇದು ಆ ವರ್ಷದ ಉಪಸಂಹಾರ ಸ್ವರೂಪದ ಮಾಸ ;  ಆ ವರ್ಷದ ಸಮಸ್ತ ಕರ್ಮಗಳನ್ನೂ  ಶ್ರೀಹರಿಗೆ ಸಮರ್ಪಿಸುವ ವಿಶೇಷ ಪರ್ವಕಾಲ.

ಸಮರ್ಪಣೆಗೆ  ತುಲಸಿಯು ಅತ್ಯಂತ ಅಗತ್ಯವಾದುದರಿoದ ಈ ಮಾಸದಲ್ಲಿ ತುಲಸಿಯಪೂಜೆ ವಿಹಿತವಾಗಿದೆ.

ದೃಷ್ಟಾ  ಸ್ಪೃಷ್ಟಾ ತಥಾ ಧ್ಯಾತಾ ಕಾರ್ತೀಕೇ ನಮಿತಾsರ್ಚಿತಾ |
ರೂಪೀತಾ ಸೇಚಿತಾ ನಿತ್ಯಂ ಪಾಪಂ ಹಂತಿ ಯುಗಾರ್ಚಿತಮ್ ||

ಅಷ್ಟಾಧಾ ತುಲಸೀ ಯೈಸ್ತು ಸೇವಿತಾ ದ್ವಿಜಸತ್ತಮ |
ಯುಗಕೋಟಿಸಹಸ್ರಾಣಿ ತೇ ವಸಂತಿ ಹರೇರ್ಗೃಹೇ ||
       ಪದ್ಮಪುರಾಣ(ಉತ್ತರ ಖಂಡ)
****

ತುಲಸಿಯ ಮಹತ್ವ- 6

ಕಾರ್ತೀಕಮಾಸದಲ್ಲಿ ತುಲಸಿಯ ದರ್ಶನ , ಸ್ಪರ್ಶನ ,ಧ್ಯಾನ,ನಮನ, ಅರ್ಚನೆ ,ರೋಪಣ ,ಸೇಚನ ,-ಮೊದಲಾದ ಸೇವೆಗಳಿಂದ ತುಲಸಿಯು ಯುಗಗಟ್ಟಲೆ ಮಾಡಿದ ಪಾಪಗಳನ್ನು ನಾಶಪಡಿಸುವಳು .ಈ ಎಂಟು ರೀತಿಯಲ್ಲಿ  ತುಲಸಿಯನ್ನು ಸೇವಿಸುವವರ ಮನೆಯಲ್ಲಿ ಕೋಟಿ ,ಸಾವಿರಯುಗಗಳವರೆಗೆ ನೆಲೆಸುವಳು , ಹೀಗೆ ತುಲಸಿಯನ್ನು ಸೇವಿಸು ವವರು .ಶ್ರೀ ಹರಿಯ ಮಂದಿರದಲ್ಲಿ ಕೋಟಿ ಸಾವಿರಯುಗ ಗಳಷ್ಟು ಕಾಲ ನೆಲೆಸುವರು.

ಕಾರ್ತಿಕಮಾಸದಲ್ಲಿ ತುಲಸಿಪೂಜೆಯ ಮತ್ತು ದೀಪಾರಾಧನೆಯ ಮಹತ್ವ

ದೀಪಮಾರೋಪಯೇತ್ಸಾಯಂ ಕಾರ್ತಿಕೇ ಪ್ರತಿವಾಸರಮ್ |
ನಿವೇದ್ಯ ಪಾಯಸನ್ನಂ ಚ ಸಿದ್ಧಿಮಿಷ್ಟಾಮವಾಪ್ನುಯಾತ್ ||

ಕಾರ್ತೀಕಮಾಸದಲ್ಲಿ ಪ್ರತಿನಿತ್ಯವೂ ಪ್ರಾತಃಕಾಲ-ಸಾಯಂಕಾಲ ವಿಶೇಷವಾಗಿ ದೀಪಗಳಿಂದ ತುಳಸಿಯನ್ನು ಉಪಚರಿಸಬೇಕು .ಸಾಯಂಕಾಲ ವಿಶೇಷವಾಗಿ  ದೀಪಾರಾಧನೆಯನ್ನು ಮಾಡಬೇಕು.(ತುಪ್ಪದ ದೀಪ ಶ್ರೇಷ್ಠ  ಸಾಧ್ಯವಾಗದಿದ್ದಲ್ಲಿ ಎಳ್ಳೆಣ್ಣೆಯಿಂದಲಾದರು ದೀಪವನ್ನು ಬೆಳಗಿಸಬೇಕು)ಪ್ರತಿನಿತ್ಯ ತಪ್ಪದೇ ಇದನ್ನು ವ್ರತವಾಗಿ ಸ್ವೀಕರಿಸಬೇಕು ಮತ್ತು ದೇವರಿಗೆ ನಿವೇದಿಸಿದ ಪಾಯಸಾನ್ನವನ್ನು ಪ್ರತಿನಿತ್ಯ ತುಳಸಿಗೆ ನಿವೇದಿಸಬೇಕು ಹೀಗೆ ಕಾರ್ತೀಕಮಾಸದಲ್ಲಿ ತುಳಸಿಗೆ ಪ್ರತಿನಿತ್ಯವೂ ದೀಪಾರಾಧನೆ ಮತ್ತು ಪಾಯಸಾನ್ನದ ನೈವೈದ್ಯದಿಂದ ಇಷ್ಟಾರ್ಥಗಳು ಸಿದ್ಧಿಸುವುವು .
           -ಪದ್ಮಪುರಾಣ
*****


ತುಲಸಿಯ ಮಹತ್ವ-7

ಕಾರ್ತಿಕಮಾಸದಲ್ಲಿ ತುಲಸೀ ಆರ್ಚನೆಯ ಫಲ
ಸಂಪ್ರಾಪ್ತಂ ಕಾರ್ತೀಕಂ ದೃಷ್ಟ್ವಾ ನಿಯಮೇನ ಜನಾರ್ದನಃ |
ಪೂಜನಿಯೋ ಮಹದ್ಭಿಶ್ಚ ಕೋಮಲೈ ತುಲಸೀ ದಲೈಃ ||

ಕಾರ್ತೀಕ ಮಾಸದಲ್ಲಿ ಜನಾರ್ಧನನನ್ನು ತುಲಸೀ ದಳಗಳಿಂದ ಪೂಜಿಸಬೇಕು. ಇದನ್ನು ಈ ಮಾಸದಲ್ಲಿ ನಿಯಮವಾಗಿ ಮಾಡಬೇಕು ಮಹಾತ್ಮರಾದವರೂ ಈ ಪೂಜೆಯನ್ನು ತಪ್ಪಿಸಬಾರದು.
          -ಪದ್ಮಪುರಾಣ
********

ತುಲಸಿಯ ಮಹತ್ವ-8

ಕಾರ್ತಿಕ ಮಾಸದಲ್ಲಿ ತುಲಸೀ ಅರ್ಚನೆಯ ಫಲ
ತುಲಸೀದಳಪುಷ್ಪಾಣಿ ಯೋ ದದ್ಯಾದ್ಧರಯೇ ಮುನೇ |
ಕಾರ್ತಿಕೇ ಸಕಲಂ ಪಾಪಂ ಸೋsತ್ರ ಜನ್ಮಾರ್ಜಿತಂ ದಹೇತ್ ||

ಕಾರ್ತೀಕಮಾಸದಲ್ಲಿ ವಿಶೇಷವಾಗಿ ತುಲಸೀ ಪತ್ರಗಳಿಂದ ,ತುಲಸೀದಳಗಳಿಂದ ಅಥವ ತುಲಸೀ ಪುಷ್ಪಗಳಿoದ ಪರಮಾತ್ಮನನ್ನು ಅರ್ಚಿಸಬೇಕು.ಹೀಗೆ ಮಾಡಿದ ಸಾಧಕನು ತಾನು ಈ ಜನ್ಮದಲ್ಲಿ ಸಂಪಾದಿಸಿದ ಪಾಪಗಳನ್ನೆಲ್ಲ ಕಳೆದುಕೊಳ್ಳುತ್ತಾನೆ ಅವನ ಎಲ್ಲ ಪಾಪಗಳು ಸುಟ್ಟು ಭಸ್ಮವಾಗುತ್ತದೆ.
             -ಪದ್ಮಪುರಾಣ
******

ತುಳಸಿಯ ಮಹತ್ವ-9

ಕಾರ್ತೀಕಮಾಸದಲ್ಲಿ ತುಳಸಿ ಅರ್ಚನೆಯ ಮಹತ್ವ
ಬಿoಬಮಪ್ಯರ್ಚಿತo ದೃಷ್ಟ್ವಾ   ಸಹೋಮಾಸೇ ಚ ಮಾಮಕಮ್ |
ತುಲಸೀಪತ್ರ ನಿಚಯೈಃ ಮುಚ್ಯತೇ ಬ್ರಹ್ಮಹತ್ಯಯಾ ||

ಕಾರ್ತೀಕಮಾಸದಲ್ಲಿ ತುಲಸಿಪತ್ರಗಳ ರಾಶಿಯಿಂದ ಶ್ರೀಹರಿಯಪ್ರತಿಮೆಗೆ  ಪೂಜೆಸಲ್ಲಿಸಬೇಕು ಹೀಗೆ ಮಾಡಲು ಸಾಧ್ಯವಾಗದಿದ್ದಾಗ ತುಲಸಿಯಿಂದ ಅರ್ಚಿತವಾದ ಮೂರ್ತಿಯ ದರ್ಶನಪಡೆದುಕೊಳ್ಳಬೇಕು .ಭಕ್ತಿ-ಶ್ರದ್ಧೆಗಳಿಂದ ಹೀಗೆ ಮಾಡಿದರೆ ಬ್ರಹ್ಮಹತ್ಯಾದಿ ಪಾಪಗಳು ನಾಶವಾಗುತ್ತದೆ .
            -ಪದ್ಮಪುರಾಣ
****

ತುಲಸಿಯ ಮಹತ್ವ-10

ಕಾರ್ತೀಕಮಾಸದಲ್ಲಿ ತುಳಸಿ ಅರ್ಚನೆಯ ಫಲ

ಪ್ರಾತಃ ಸ್ನಾತ್ವ ಶುಚಿರ್ಭೂತ್ವಾ ಕಾರ್ತೀಕೇ ವಿಷ್ಣುತತ್ಪರಃ |
ದೇವಂ ದಾಮೋದರಂ ಪೂಜ್ಯ ಕೋಮಲೈಸ್ತುಲಸೀದಲೈಃ |
ನ ತು ಮೋಕ್ಷಮವಾಪ್ನೋತಿ ನಾತ್ರ ಕಾರ್ಯಾ ವಿಚರಣಾ ||

ಕಾರ್ತೀಕಮಾಸದಲ್ಲಿ ಪ್ರಾತಃಕಾಲದಲ್ಲಿ ಸ್ನಾನಮಾಡಿ ಶುಚಿರ್ಭೂತನಾಗಿ ಕೋಮಲವಾದ ತುಳಸಿದಳಗಳಿಂದ ದೇವನಾದ ದಾಮೋದರನನ್ನು ಪೂಜಿಸಿದವನು ಮೋಕ್ಷವನ್ನು ಪಡೆದು ಕೊಳ್ಳುವನು ; ಈ ಬಗ್ಗೆ ವಿಚಾರಮಾಡಬೇಕಿಲ್ಲ .
          -ಸ್ಕಂಧಪುರಾಣ

ಕಾರ್ತೀಕ ಮಾಸದಲ್ಲಿ ತುಲಸಿಯ ವಿಶೇಷ ಪೂಜೆ

ಕಾರ್ತೀಕ ಮಾಸವು ವರ್ಷದ ಶ್ರೇಷ್ಠ ಮಾಸಗಳಲ್ಲಿ ಒಂದು ಈ ಮಾಸದಲ್ಲಿ ಮಾಡುವ ಸಕಲ ಕಾರ್ಯಗಳು ಶ್ರೇಷ್ಠ ಅದರಲ್ಲೂ ತುಲಸಿಪೂಜೆಯು ವಿಶೇಷ. ದೀಪದಾನವಂತೂ ತುಂಬ ಶ್ರೇಷ್ಠವಾದ ದಾನ. ಕಾರ್ತೀಕಮಾಸದಲ್ಲಿ ಇದು ಇನ್ನಷ್ಟು ಪವಿತ್ರ .ಕಾರ್ತೀಕವು ದೇವತೆಗಳ ಅರುಣೋದಯದ ಕಾಲ.ಆದಕ್ಕೆಂದೇ ದೀಪರಾಧನಯ  ಮಹತ್ವ. ಮತ್ತು ದೀಪದಾನವೂ ಮಹತ್ವಪೂರ್ಣ.ತುಲಸೀ ಸಮೇತವಾದಾಗ ಇದಕ್ಕೆ ಇರುವ ಮಹತ್ವ ವರ್ಣನೆಗೆ ಮೀರಿದ್ದು ಕಾರ್ತೀಕಮಾಸವು ಮಾರ್ಗಶಿರ ಮಾಸದಿಂದ ಪ್ರಾರಂಭವಾಗುವ ಕೇಶವಾದಿ ಮಾಸಗಳಲ್ಲಿ ಕೊನೆಯದು ಎಂದರೆ ಇದು ಆ ವರ್ಷದ ಉಪಸಂಹಾರ ಸ್ವರೂಪದ ಮಾಸ ;  ಆ ವರ್ಷದ ಸಮಸ್ತ ಕರ್ಮಗಳನ್ನೂ  ಶ್ರೀಹರಿಗೆ ಸಮರ್ಪಿಸುವ ವಿಶೇಷ ಪರ್ವಕಾಲ.

ಸಮರ್ಪಣೆಗೆ  ತುಲಸಿಯು ಅತ್ಯಂತ ಅಗತ್ಯವಾದುದರಿoದ ಈ ಮಾಸದಲ್ಲಿ ತುಲಸಿಯಪೂಜೆ ವಿಹಿತವಾಗಿದೆ.

ದೃಷ್ಟಾ  ಸ್ಪೃಷ್ಟಾ ತಥಾ ಧ್ಯಾತಾ ಕಾರ್ತೀಕೇ ನಮಿತಾsರ್ಚಿತಾ |
ರೂಪೀತಾ ಸೇಚಿತಾ ನಿತ್ಯಂ ಪಾಪಂ ಹಂತಿ ಯುಗಾರ್ಚಿತಮ್ ||

ಅಷ್ಟಾಧಾ ತುಲಸೀ ಯೈಸ್ತು ಸೇವಿತಾ ದ್ವಿಜಸತ್ತಮ |
ಯುಗಕೋಟಿಸಹಸ್ರಾಣಿ ತೇ ವಸಂತಿ ಹರೇರ್ಗೃಹೇ ||
       ಪದ್ಮಪುರಾಣ(ಉತ್ತರ ಖಂಡ)


ಕಾರ್ತೀಕಮಾಸದಲ್ಲಿ ತುಲಸಿಯ ದರ್ಶನ , ಸ್ಪರ್ಶನ ,ಧ್ಯಾನ,ನಮನ, ಅರ್ಚನೆ ,ರೋಪಣ ,ಸೇಚನ ,-ಮೊದಲಾದ ಸೇವೆಗಳಿಂದ ತುಲಸಿಯು ಯುಗಗಟ್ಟಲೆ ಮಾಡಿದ ಪಾಪಗಳನ್ನು ನಾಶಪಡಿಸುವಳು .ಈ ಎಂಟು ರೀತಿಯಲ್ಲಿ  ತುಲಸಿಯನ್ನು ಸೇವಿಸುವವರ ಮನೆಯಲ್ಲಿ ಕೋಟಿ ,ಸಾವಿರಯುಗಗಳವರೆಗೆ ನೆಲೆಸುವಳು , ಹೀಗೆ ತುಲಸಿಯನ್ನು ಸೇವಿಸು ವವರು .ಶ್ರೀ ಹರಿಯ ಮಂದಿರದಲ್ಲಿ ಕೋಟಿ ಸಾವಿರಯುಗ ಗಳಷ್ಟು ಕಾಲ ನೆಲೆಸುವರು.

sanchike 1 to 10 from ಶ್ರೀದಶಪ್ರಮತಿ ವ್ರತಾನುಷ್ಠಾನ ಚಿಂತನ ಗ್ರೂಪ್ 
*************

ಶ್ರೀ ತುಳಸಿ ಪೂಜಾ ವಿಧಾನ


ಶ್ರೀ ತುಳಸಿ ವೃಂದಾವನದ ಸುತ್ತಲೂ ಚೆನ್ನಾಗಿ ಗೋಮಯದಿಂದ ಸಾರಿಸಿ ರಂಗೋಲಿ ಹಾಕಿ.


|| ಶ್ರೀಯಃ ಪ್ರಿಯೇ ಶ್ರಿಯಾವಾಸೇ ನಿತ್ಯಂ ಶ್ರೀಧರವಲ್ಲಭೇ ||

|| ಭಕ್ತ್ಯಾ ದತ್ತಂ ಮಯಾರ್ಘ್ಯಂ ಹಿ ತುಳಸಿ ಪ್ರತಿಗ್ರಹ್ಯತಾಮ್ ||

ಮೇಲಿನ ಮಂತ್ರ ಹೇಳುತ್ತಾ ತುಳಸಿಗೆ ಅಭಿಷೇಕ ಮಾಡಿ.

ನಂತರ ಅರಶಿನ ಕುಂಕುಮ ಹೂವುಗಳಿಂದ ಪೂಜೆ ಮಾಡಿ.

|| ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ ಯದಗ್ರೇ

  ಸರ್ವವೇದಾಸ್ಚ ತುಳಸೀ ತ್ವಾಂ ನಮಾಮ್ಯಹಂ ||


|| ತುಳಸಿ ಶ್ರೀಸಖಿ ಶುಭೆ ಪಾಪಹಾರಿಣಿ ಪುಣ್ಯದೇ||

|| ನಮಸ್ತೇ ನಾರದನುತೇ ನಾರಾಯಣಮನಃ ಪ್ರಿಯೇ ||


ಮೇಲಿನ ಮಂತ್ರ ಹೇಳಿ ನಮಸ್ಕರಿಸಿ.


ಶ್ರೀ ತುಳಸಿ ಪ್ರಾರ್ಥನೆ

ನಮಸ್ತುಳಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೆ |

ನಮೋ ಮೋಕ್ಷ ಪ್ರದಾಯಿಕೆ ದೇವೀ ನಮಃ ಸಂಪತ್ಪ್ರದಾಯಿಕೆ ||


ಶ್ರೀ ತುಳಸಿ ಧ್ಯಾನ

ಧ್ಯಾಯೇಸ್ಚ ತುಳಸಿಂ ದೇವೀಂ ಶ್ಯಾಮಂ ಕಮಲ ಲೋಚನಮ್ |

ಪ್ರಸನ್ನಂ ಪದ್ಮಕಲ್ಹಾರ ವರದಾಭಯ ಚತುರ್ಭುಜಮ್ ||

ಕಿರೀಟ ಹಾರ ಕೇಯೂರ ಕುಂಡಲಾದಿ ವಿಭೂಶಿತಾಮ್ |

ಧವಲಾಂಕುಶ ಸಂಯುಕ್ತಾಂ ನಿಶಿದುಶೀಮ್ ||


ಶ್ರೀ ತುಳಸಿ ಪ್ರಣಾಮ

ವೃಂದಾಯೈ ತುಳಸಿ ದೇವ್ಯೈ

ಪ್ರಿಯಾಯೈ ಕೇಶವಸ್ಯ ಚ

ಕೃಷ್ಣ ಭಕ್ತಿ ಪರದೆ ದೇವಿ

ಸತ್ಯವತ್ಯೈ ನಮೋ ನಮಃ


ಶ್ರೀ ತುಳಸಿ ಪ್ರದಕ್ಷಿಣ ಮಂತ್ರ

ಯಾನಿ ಕಾನಿ ಚಪಾಪಾನಿ

ಬ್ರಹ್ಮ ಹತ್ಯಾದಿಕಾನಿ ಚ

ತಾನಿ ತಾನಿ ಪ್ರನಶ್ಯಂತಿ

ಪ್ರದಕ್ಷಿಣಃ ಪದೇ ಪದೇ


ಶ್ರೀ ತುಳಸಿ ನಮಸ್ಕಾರ  

ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ |
ಯದಗ್ರೇ ಸರ್ವವೇದಾಸ್ಚ ತುಳಸಿ ತ್ವಾಂ ನಮಾಮ್ಯಹಂ ||

ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೊದ್ಭೋತೇ ತುಳಸಿ ತ್ವಾಂ ನಮಾಮ್ಯಹಂ ||


ಅಷ್ಟ ನಾಮ ಸ್ತವ (ಪದ್ಮ ಪುರಾಣದಿಂದ)

|| ವೃಂದಾವನಿ, ವೃಂದ, ವಿಶ್ವಪೂಜಿತಾ, ಪುಷ್ಪಸಾರ, ನಂದಿನಿ, ಕೃಷ್ಣ ಜೀವನಿ, ವಿಶ್ವ ಪಾವನಿ, ತುಳಸಿ ||

ಶ್ರೀ ತುಳಸಿ ಪೂಜೆ ಮಾಡುವಾಗ ಶ್ರೀ ತುಳಸಿ ದೇವಿಯ ಈ ಎಂಟು ನಾಮಗಳನ್ನು ಹೇಳಿದರೆ ಅಶ್ವಮೇಧದ ಫಲ ಬರುತ್ತದೆ. ಶ್ರೀ ತುಳಸಿ ದೇವಿಯ ಜನ್ಮದಿನವಾದ ಹುಣ್ಣಿಮೆಯಂದು ಈ ಎಂಟು ನಾಮಗಳಿಂದ ಪೂಜಿಸಿದರೆ ಜೀವನ್ಮ್ರುತ್ಯು ಮತ್ತು ಎಲ್ಲಾ ಬಂಧನಗಳಿಂದ ಮುಕ್ತರಾಗಿ ವೃಂದಾವನ ಸೇರುತ್ತಾರೆ. ಈ ಹೆಸರುಗಳನ್ನು ಹೇಳುವುದರಿಂದ ಕೃಷ್ಣನ ಕ್ರಪೆಗೆ ಪಾತ್ರರಾಗುತ್ತಾರೆ.
********

"ತುಳಸೀ ಪೂಜೆ"  ತುಳಸಿ ಪೂಜಾ ವಿಧಾನ


ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ|
ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:||

ಅಂದರೆ ತುಳಸಿವನವು ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸಮಾಡುತ್ತಾನೆ. ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯಂದು ಎಲ್ಲರು ತಮ್ಮ ಮನೆಯಂಗಳಗಳಲ್ಲಿ ತುಳಸಿ ವೃಂದಾವನವನ್ನು ಅಲಂಕರಿಸಿ ತುಳಸಿ-ದಾಮೋದರನನ್ನು ಪೂಜಿಸುತ್ತಾರೆ.

ತುಳಸಿ ಪೂಜಾ ವಿಧಾನ

ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬ

ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುವರು. ಈ ದಿನ ತುಳಸಿ ಕಟ್ಟೆ /ವೃಂದಾವನವನ್ನು ಅಲಂಕಾರ ಮಾಡುತ್ತಾರೆ. ತುಳಸಿಯ ಗಿಡದ ಜೊತೆ ನಲ್ಲಿಕಾಯಿ ಗಿಡವನ್ನು ಇಟ್ಟು ಪೂಜೆ ಮಾಡುತ್ತಾರೆ. ತುಳಸಿಯು ಶ್ರೀ ಕೃಷ್ಣನನ್ನು ಈ ದಿನ ವಿವಾಹ ಆದಳು ಎಂಬ ನಂಬಿಕೆ ಇದೆ. ಯೋಗ ನಿದ್ರೆಯಲ್ಲಿರುವ ಶ್ರೀಮಹಾವಿಷ್ಣುವು ಈ ದಿನ ಎಚ್ಚರಗೊಂಡು ತುಳಸಿಯ ಸಾನಿಧ್ಯದಲ್ಲಿ ಪೂಜೆಯನ್ನು ಪಡೆಯುತ್ತಾನೆ. ಆದ್ದರಿಂದ ತುಳಸಿಯ ಜೊತೆ  ಕೃಷ್ಣನ ಮೂರ್ತಿ ಅಥವ ಸಾಲಿಗ್ರಾಮಗಳನ್ನು ಇಟ್ಟು ಪೂಜೆ ಮಾಡುತ್ತಾರೆ, ನೆಲ್ಲಿಕಾಯಿಯಲ್ಲಿ ತುಪ್ಪದ ಆರತಿ ಮಾಡುತ್ತಾರೆ. ತುಳಸಿ ಸಾನಿಧ್ಯದಲ್ಲಿ ಹಾಲಿನಿಂದ
 ಅರ್ಘ್ಯವನ್ನು ಕೊಟ್ಟು ಉತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ ನೆಂದು ಪರಮಾತ್ಮನನ್ನು ಎಚ್ಚರಗೊಳಿಸುವ ಪ್ರಕ್ರಿಯೆಯು ಇಲ್ಲಿ ಇದೆ

* ಸಂಕ್ಷಿಪ್ತ ತುಳಸಿ ಪೂಜಾ ವಿಧಾನ*

ಪೂಜಾ ವಿಧಾನವನ್ನು ಸರಳವಾಗಿ ವಿವರಿಸಬಹುದು. ದೇವರ ಪೂಜೆಯನ್ನು ಅತಿಥಿ ಸತ್ಕಾರಕ್ಕೆ ಹೋಲಿಸಿಕೊಳ್ಳಿ . ದೇವರು ನಿಮ್ಮ ಮನೆಗೆ ಬಂದಿರುವ ಅತಿಥಿ. ಅತಿಥಿಗಳಿಗೆ ಹೇಗೆ ಉಪಚಾರ ಮಾಡುತ್ತಿರೋ , ಹಾಗೆಯೆ ದೇವರಿಗೆ ಪೂಜೆ ರೂಪದಲ್ಲಿ ಉಪಚಾರ ಮಾಡಬೇಕು ಅಷ್ಟೆ.
ಮೊದಲು ಸಂಕಲ್ಪ ಮಾಡಿ, ನಂತರ ಧ್ಯಾನ ಮಾಡಿ ದೇವರನ್ನು ಆಹ್ವಾನ ಮಾಡುವುದು.
||ಅಥ ತುಳಸಿ ಪೂಜಾ ||
1)ಆಚಮನ   

2)ಪ್ರಾಣಾಯಾಮ

 2)ಸಂಕಲ್ಪ
ವರ್ತಮಾನೇ ವ್ಯಾವಹಾರಿಕೇ 
ಪ್ಲವನಾಮ 
ಸಂವತ್ಸರೇ, ದಕ್ಷಿಣಾಯನೇ ,...
ಶರತ್ಋತೌ , ಕಾರ್ತಿಕ ಮಾಸೇ ,ಶುಕ್ಲ ಪಕ್ಷೇ , ...
 ದ್ವಾದಶಿಯಾಂ ತಿಥಿ ,ಭೃಗುವಾಸರ ಯುಕ್ತಾಯಾಂ , ಪೂರ್ವಕ ಎವಂ ಗುಣವಿಶೇಷಣ ವಿಶಿಷ್ಟಾಯಾಂ ಶುಭ ಪುಣ್ಯ ತಿಥೌ , ಶ್ರೀವಿಷ್ಣು ಪ್ರೇರಣೆಯ ಶ್ರೀವಿಷ್ಣು ಪ್ರೀತ್ಯರ್ಥಂ
ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ
ವಿಜಯ ವೀರ್ಯ ಅಭಯ ಆಯುರಾರೋಗ್ಯ
ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ
ದುರಿತೋಪಶಮನಾರ್ಥಂ ಸಮಸ್ತ
ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ
ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ
ಪುರುಷಾರ್ಥ ಸಿಧ್ಧ್ಯರ್ಥಂ ಯಾವತ್ ಜೀವನ ಸೌಮಾಂಗಲ್ಯ ಪ್ರಾಪ್ಯರ್ಥಂ  ಶ್ರೀ ತುಳಸಿ ಸಹಿತ ದಾಮೋದರ ಪ್ರೀತ್ಯರ್ಥಂ ಯಾಥಾ ಶಕ್ತ್ಯಾ
ಧ್ಯಾನಾವಾಹನಾದಿ ಷೋಡಶೋಪಚಾರ
ಪೂಜಾಂ ಅಹಂ ಕರಿಷ್ಯೇ.

3)ಘಂಟಾನಾದ
“ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಾಕ್ಷಸಾಂ ಕುರು ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ|

4)ಕಲಶ ಪೂಜೆ 
ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತೀ।
ನರ್ಮದೇ ಸಿಂಧೂ ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು।।

5)ಶಂಖ ಪೂಜೆ
ತ್ವಂ ಪುರಾ ಸಾಗರೋತ್ಪನ್ನೋ ವಿಷ್ಣುನಾ ವಿಧ್ರತಃ ಕರೇ |
 ನಮಿತ ಸರ್ವ ದೇವೈಶ್ಚ ಪಾಂಚಜನ್ಯ ನಮೋಸ್ತುತೆ ||

6)ಧ್ಯಾನ 
ಪ್ರಸೀದ ತುಳಸೀದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದಮಥನೋದ್ಭೂತೇ ತುಳಸೀ ತ್ವಾಂ ನಮಾಮ್ಯಹಮ್ ||

(ನೀವು ಪೂಜೆ ಮಾಡುತ್ತಿರುವ
ದೇವರನ್ನು ಭಕ್ತಿಯಿಂದ ಧ್ಯಾನ ಮಾಡಿ ಆವಾಹನೆ
ಮಾಡುವುದು. ಸಾಮಾನ್ಯವಾಗಿ
ಷೋಡಶೋಪಚಾರದಿಂದ ಪೂಜೆ
ಅಂತ ನೀವು ಕೇಳಿರಬಹುದು. ಷೋಡಶ
ಅಂದರೆ 16.
ಹದಿನಾರು ಬಗೆಯಿಂದ ದೇವರಿಗೆ ಉಪಚಾರ ಮಾಡಿ
ಎಂದರ್ಥ. ಇವುಗಳ ವಿವರ ಕೆಳಗಿದೆ:
ಇಲ್ಲಿ ಅಕ್ಷತೆ ಹಾಕಬೇಕು (ಸ್ತ್ರೀ ಸೂಕ್ತ ತಿಳಿದವರು ಹೇಳುವುದು)

7)ಷೋಡಶೋಪಚಾರ

1.ಆವಾಹನೆ - (ಅಂದರೆ ಆಹ್ವಾನ. ದೇವರನ್ನು ನಿಮ್ಮ
ಮನೆಗೆ ಅಥವಾ ಪೂಜೆ ಮಾಡುತ್ತಿರುವ ಜಾಗಕ್ಕೆ
ಆಹ್ವಾನ ಮಾಡುವುದು....ಶ್ರೀ ತುಳಸಿಯೇ ನಮಃ ಆವಾಹಯಾಮಿ ಆವಾಹನಂ ಸಮರ್ಪಯಾಮಿ

2.ಆಸನ - ಅಂದರೆ ಕುಳಿತುಕೊಳ್ಳುವ ಜಾಗ . ದೇವರ
ಪ್ರತಿಮೆಯನ್ನು ಇಡುವ ವೇದಿಕೆ/ ಮಣೆ ಮೇಲೆ ಅಕ್ಷತೆ
ಹಾಕುವುದು....ಶ್ರೀ ತುಳಸಿಯೇ  ನಮಃ ಆಸನಂ ಸಮರ್ಪಯಾಮಿ

3.ಪಾದ್ಯ - ಕಾಲು ತೊಳೆದುಕೊಳ್ಳುವುದಕ್ಕೆ
ನೀರು ಕೊಡುವುದು.....ಶ್ರೀ ತುಳಸಿಯೇ ನಮಃ ಪಾದ್ಯಂ ಸಮರ್ಪಯಾಮಿ (ಹರಿವಾಣದಲ್ಲಿ ನೀರು ಬಿಡುವುದು)

4.ಅರ್ಘ್ಯ - ಕೈ ತೊಳೆದುಕೊಳ್ಳುವುದಕ್ಕೆ
ನೀರು ಕೊಡುವುದು....ಶ್ರೀ ತುಳಸಿಯೇ ನಮಃ ಅರ್ಘ್ಯಂ ಸಮರ್ಪಯಾಮಿ(ಹರಿವಾಣದಲ್ಲಿ ನೀರು ಬಿಡುವುದು)

5.ಆಚಮನ - ಕುಡಿಯುವುದಕ್ಕೆ
ನೀರು ಕೊಡುವುದು.... .ಶ್ರೀ ತುಳಸಿಯೇ ನಮಃ ಆಚಮನಂ ಸಮರ್ಪಯಾಮಿ

6.ಸ್ನಾನ - ಶುದ್ಧೋದಕ (ನೀರು)
ಮತ್ತು ಪಂಚಾಮೃತದಿಂದ ಸ್ನಾನ (ಹೂವಿನಿಂದ ತುಳಸಿಯ ಮೇಲೆ ಶುದ್ದ ನೀರನ್ನು ಪ್ರೋಕ್ಷಣೆ ಮಾಡುವುದು)

... .ಶ್ರೀ ತುಳಸಿಯೇ ನಮಃ ಸ್ನಾನಂ ಸಮರ್ಪಯಾಮಿ

7.ವಸ್ತ್ರ - ಧರಿಸಲು ಉಡುಪು ಕೊಡುವುದು .
ಗೆಜ್ಜೆವಸ್ತ್ರಗಳನ್ನೂ ದೇವರಿಗೆ ಇಡುವುದು . ಜೊತೆಗೆ
( ಜನಿವಾರ), ಆಭರಣವನ್ನು (ಬಳೆ-
ಬಿಚ್ಚೋಲೆ )ಸಮರ್ಪಿಸುವುದು... .ಶ್ರೀ ತುಳಸಿಯೇ ನಮಃ ವಸ್ತ್ರಂ ಸಮರ್ಪಯಾಮಿ

8.ಹರಿದ್ರ, ಕುಂಕುಮ-
ಗಂಧ, ಅಕ್ಷತ - ಅರಿಶಿನ , ಕುಂಕುಮ, ಶ್ರೀಗಂಧ ,
ಮಂತ್ರಾಕ್ಷತೆಯನ್ನು ದೇವರಿಗೆ ಅರ್ಪಿಸುವುದು.....ಶ್ರೀ ತುಳಸಿಯೇ ನಮಃ.ನಾನಾ ಸೌಭಾಗ್ಯ ದೃವ್ಯಾಣಿಂ ಸಮರ್ಪಯಾಮಿ

9.ಪುಷ್ಪ ಮಾಲ - ಹೂವು, ಪತ್ರೆಗಳಿಂದ ದೇವರಿಗೆ
ಅಲಂಕಾರ ಮಾಡುವುದು.....ಶ್ರೀ ತುಳಸಿಯೇ ನಮಃ ಪುಷ್ಪಂ ಸಮರ್ಪಯಾಮಿ

ಅಂಗಪೂಜಾ 

ಪತ್ರಪೂಜಾ (

ಪುಷ್ಪಪೂಜಾ 

10. ಅರ್ಚನೆ/ಅಷ್ಟೋತ್ತರ - ನೂರೆಂಟು ನಾಮಗಳಿಂದ
ದೇವರನ್ನು ಸ್ಮರಣೆ ಮಾಡುವುದು
ಶ್ರೀ ತುಳಸಿಯೇ ನಮಃ ಅಷ್ಟೋತ್ತರ ಶತ ನಾಮ ಪೂಜಾಂ ಸಮರ್ಪಯಾಮಿ

ಶ್ರೀ ತುಲಸೀ ಅಷ್ಟೋತ್ತರ ಶತನಾಮಾವಳಿ

1. ಓಂ ಹ್ರೀಂ ತುಲಸೀದೇವ್ಯೈ ನಮಃ
2. ಓಂ ಸಖ್ಯೈ ನಮಃ
3. ಓಂ ಭದ್ರಾಯೈ ನಮಃ
4. ಓಂ ಮನೋಜ್ಞಾನ ಪಲ್ಲವಾಯೈ ನಮಃ
5. ಓಂ ಪುರಂದರ ಸತೀಪೂಜ್ಯಾಯೈ ನಮಃ
6. ಓಂ ಪುಣ್ಯದಾಯೈ ನಮಃ
7. ಓಂ ಪುಣ್ಯರೂಪಿಣ್ಯೈ ನಮಃ
8. ಓಂ ಜ್ಞಾನವಿಜ್ಞಾನಜನನ್ಯೈ ನಮಃ
9. ಓಂ ತತ್ವಜ್ಞಾನ ಸ್ವರೂಪಿಣ್ಯೈ ನಮಃ
10. ಓಂ ಜಾನಕೀ ದುಃಖಶಮನ್ಯೈ ನಮಃ
11. ಓಂ ಜನಾರ್ಧನಪ್ರಿಯಾಯೈ ನಮಃ
12. ಓಂ ಸರ್ವಕಲ್ಮಷ ಸಚಿಹರ್ತ್ಯೈ ನಮಃ
13. ಓಂ ಸರ್ವಕೋಟಿ ಸಮಪ್ರಭಾಯೈ ನಮಃ
14. ಓಂ ಗೌರೀ ಶಾರದಾ ಸಂಸೇವಿತಾಯೈ ನಮಃ
15. ಓಂ ವಂದಾರುಜನಮಂದಾರಾಯೈ ನಮಃ
16. ಓಂ ನಿಲಿಂಪಾಭರಣಾಸಕ್ತಾಯೈ ನಮಃ
17. ಓಂ ಲಕ್ಷ್ಮೀಚಂದ್ರ ಸಹೋದರ್ಯೈ ನಮಃ
18. ಓಂ ಸನಕಾದಿ ಮುನಿಧ್ಯೇಯಾಯೈ ನಮಃ
19. ಓಂ ಕೃಷ್ಣಾನಂದ ಜನೀತ್ಯೈ ನಮಃ
20. ಓಂ ಚಿದಾನಂದ ಸ್ವರೂಪಿಣ್ಯೈ ನಮಃ
21. ಓಂ ನಾರಾಯಣ್ಯೈ ನಮಃ
22. ಓಂ ಸತ್ಯರೂಪಾಯೈ ನಮಃ
23. ಓಂ ಮಾಯಾತೀತಾಯೈ ನಮಃ
24. ಓಂ ಮಹೇಶ್ವರ್ಯೈ ನಮಃ
25. ಓಂ ಶುಭಪ್ರದಾಯೈ ನಮಃ
26. ಓಂ ವದನಚ್ಚವಿನಿರ್ಧೂತರಾಕಾಪೂರ್ಣನಿಶಾಕರಾಯೈ ನಮಃ
27. ಓಂ ರೋಚನಾಪಂಕ ತಿಲಕಲಸನ್ನಿಟಲಭಾಸುರಾಯೈ ನಮಃ
28. ಓಂ ಶುದ್ಧಾಯೈ ನಮಃ
29. ಓಂ ಪಲ್ಲವೋಷ್ಟ್ಯೈ ನಮಃ
30. ಓಂ ಪದ್ಮಮುಖ್ಯೈ ನಮಃ
31. ಓಂ ಪುಲ್ಲಪದ್ಮದಳೇಕ್ಷಣಾಯೈ ನಮಃ
32. ಓಂ ಚಾಂಪೇಯಕಲಿಕಾಕಾರನಾಸಾದಮ್ಡವಿರಾಜಿತಾಯೈ ನಮಃ
33. ಓಂ ಮಂದಸ್ಮಿತಾಯೈ ನಮಃ
34. ಓಂ ಮಂಜುಲಾಂಗ್ಯೈ ನಮಃ
35. ಓಂ ಮಾಧವಪ್ರಿಯ ಭಾವಿನ್ಯೈ ನಮಃ
36. ಓಂ ಮಾಣಿಕ್ಯಕಂಕಣಾರಾಯೈ ನಮಃ
37. ಓಂ ಮನಿಕುಂಡಲ ಮಂಡಿತಾಯೈ ನಮಃ
38. ಓಂ ಇಂದ್ರಸಂಪತ್ಕರ್ಯೈ ನಮಃ
39. ಓಂ ಶಕ್ತ್ಯೈ ನಮಃ
40. ಓಂ ಇಂದ್ರಗೋಪನಿಭಾಂಶುಕಾಯೈ ನಮಃ
41. ಓಂ ಇಂದ್ರಗೋಪನಿಭಾಂಶುಕಾಯೈ ನಮಃ
42. ಓಂ ಕ್ಷೀರಸಾಗರ ಸಂಭವಾಯೈ ನಮಃ 
43. ಓಂ ಶಾಂತಿಕಾಂತಿಗುಣೋಪೇತಾಯೈ ನಮಃ
44. ಓಂ ಬೃಂದಾಮರಗುಣ ಸಂಪತ್ಯೈ ನಮಃ
45. ಓಂ ಪೂತಾತ್ಮನಾಯೈ ನಮಃ
46. ಓಂ ಪೂತನಾದಿ ಸ್ವರೂಪಿಣ್ಯೈ ನಮಃ
47. ಓಂ ಯೋಗಧ್ಯೇಯಾಯೈ ನಮಃ
48. ಓಂ ಯೋಗಾನಂದ ವಿದಾಯೈ ನಮಃ
49. ಓಂ ಚತುರ್ವರ್ಗ ಪ್ರದಾರಾಮಾಯೈ ನಮಃ
50. ಓಂ ತ್ರಿಲೋಕ ಜನನ್ಯೈ ನಮಃ
51. ಓಂ ಗೃಹಮೇಧಿಸಮಾರಾಧ್ಯಾಯೈ ನಮಃ
52. ಓಂ ಸದನಾಂಗಣಪಾವನಾಯೈ ನಮಃ
53. ಓಂ ಮುನೀಂದ್ರ ಹೃದಯವಾಸಾಯೈ ನಮಃ
54. ಓಂ ಮೂಲಪ್ರಕೃತಿ ಸಂಜ್ಞಿಕಾಯೈ ನಮಃ
55. ಓಂ ಬ್ರಹ್ಮರೂಪಿಣ್ಯೈ ನಮಃ
56. ಓಂ ಪರಂಜ್ಯೋತಿಷೇ ನಮಃ
57. ಓಂ ಅವಾಜ್ಞಾನಸಗೋಚರಾಯೈ ನಮಃ
58. ಓಂ ಪಂಚಭೂತಾತ್ಮಿಕಾಯೈ ನಮಃ 
59. ಓಂ ಯೋಗಾಚ್ಯುತಾಯೈ ನಮಃ
60. ಓಂ ಯಜ್ಞರೂಪಿಣ್ಯೈ ನಮಃ
61. ಓಂ ಸಂಸಾರದುಃಖಶಮನ್ಯೈ ನಮಃ
62. ಓಂ ಸೃಷ್ಟಿಸ್ಥಿತ್ಯಂತರಕಾರಿಣ್ಯೈ ನಮಃ
63. ಓಂ ಸರ್ವಪ್ರಪಂಚನಿರ್ಮಾತ್ರ್ಯೈ ನಮಃ
64. ಓಂ ವೈಷ್ಣವ್ಯೈ ನಮಃ
65. ಓಂ ಮಧುರಸ್ವರಾಯೈ ನಮಃ
66. ಓಂ ನಿರೀಶ್ವರಾಯೈ ನಮಃ
67. ಓಂ ನಿರ್ಗುಣಾಯೈ ನಮಃ
68. ಓಂ ನಿತ್ಯಾಯೈ ನಮಃ
69. ಓಂ ನಿರಾತಂಕಾಯೈ ನಮಃ
70. ಓಂ ದೀನಜನಪಾಲನತತ್ಪರಾಯೈ ನಮಃ
71. ಓಂ ಕ್ವಣತ್ಮಿಂಕಿಣಿಕಾಜಾಲರತ್ನಕಾಂಚೀಲಸತ್ಕಜ್ಯೈ ನಮಃ
72. ಓಂ ಚಲನ್ಮಂಜೀರಚರಣಾಯೈ ನಮಃ
73. ಓಂ ಚತುರಾವಲಿಸೇವಿತಾಯ್ತೈ ನಮಃ
74. ಓಂ ಅಹೋರಾತ್ರಕಾರಿಣ್ಯೈ ನಮಃ
75. ಓಂ ಯುಕ್ತಾಹಾರಭರಾಕ್ರಾಂತಾಯೈ ನಮಃ
76. ಓಂ ಮುದ್ರಿಕಾರತ್ನಭಾಸುರಾಯೈ ನಮಃ
77. ಓಂ ಸಿದ್ಧಪ್ರದಾಯೈ ನಮಃ
78. ಓಂ ಅಮಲಾಯೈ ನಮಃ
79. ಓಂ ಕಮಲಾಯೈ ನಮಃ
80. ಓಂ ಲೋಕಸುಂದರ್ಯೈ ನಮಃ
81. ಓಂ ಹೇಮಕುಂಭಕುಚಧ್ವಯಾಯೈ ನಮಃ
82. ಓಂ ಲಸಿತಕುಂಭಕುಚದ್ವಯೈ ನಮಃ
83. ಓಂ ಚಂಚಲಾಯೈ ನಮಃ
84. ಓಂ ಲಕ್ಷ್ಮ್ಯೈ ನಮಃ
85. ಓಂ ಶಂಕರ್ಯೈ ನಮಃ
86. ಓಂ ಶಂಕರ್ಯೈ ನಮಃ
87. ಓಂ ಶಿವಶಂಕರ್ಯೈ ನಮಃ
88. ಓಂ ತುಲಸ್ಯೈ ನಮಃ
89. ಕುಂದಲಕುಟ್ಮಿಲರದನಾಯೈ ನಮಃ
90. ಓಂ ಪಕ್ವಬಿಂಬೋಷ್ಟ್ಯೈ ನಮಃ
91. ಓಂ ಶರಶ್ಚಂದ್ರಿಕಾಯೈ ನಮಃ
92. ಓಂ ಚಾಂಪೇಯನಾಸಿಕಾಯೈ ನಮಃ
93. ಓಂ ಕಂಬುಸುಂದರಗಳಾಯೈ ನಮಃ
94. ಓಂ ತಟಿಲ್ಲತಾಂಗ್ಯೈ ನಮಃ
95. ಓಂ ಮತ್ತಬಂಭರಕುಂತಲಾಯೈ ನಮಃ
96. ಓಂ ನಕ್ಷತ್ರನಿಭನಖಾಯೈ ನಮಃ
97. ಓಂ ರಂಭಾನಿಭೋರುಯುಗ್ಮಾಯೈ ನಮಃ
98. ಓಂ ಸೈಕತಶ್ರೋಣ್ಯೈ ನಮಃ
99. ಓಂ ಮಂದಕಂಠೀರವಮಧ್ಯೈ ನಮಃ
100 ಓಂ ಕೀರವಾಣ್ಯೈ ನಮಃ
101. ಓಂ ಶ್ರೀ ಮಹಾತುಲಸ್ಯೈ ನಮಃ

ಇತಿ ಶ್ರೀ ತುಲಸೀ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಂ

11.ಧೂಪ - ಪರಿಮಳಯುಕ್ತವಾದ
ಧೂಪವನ್ನು ಅರ್ಪಿಸುವುದು.... .ಶ್ರೀ ತುಳಸಿಯೇ ನಮಃ ಧೂಪಂ ಸಮರ್ಪಯಾಮಿ

12.ದೀಪ - ದೀಪ
ಸಮರ್ಪಣೆ ಮಾಡುವುದು..
ಶ್ರೀ ತುಳಸಿಯೇ
ನಮಃ ದೀಪಂ ಸಮರ್ಪಯಾಮಿ

13.ನೈವೇದ್ಯ, ತಾಂಬೂಲ -
ದೇವರಿಗೆ ವಿಧ ವಿಧ ಭಕ್ಷ್ಯಗಳ ಭೋಜನ
ಅರ್ಪಿಸುವುದು .ವೀಳೆಯ, ಅಡಿಕೆ,
ತೆಂಗಿನಕಾಯಿ ತಾಂಬೂಲ ಕೊಡುವುದು.... .
ಶ್ರೀ ತುಳಸಿಯೇ ನಮಃ ನೈವೇದ್ಯಂ ಸಮರ್ಪಯಾಮಿ

14. ನೀರಾಜನ -  ಮಂಗಳಾರತಿ
ಮಾಡುವುದು.....ಶ್ರೀ ತುಳಸಿಯೇ ನಮಃ ನೀರಾಜನಂ ಸಮರ್ಪಯಾಮಿ

15. ನಮಸ್ಕಾರ
 ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಟು ಪ್ರಿಯೇ ಶುಭೇ | ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪದಾಯಿಕೇ || 
 ಯನ್ನೂಲೇ ಸರ್ವತೀರ್ಥಾನಿ ಯನ್ಮಧೈ ಸರ್ವದೇವತಾಃ | ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ || ತುಲಸೈ ನಮಃ | ನಮಸ್ಕಾರನ್ ಸಮರ್ಪಯಾಮಿ || 

ಪ್ರಾರ್ಥನಾ 

ನಮೋ ನಮೋ ಜಗದ್ಧಾತ್ರೆ ಜಗದಾ ನಮೋ ನಮಃ | ನಮೋ ನಮೋ ಜಗದ್ರೂ ನಮಸ್ತೆ ಪರಮೇಶ್ವರಿ || ಪ್ರಸಿದ ಮಮ ದೇವೇಶಿ ಕೃಪಯಾ ಪರಯಾ ಸದಾ | ಅಭೀಷ್ಟಫಲ ಸಿಧ್ಯರ್ಥಂ ಕುರು ಮೇ ಮಾಧವಪ್ರಿಯೇ || ಮನಃಪ್ರಸಾದಜನನೀ ಸುಖಸೌಭಾಗ್ಯವರ್ಧಿನೀ | ಆಧಿಂ ವ್ಯಾಧಿಂ ಚ ಹರ ಮೇ ತುಲಸಿ ತ್ವಾಂ ನಮಾಮ್ಯಹಮ್ || ಶ್ರಿಯಂ ದೇಹಿ ಯಶೋ ದೇಹಿ ಕೀರ್ತಿಮಾಯುಸ್ತಥಾ ಸುಖಮ್ | ಬಲಂ ಪುಷ್ಟಿಂ ತಥಾ ಧರ್ಮ ೦ ತುಲಸಿ ತ್ವಂ ಪ್ರಯಚ್ಛ ಮೇ || ಯಾ ದೃಷ್ಟಾ ನಿಖಲಾಘಸಂಘಶಮನೀ ಸ್ಪಷ್ಕಾ ವಪುಪಾವನೀ ರೋಗಾಣಾಮಭಿವಂದಿತಾ ನಿರಸನೀ ಸಿಕ್ಕಾಂತಕತ್ರಾಸಿನೀ ಪ್ರತ್ಯಾಸವಿಧಾಯಿನೀ ಭಗವತ : ಕೃಷ್ಣಸ್ಯ ಸಂರೋಪಿತಾ ನೃಸ್ತಾ ತಚ್ಛರಣೇ ವಿಮುಕ್ತಿ ಫಲದಾ ತಸ್ಮ ತುಲಸ್ಯೆ ನಮ : || ಪಾಪಾನಿ ಯಾನಿ ರವಿಸೂನುಷಟಸ್ಥಿತಾನಿ

 - ಪ್ರದಕ್ಷಿಣೆ ಮಾಡಿ ದೇವರಿಗೆ
ಸಾಷ್ಟಾಂಗ ನಮಸ್ಕಾರ ಮಾಡುವುದು.... .ಶ್ರೀ ತುಳಸಿಯೇನಮಃ ನಮಸ್ಕಾರಂ ಸಮರ್ಪಯಾಮಿ

16. ಪ್ರಾರ್ಥನೆ - ನಿಮ್ಮ ಇಷ್ಟಗಳನ್ನು ನಡೆಸಿ
ಕೊಡು ಎಂದು ದೇವರಲ್ಲಿ ಅರಿಕೆ / ಪ್ರಾರ್ಥನೆ
ಮಾಡುವುದು.

ಅರ್ಘ್ಯಪ್ರಧಾನಂ 

ಕೃಷ್ಣಾರ್ಪಣಂ 

ಪೂಜೆಯ
ನಂತರ ದೇವರು ಅನುಗ್ರಹಿದ  ನೈವೇದ್ಯವನ್ನು ಪ್ರಸಾದ
ರೂಪವಾಗಿ ಸ್ವೀಕಾರ
ಮಾಡುವುದು.
**

ಸಂಕ್ಷಿಪ್ತ ತುಲಸೀ ಪೂಜೆ
ಕಾರ್ತೀಕ ಶುಕ್ಲ ದ್ವಾದಶಿಯ ದಿನ ವಿಸ್ತಾರವಾಗಿ ತುಲಸೀ ದಾಮೋದರರ ವಿವಾಹ ನೆರವೇರಿಸುತ್ತಾರೆ. ಆದರೆ ಇದು ಸಾಧ್ಯವಿಲ್ಲದವರು ಅಂಗಳದಲ್ಲಿರುವ ತುಲಸೀ ವೃಂದಾವನದ ಸುತ್ತ ರಂಗೋಲಿಯಿಂದ ಶೃಂಗರಿಸಿ, ದೀಪಗಳನ್ನು ಹಚ್ಚಿಟ್ಟು ಮಾವಿನತಳಿರು ಬಾಳೆಕಂದು ಇಟ್ಟು ಸಂಕ್ಷಿಪ್ತವಾಗಿ ತುಲಸೀ ಪೂಜೆ ಮಾಡುತ್ತಾರೆ
ಧ್ಯಾನ: 
ಚತುರ್ಬಾಹುಯುತಾಂ ದೇವೀಂ ಶಂಖ ಪುಸ್ತಕಧಾರಿಣೀಂ
ಪದ್ಮಾಕ್ಷಮಾಲಾಂ ಪುಷ್ಪಂ ಚ ಧಾರಿಣೀಂ ಪುಣ್ಯದಾಯಿನೀಂ

ಧ್ಯಾಯೇಚ್ಚ ತುಲಸೀಂ ದೇವೀಂ ಶ್ಯಾಮಾಂ ಕಮಲಲೋಚನಾಂ ಪ್ರಸನ್ನಾಂ ಪದ್ಮಕಲ್ಹಾರ ವರದಾಭಯ ಚತುರ್ಭುಜಾಂ
ಕಿರೀಟಹಾರ ಕೇಯೂರ ಕುಂಕುಮಾದಿ ವಿಭೂಷಿತಾಂ
ಧವಳಾಂಕುಶ ಸಂಯುಕ್ತಾಂ ಪದ್ಮಾಸನ ನಿಷೇದುಷೀಂ

ವೃಂದಾಯೈ ನಮಃ ಆವಾಹನಂ ಸಮರ್ಪಯಾಮಿ
ವೃಂದಾವನೈ ನಮಃ ಆಸನಂ ಸಮರ್ಪಯಾಮಿ
ವಿಶ್ವಪೂಜಿತಾಯೈ ನಮಃ ಪಾದ್ಯಂ ಸಮರ್ಪಯಾಮಿ
ವಿಶ್ವಪಾವನ್ಯೈ ನಮಃ ಆರ್ಘ್ಯಂ ಸಮರ್ಪಯಾಮಿ
ಪುಷ್ಪಸಾರಾಯೈ ನಮಃ ಆಚಮನೀಯಂ ಸಮರ್ಪಯಾಮಿ
ಆನಂದಿನ್ಯೈ ನಮಃ ಸ್ನಾನಂ ಸಮರ್ಪಯಾಮಿ
ತುಲಸ್ಯೈ ನಮಃ ಗಂಧಂ ಸಮರ್ಪಯಾಮಿ
ಕೃಷ್ಣಜೀವನ್ಯೈ ನಮಃ ವಸ್ತ್ರಂ ಸಮರ್ಪಯಾಮಿ(ಗೆಜ್ಜೆವಸ್ತ್ರ)

ಸೌಭಾಗ್ಯ ಶುಭದೇ ದೇವಿ ಸರ್ವ ಮಂಗಲದಾಯಿನೀ
ಹರಿದ್ರಾಂ ತೇ ಪ್ರದಾಸ್ಯಾಮಿ ಗೃಹಾಣ ಸುರಪೂಜಿತೇ(ಅರಿಶಿನ)

ಕುಂಕುಮಂ ಕಾಂತಿದಂ ದಿವ್ಯ ಸರ್ವಕಾರ್ಯ ಫಲಪ್ರದಂ
ಕುಂಕುಮೇನಾರ್ಚಿತೇ ದೇವಿ ಗೃಹಾಣ ವರದಾಭವ(ಕುಂಕುಮ)

ಜಾಜಿ ಪುನ್ನಾಗ ಮಂದಾರಂ ಕೇತಕಿ ಚಂಪಕಾನಿಚ
ನಾನಾ ಸುಗಂಧಿಕಂ ಪುಷ್ಪಂ ಅರ್ಪಯಾಮಿ ಹರಿಪ್ರಿಯೇ (ಹೂವು)

ಇಂದು ತುಲಸೀ ವಿವಾಹವಾದ ಕಾರಣ ಮದುಮಗಳಂತೆ ಸಿಂಗರಿಸಿ ಹಸಿರು ಬಳೆ ಏರಿಸಿ ಉಡಿ ತುಂಬಿ ಧೂಪ ದೀಪ ನೈವೇದ್ಯ ಸಮರ್ಪಿಸಿ ಆರತಿ ಬೆಳಗುತ್ತಾರೆ.

ಅರ್ಘ್ಯ ಪ್ರದಾನ:
ತುಲಸೀ ಶ್ರೀಸಖೀ ದೇವೀ ಪಾಪಹಾರಿಣೀ ಪುಣ್ಯದೇ
ವಿಷ್ಣುನಾ ಸಹಿತಂ ದೇವೀ ಗೃಹಾಣರ್ಘ್ಯಂ ನಮೋಸ್ತುತೇ
ಯನ್ಮಯಾ ದುಷ್ಕೃತಂ ಸರ್ವಂ ಕೃತಂ ಜನ್ಮ ಶತೈರಪಿ
ಭಸ್ಮೀಭವತು ತತ್ಸರ್ವಂ ಅವೈಧವ್ಯಂ ಚ ದೇಹಿಮೇ
ಪ್ರಾರ್ಥನೆ:
ಯಥಾ ತೇ ನವಿಯೋಗೋಸ್ತಿ ಭರ್ತ್ರಾ ಸಹ ಸುರೇಶ್ವರೀ
ತಥಾ ಮಮ ಮಹಾಭಾಗೇ ಕುರುತ್ವಾಂ ಜನ್ಮ ಜನ್ಮನಿ
ಸುಮಂಗಲಿಯರಿಗೆ ಕುಂಕುಮ ತಾಂಬೂಲ ನೀಡಿ ಆಶೀರ್ವಾದ ಪಡೆಯುತ್ತಾರೆ.
********

Everyday Tulasi Pooja by women

ಶ್ರೀ ತುಳಸಿ ಪೂಜೆಯನ್ನು ಮದುವೆಯಾದ ಸ್ತ್ರೀಯರು, ಸುಮಂಗಲಿಯರು, ಹೆಣ್ಣು ಮಕ್ಕಳು ಎಲ್ಲರೂ ಪ್ರತಿದಿನ ಅರಷಿನಾದಿ ಮಂಗಳದ್ರವ್ಯಗಳಿಂದ ಸ್ನಾನ ಮಾಡಿ ಶುಭ್ರರಾಗಿ ಕುಂಕುಮಾದಿಗಳನ್ನು ಧರಿಸಿ ಪ್ರತಿದಿನ ತಪ್ಪದೇ ಶ್ರೀ ತುಳಸಿ ಪೂಜೆ ಮಾಡಬೇಕು.
ಶ್ರೀ ತುಳಸಿ ವೃಂದಾವನದ ಸುತ್ತಲೂ ಚೆನ್ನಾಗಿ ಗೋಮಯದಿಂದ ಸಾರಿಸಿ ರಂಗೋಲಿ ಹಾಕಿ.

|| ಶ್ರೀಯಃ ಪ್ರಿಯೇ ಶ್ರಿಯಾವಾಸೇ ನಿತ್ಯಂ ಶ್ರೀಧರವಲ್ಲಭೇ ||
|| ಭಕ್ತ್ಯಾ ದತ್ತಂ ಮಯಾರ್ಘ್ಯಂ ಹಿ ತುಳಸಿ ಪ್ರತಿಗ್ರಹ್ಯತಾಮ್ ||
ಮೇಲಿನ ಮಂತ್ರ ಹೇಳುತ್ತಾ ತುಳಸಿಗೆ ಅಭಿಷೇಕ ಮಾಡಿ.
ನಂತರ ಅರಶಿನ ಕುಂಕುಮ ಹೂವುಗಳಿಂದ ಪೂಜೆ ಮಾಡಿ.
|| ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ ಯದಗ್ರೇ
  ಸರ್ವವೇದಾಸ್ಚ ತುಳಸೀ ತ್ವಾಂ ನಮಾಮ್ಯಹಂ ||

|| ತುಳಸಿ ಶ್ರೀಸಖಿ ಶುಭೆ ಪಾಪಹಾರಿಣಿ ಪುಣ್ಯದೇ||
|| ನಮಸ್ತೇ ನಾರದನುತೇ ನಾರಾಯಣಮನಃ ಪ್ರಿಯೇ ||

ಮೇಲಿನ ಮಂತ್ರ ಹೇಳಿ ನಮಸ್ಕರಿಸಿ.

ಶ್ರೀ ತುಳಸಿ ಪ್ರಾರ್ಥನೆ
ನಮಸ್ತುಳಸಿ ಕಲ್ಯಾಣಿ ನಮೋ ವಿಷ್ಣು ಪ್ರಿಯೇ ಶುಭೆ |
ನಮೋ ಮೋಕ್ಷ ಪ್ರದಾಯಿಕೆ ದೇವೀ ನಮಃ ಸಂಪತ್ಪ್ರದಾಯಿಕೆ ||

ಶ್ರೀ ತುಳಸಿ ಧ್ಯಾನ
ಧ್ಯಾಯೇಸ್ಚ ತುಳಸಿಂ ದೇವೀಂ ಶ್ಯಾಮಂ ಕಮಲ ಲೋಚನಮ್ |
ಪ್ರಸನ್ನಂ ಪದ್ಮಕಲ್ಹಾರ ವರದಾಭಯ ಚತುರ್ಭುಜಮ್ ||
ಕಿರೀಟ ಹಾರ ಕೇಯೂರ ಕುಂಡಲಾದಿ ವಿಭೂಶಿತಾಮ್ |
ಧವಲಾಂಕುಶ ಸಂಯುಕ್ತಾಂ ನಿಶಿದುಶೀಮ್ ||

ಶ್ರೀ ತುಳಸಿ ಪ್ರಣಾಮ
ವೃಂದಾಯೈ ತುಳಸಿ ದೇವ್ಯೈ
ಪ್ರಿಯಾಯೈ ಕೇಶವಸ್ಯ ಚ
ಕೃಷ್ಣ ಭಕ್ತಿ ಪರದೆ ದೇವಿ
ಸತ್ಯವತ್ಯೈ ನಮೋ ನಮಃ

ಶ್ರೀ ತುಳಸಿ ಪ್ರದಕ್ಷಿಣ ಮಂತ್ರ
ಯಾನಿ ಕಾನಿ ಚಪಾಪಾನಿ
ಬ್ರಹ್ಮ ಹತ್ಯಾದಿಕಾನಿ ಚ
ತಾನಿ ತಾನಿ ಪ್ರನಶ್ಯಂತಿ
ಪ್ರದಕ್ಷಿಣಃ ಪದೇ ಪದೇ

ಶ್ರೀ ತುಳಸಿ ನಮಸ್ಕಾರ  
ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೆ ಸರ್ವದೇವತಾಃ |
ಯದಗ್ರೇ ಸರ್ವವೇದಾಸ್ಚ ತುಳಸಿ ತ್ವಾಂ ನಮಾಮ್ಯಹಂ ||

ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೊದ್ಭೋತೇ ತುಳಸಿ ತ್ವಾಂ ನಮಾಮ್ಯಹಂ ||

ಅಷ್ಟ ನಾಮ ಸ್ತವ (ಪದ್ಮ ಪುರಾಣದಿಂದ)
|| ವೃಂದಾವನಿ, ವೃಂದ, ವಿಶ್ವಪೂಜಿತಾ, ಪುಷ್ಪಸಾರ, ನಂದಿನಿ, ಕೃಷ್ಣ ಜೀವನಿ, ವಿಶ್ವ ಪಾವನಿ, ತುಳಸಿ ||
ಶ್ರೀ ತುಳಸಿ ಪೂಜೆ ಮಾಡುವಾಗ ಶ್ರೀ ತುಳಸಿ ದೇವಿಯ ಈ ಎಂಟು ನಾಮಗಳನ್ನು ಹೇಳಿದರೆ ಅಶ್ವಮೇಧದ ಫಲ ಬರುತ್ತದೆ. ಶ್ರೀ ತುಳಸಿ ದೇವಿಯ ಜನ್ಮದಿನವಾದ ಹುಣ್ಣಿಮೆಯಂದು ಈ ಎಂಟು ನಾಮಗಳಿಂದ ಪೂಜಿಸಿದರೆ ಜೀವನ್ಮ್ರುತ್ಯು ಮತ್ತು ಎಲ್ಲಾ ಬಂಧನಗಳಿಂದ ಮುಕ್ತರಾಗಿ ವೃಂದಾವನ ಸೇರುತ್ತಾರೆ. ಈ ಹೆಸರುಗಳನ್ನು ಹೇಳುವುದರಿಂದ ಕೃಷ್ಣನ ಕ್ರಪೆಗೆ ಪಾತ್ರರಾಗುತ್ತಾರೆ.


ಸಮಯಾವಕಾಶ ಇರುವವರು ಶ್ರೀ ತುಳಸಿ ಅಷ್ಟೋತ್ತರ ಶತನಾಮಾವಳಿಯನ್ನು ಹೇಳಿದರೆ ಉತ್ತಮ.
**********

ಉತ್ಥಾನ ದ್ವಾದಶೀ ವಿಶೇಷ 

" ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ಕಣ್ಣಲ್ಲಿ ಶ್ರೀ ತುಳಸೀ - ತತ್ತ್ವಸುವ್ವಾಲಿಯಿಂದ ಉಧೃತ "


ಬೃಂದಾವನಿ ಜನನಿ ವಂದಿಸುವೆ ಸತತ । ಜ ।

ಲಂಧರನ ರಾಣಿ ಕಲ್ಯಾಣಿ । ಕಲ್ಯಾಣಿ ತುಳಸಿ ನಿಜ ।
ಮಂದಿರೆ ಎನಗೆ ದಯವಾಗೆ ।। ೧ ।।

ಜಲಜಾಕ್ಷನಮಲ ಕಜ್ಜಲ ಬಿಂದು । ಪೀಯೂಷ ।

ಕಲಶದಲಿ ಬೀಳೆ ಜನಿಸಿದಿ । ಜನಿಸಿ ಹರಿಯಿಂದ ಶ್ರೀ ।
ತುಳಸಿ ನೀನೆಂದು ಕರೆಸಿದಿ ।। ೨ ।।

ಶ್ರೀ ತರುಣಿವಲ್ಲಭನ ಪ್ರೀತಿ ವಿಷಯಳೇ ನಿನ್ನ ।

ನಾ ತುಳಸಿ ಕೈಯ ಮುಗಿವೆನು । ಮುಗಿವೆ ಎನ್ನಯ ಮಹಾ ।
ಪಾತಕವ ಕಳೆದು ಪೊರೆಯಮ್ಮಾ ।। ೩ ।।

ತುಳಸಿ ನಿನ್ನಡಿಗೆ ನಾ ತಲೆಬಾಗಿ ಬಿನ್ನೈಪೆ ।

ಕಲುಷ ಕರ್ಮಗಳ ಎಣಿಸದೆ । ಎಣಿಸದೆ ಸಂಸಾರ ।
ಜಲಧಿಯಿಂದೆಮ್ಮ ಕಡೆಹಾಯ್ಸು ।। ೪ ।।

ನೋಡಿದವ ದುರಿತ ಈಡ್ಯಾಡಿದವ ನಿನ್ನ । ಕೊಂ ।

ಡಾಡಿದವ ನಿತ್ಯ ಹರಿ ಪಾದ । ಹರಿ ಪಾದ ಕಮಲಗಳ ।
ಕೂಡಿದವ ಸತ್ಯ ಎಂದೆಂದು ।। ೫ ।।

ನಿಂದಿಸಿದವರೆಲ್ಲ ನಿಂದ್ಯರಾಗುವರು । ಅಭಿ ।

ವಂದಿಸಿದ ಜನರು ಸುರರಿಂದ । ಸುರರಿಂದ ನರರಿಂದ ।
ವಂದ್ಯರಾಗುವರು ಜಗದೊಳು ।। ೬ ।।

ಕಲುಷ ವರ್ಜಿತೆ ನಿನ್ನ ದಳಗಳಿಂದಲಿ ಲಕ್ಷ್ಮೀ ।

ನಿಲಯನಂಘ್ರಿಗಳ ಪೂಜಿಪ । ಪೂಜಿಪರಿಗೆ ಪರಮ । ಮಂ ।
ಗಲದ ಪದವಿತ್ತು ಸಲಹುವಿ ।। ೭ ।।

ಶ್ರೀ ತುಳಸೀದೇವಿ ಮನ್ಮಾತ ಲಾಲಿಸು । ಜಗ ।

ನ್ನಾಥ ವಿಠಲನ ಚರಣಾಬ್ಜ । ಚರಣಾಬ್ಜ ಎನ್ನ ಹೃತ್ಪದ್ಮದಲ್ಲಿ ।
ನೀ ತೋರೆ ಕೃಪೆಯಿಂದ ।। ೮ ।।

" ೧ನೇ ನುಡಿಯ ಸಾರಾಂಶ "


ಸ್ಕಾ೦ದ ಪುರಾಣದ ಕಾರ್ತೀಕ ಮಾಸ ಮಹಾತ್ಮೆಯಲ್ಲಿ ಬೃಂದೆಯ ಕಥೆಯು ವರ್ಣಿತವಾಗಿದೆ.


ಬೃಂದೆಯು ಜಲಂಧರನೆಂಬ ದಾನವೇಂದ್ರನ ಭಾರ್ಯೆ. ತನ್ನ ಪತಿಯ ರೂಪದಿಂದ ಬಂದು ಸಂಗವಿತ್ತ ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹಕ್ಕೆ ಪಾತ್ರಳಾಗಿ ಶ್ರೀ ತುಳಸಿಗೆ ಮಂದಿರಳಾಗಿ ಭಕ್ತರಿಂದ ಪೂಜ್ಯಳಾಗು ಎಂಬ ವರವನ್ನು ಪಡೆದಳು.


ಭಗವದ್ಭಕ್ತರು ಮನೆಯ ಮುಂಭಾಗದಲ್ಲಿ ವೃಂದಾರವನ್ನು ನಿರ್ಮಿಸಿ ಶ್ರೀ ತುಳಸಿಯ ವೃಕ್ಷವನ್ನು ನೆಟ್ಟಿ ಪೋಷಿಸಿ ನಿತ್ಯವೂ ನಮಸ್ಕರಿಸಿ ಪೂಜಿಸುವರು.


ವೃಂದಾವನದ್ಲಲಿ ( ಶ್ರೀ ತುಳಸೀ ಕಟ್ಟೆಯಲ್ಲಿ ) ಬೃಂದೆಯು ಸನ್ನಿಹಿತಳಾಗಿ ಪೂಜಿಸಲ್ಪಡುವಳು. ಅಂತೆಯೇ ತುಳಸೀ ಕಟ್ಟೆಯನ್ನು ( ಅಲ್ಲಿ ಸನ್ನಿಹಿತಳಾದ ಬೃಂದೆಯನ್ನು ) ಮೊದಲು ಪೂಜಿಸಿ ನಂತರ ಶ್ರೀ ತುಳಸಿಯನ್ನು ಪೂಜಿಸುವುದು.


" ೨ನೇ ನುಡಿಯ ಸಾರಾಂಶ "


ದೇವ ದೈತ್ಯರು ಅಮೃತ ಲಾಭಕ್ಕಾಗಿ ಕ್ಷೀರ ಸಮುದ್ರವನ್ನು ಮಥನ ಮಾಡಿದಾಗ, ಶ್ರೀ ಧನ್ವಂತರೀ ರೂಪದಿಂದ ಶ್ರೀ ಹರಿ ಪರಮಾತ್ಮನು ಅಮೃತ ಕಲಶವನ್ನು ಕೈಯಲ್ಲಿ ಹಿಡಿದು ಮೇಲೆ ಬಂದನು.


ನಿಜ ಭೃತ್ಯರಾದ ದೇವತೆಗಳು ಅಮೃತವನ್ನು ಸಾಧಿಸಿ ಜಯಶೀಲರಾದ್ದರಿಂದಲೋ ಎಂಬಂತೆ ಶ್ರೀ ಧನ್ವಂತರೀ ಕಣ್ಣುಗಳಿಂದ ಆನಂದ ಬಾಷ್ಪಗಳು ಸುರಿದವು.


ಆ ಕಣ್ಣೀರ ಹನಿಯು ಅಮೃತ ಕಲಶದಲ್ಲಿ ಬಿದ್ದಿತು. ಆಗ ಅಲ್ಲಿ ಶ್ರೀ ತುಳಸಿಯು ಉತ್ಪನ್ನಳಾದಳು. ಶ್ರೀ ಹರಿಯ ಬಾಷ್ಪವೂ ಆನಂದಮಯವೇ!


ಹೀಗೆ ಶ್ರೀ ಹರಿಯ ಪ್ರಸನ್ನತೆಯಿಂದ ಜನಿಸಿದ ಶ್ರೀ ತುಳಸಿಯು ಪರಮ ಮಂಗಲಕರಳು! ಸರ್ವರಿಗೂ ಆನಂದ ಪ್ರದಳು - ಮಂಗಳ ಪ್ರದಳು - ಮಂಗಳ ದೇವತೆಯಾದ ಶ್ರೀ ಮಹಾಲಕ್ಷ್ಮೀದೇವಿಯರ ಕಲಾ ಯುಕ್ತಳು - ಶ್ರೀ ಹರಿಗೆ ಅತಿಪ್ರಿಯಳು!


ಶ್ರೀ ಹರಿಯೇ ತನಗೆ ಪತಿಯಾಗಬೇಕೆಂಬ ಹಂಬಲದಿಂದ ಬಹು ಕಾಲ ಘೋರ ತಪಸ್ಸನ್ನಾಚರಿಸಿದ ಶ್ರೀ ತುಳಸಿಯು ಇಂದ್ರಸಾವರ್ಣಿ ( ಮುಂದಿನ ಮನ್ವಂತರಾಧಿಪತಿಯ ) ಕುಲೋತ್ಪನ್ನನಾದ ಧರ್ಮಧ್ವಜನೆಂಬ ರಾಜನ ಮಗಳಾಗಿ, ಶ್ರೀ ರಮಾದೇವಿಯರ ಅಂಶ ( ಆವೇಶ ) ದಿಂದ ಯುಕ್ತಳಾಗಿ ಅವತರಿಸಿದಳು.


ಅಸದೃಶ ಸುಂದರಿಯಾದ ಆಕೆಯನ್ನು ರಾಜನಾದ ಧರ್ಮಧ್ವಜನು ಶ್ರೀ ಮಹಾಲಕ್ಷ್ಮೀದೇವಿಯರ ಸೌಂದರ್ಯಕ್ಕೆ ಸಮವಾದ ಸೌಂದರ್ಯವುಳ್ಳವಳೆಂಬ ಕಾರಣದಿಂದ...


ತುಲಾ = ಸದೃಶ


" ತುಳಸೀ " ಎಂಬುದಾಗಿ ಆಕೆಯ ಸಹಜ ನಾಮದಿಂದಲೇ ಕರೆದನು. ಸದಾ ಶ್ರೀ ಹರಿಯ ಸಂಗದಲ್ಲಿ ವಿಹರಿಸಬೇಕೆಂಬ ಆಕೆಯ ಅಭೀಷ್ಟವನ್ನು ಸಲ್ಲಿಸಲು, ವೃಕ್ಷ ರೂಪದಿಂದ ಸದಾ ಪೂಜ್ಯಳಾಗಿ ವಿಹರಿಸುತ್ತಾ, ನನ್ನ ನಿತ್ಯ ಸಂಗವನ್ನು ( ಭಕ್ತರು ಅರ್ಪಿಸುವುದರ ದ್ವಾರಾ ) ಹೊಂದುವೆಯೆಂದು ವರ ದಾನ ಮಾಡಿದನಂತೆ ಶ್ರೀ ಹರಿ ಪರಮಾತ್ಮ!


" ೩ನೇ ನುಡಿಯ ಸಾರಾಂಶ "


 ಕೃಷ್ಣ ಪರಮಾತ್ಮನ ಷಣ್ಮಹಿಷಿಯರಲ್ಲಿ ಜಾಂಬವತೀದೇವಿಯು ಶ್ರೇಷ್ಠಳು. ಶ್ರೀ ರಮಾದೇವಯವರ ವಿಶೇಷ ಸನ್ನಿಧಾನಪಾತ್ರಳು. . ಜಾಂಬವತೀದೇವಿಯೇ ಶ್ರೀ ತುಳಸೀ ರೂಪದಿಂದ ಶ್ರೀ ಹರಿಯ ನಿತ್ಯ ಸೇವೆಯಲ್ಲಿ ತೊಡಗಿರುವಳೆಂದು ( ತುಳಸೀ ಜಾಂಬವತೀ ಪ್ರೋಕ್ತಾ ) ಪುರಾಣ ವಾಕ್ಯಗಳು ಹೇಳುತ್ತಿವೆ!


" ೪ನೇ ನುಡಿಯ ಸಾರಾಂಶ "


ಶಾಸ್ತ್ರದ ವಿಧಿ ಮೀರಿದ್ದೂ ಹಾಗೂ ನಿಷಿದ್ಧ ಕರ್ಮಾಚರಣೆಯ ದೋಷಗಳು ಎಣಿಕೆಗೆ ಬಾರದಷ್ಟು ನಮ್ಮಿಂದ ನಿತ್ಯವೂ ಸಂಭವಿಸುತ್ತದೆ. ದೇವತೆಗಳು ಗುಣಗ್ರಾಹಿಗಳು. ತಮ್ಮನ್ನು ಸೇವಿಸುವವರ ಭಕ್ತಿಯನ್ನು ಗಮನಿಸಿ ಅನುಗ್ರಹಿಸುತ್ತಾರೆ.


" ೫ನೇ ನುಡಿಯ ಸಾರಾಂಶ "


ಪ್ರಾತಃ ಕಾಲದಲ್ಲಿ ನಿತ್ಯವೂ ಶ್ರೀ ತುಳಸಿಯ ದರ್ಶನ ತೆಗೆದುಕೊಳ್ಳುವವರ ಪಾಪಗಳು ನಷ್ಟವಾಗುವೆನೆಂಬುದೂ, ಭಕ್ತಿ ಪೂರ್ವಕ ಶ್ರೀ ತುಳಸಿ ಸ್ತೋತ್ರ ಪಠಿಸುವವರು ಶ್ರೀ ಹರಿ ಪಾದಗಳನ್ನು ಹೊಂದುವುರೆಂಬುವುದು ಸತ್ಯ.


ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವ ದೇವತಾಃ ।

ಯದಾಗ್ರೇ ಸರ್ವ ವೇದಾಶ್ಚ ತುಳಸೀ ತ್ವಾಂ ನಮಾಮ್ಯಹಮ್ ।।

ಪಾಪಾನಿ ಯಾನಿ ರವಿಸೂನುಪಟಸ್ಥಿತಾನಿ

ಗೋ ಬ್ರಹ್ಮ ಬಾಲ ಪಿತೃ ಮಾತೃ ವಧಾದಿಕಾನಿ: ।
ನಶ್ಯಂತಿ ತಾನಿ ತುಳಸೀ ವನ ದರ್ಶನೇನ
ಗೋ ಕೋಟಿ ದಾನ ಸದೃಶಂ ಫಲಮಾಪ್ನುವಂತಿ ।।

ಗೋ - ಬ್ರಹ್ಮ - ಬಾಲ - ತಂದೆ - ತಾಯಿ ಮೊದಲಾದ ಹತ್ಯಗಳಿಂದ ಬರುವ ಪಾಪಗಳಿಂದಲೂ ಅಧಿಕವಾದ, ಶ್ರೀ ಯಮಧರ್ಮ  ರಾಜರ ಪಟ್ಟಿಯಲ್ಲಿರುವ ನಮ್ಮ ಪಾಪಾಗಳೆಲ್ಲಾ ಶ್ರೀ ತುಳಸೀ ದರ್ಶನದಿಂದ ನಾಶ ಹೊಂದುವುದಲ್ಲದೇ ಕೋಟಿ ಗೋ ದಾನದ ಫಲ ಲಭಿಸುತ್ತದೆ.


ತುಳಸೀ ಕಾನನಂ ಯತ್ರ ಯತ್ರ ಪದ್ಮ ವನಾನಿ ಚ ।

ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ ।।

" ೬ನೇ ನುಡಿಯ ಸಾರಾಂಶ "


ಸಾಧನೆಗಾಗಿ ಮನುಷ್ಯರಾಗಿ ಜನಿಸಿದ ದೇವತೆಗಳು ಸರ್ವರಿಂದ ವಂದ್ಯರು ಮತ್ತು ವಂದಿಸಲ್ಪಡಲು ಅರ್ಹರು. ಮನುಷ್ಯಾದಿ ಅವರರಾದ ಜೀವರು ಯಥಾ ಯೋಗ್ಯವಾಗಿ ಸುರರಿಂದ ಸಹ ಗೌರವಿಸಲ್ಪಡಲು ಅರ್ಹರಾಗುವರು.


" ೭ನೇ ನುಡಿಯ ಸಾರಾಂಶ "


ಪರಮ ಮಂಗಳ ಪದವ ಎಂಬುದಕ್ಕೆವೈಕುಂಠಾದಿ ಅಪ್ರಾಕೃತ ಲೋಕಗಳನ್ನೂ ಅಥವಾ ಚಿದಾನಂದಾತ್ಮಕ ಸ್ವಸ್ವರೂಪದ ಆವಿರ್ಭಾವವನ್ನೂ, ಪರಮಾತ್ಮನಲ್ಲಿ  ಸ್ಥಿತ ರೂಪವಾದ ಸಾಯುಜ್ಯ ಮುಕ್ತಿಯನ್ನೂ, ಅತಿಶಯ ಪುಣ್ಯ  ಸಾಧಕವಾದ ಸಂಪತ್ತನ್ನೂ, ಯಥಾರ್ಥ ತತ್ತ್ವ ಜ್ಞಾನವನ್ನೂ, ಶುದ್ಧವಾದ ವಿರಕ್ತಿಯನ್ನೂ ಸೇವಿಸುವವರ ಯೋಗ್ಯತಾನುಸಾರ ಕೊಡುವಳು!!


" ೮ನೇ ನುಡಿಯ ಸಾರಾಂಶ "


ಶ್ರೀ ತುಳಸೀದೇವಿಯ ಸೇವೆಯು ಶ್ರೀ ಹರಿಯ ಸಾಕ್ಷಾತ್ಕಾರವನ್ನು ( ಅಪರೋಕ್ಷ ಜ್ಞಾನವನ್ನು ) ದೊರಕಿಸಲು ಶಕ್ತವಾದ್ದರಿಂದ ಅದರಿಂದ ಮೋಕ್ಷವು ತಪ್ಪದೆ ಲಭಿಸುವುದರಿಂದ ಸರ್ವ ಸಜ್ಜನರೂ ಶ್ರೀ ತುಳಸಿಯನ್ನು ನಿಷ್ಠೆಯಿಂದ ನಿತ್ಯವೂ ಸೇವಿಸಬೇಕೆಂದು ಶ್ರೀ ದಾಸಾರ್ಯರು ಸೂಚಿಸಿರುತ್ತಾರೆ.


ಆಚಾರ್ಯ ನಾಗರಾಜು ಹಾವೇರಿ 
ಗುರು ವಿಜಯ ಪ್ರತಿಷ್ಠಾನ
**********

kannada.com ಏನು ಧನ್ಯಳೋ ‘ತುಳಸಿ’ ಎಂಥಾ ಮಾನ್ಯಳೋ...
ಉತ್ಥಾನ ದ್ವಾದಶಿ, ತುಳಸಿಯ ಹಬ್ಬ. ಈ ಸಂದರ್ಭದಲ್ಲಿ ತುಳಸಿಯ ಮಹಿಮೆಯ ಕುರಿತ ಲೇಖನವಿಲ್ಲಿದೆ....
*ಶೋಭಾ ಸತೀಶ್, (ಕನ್ನಡರತ್ನ.ಕಾಂ ವಿಶೇಷ)
ಕಾರ್ತೀಕೇ ತುಲಸೀಪತ್ರಂ ವಿಷ್ಣವೇ ಯೋ ದದಾತಿ ಚ |
ಗವಾಮಯುತದಾನಸ್ಯ ಫಲಮಾಪ್ನೋತಿ ನಿಶ್ಚೀತಮ್ ||


ಎಂಬ ಶ್ಲೋಕ ನಮ್ಮ ಪುರಾಣಗಳಲ್ಲಿದೆ. ಕಾರ್ತೀಕಮಾಸದಲ್ಲಿ ವಿಷ್ಣುವಿಗೆ ತುಳಸಿಯ ಪತ್ರವನ್ನು ಸಮರ್ಪಿಸುವವನಿಗೆ ಹತ್ತು ಸಾವಿರ ಗೋವುಗಳನ್ನು. ದಾನಮಾಡಿದ ಫಲ ದೊರಕುತ್ತದೆ ಎಂಬುದು ಇದರ ಅರ್ಥ.

ಕಾರ್ತೀಕ ಮಾಸದಲ್ಲೇ ತುಳಸಿ ಪೂಜಿಸುವುದಕ್ಕೆ ಮತ್ತು ತುಳಸಿಯಿಂದ ನಾರಾಯಣನ ಪೂಜಿಸುವುದಕ್ಕೆ ವಿಶೇಷ ಕಾರಣವಿದೆ. ಕಾರ್ತೀಕದಲ್ಲಿ ತುಳಸಿಯ ದರ್ಶನ ಮಾತ್ರದಿಂದ ಸಕಲ ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ತುಳಸಿಯ ಸ್ಪರ್ಶಮಾತ್ರದಿಂದ ಪವಿತ್ರತೆ ಬರುತ್ತದೆ, ವಂದಿಸುವುದರಿಂದ ರೋಗ ಪರಿಹಾರವಾಗುತ್ತದೆ, ತುಳಸೀತೀರ್ಥ ಪ್ರೋಕ್ಷಣೆಯಿಂದ ಆಯುವೃದ್ಧಿಯಾಗುತ್ತದೆ, ಹೀಗಾಗಿಯೇ ಕಾರ್ತೀಕ ಮಾಸದಲ್ಲಿ ತುಳಸಿಗೆ ವಿಶೇಷ ಸ್ಥಾನವಿದೆ.

ಬೆಳಕಿನ ಮಾಸ ಕಾರ್ತಿಕ ಶುದ್ಧ ದ್ವಾದಶಿ ಬೃಂದಾವನದಿ ಪವಡಿಸಿದ ಶ್ರೀಮನ್ನಾರಾಯಣನ ಎಚ್ಚರಿಸುವ ದಿನ. ಅಂದೇ ಚಾತುರ್ಮಾಸ್ಯದ ಅಂತ್ಯ. ಅಂದು ತುಳಸಿಗೂ, ಶ್ರೀಮನ್ನಾರಾಯಣನಿಗೂ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸುತ್ತಾರೆ. ಈ ದೇವೋತ್ಥಾನದ ದಿನ ಮಾನಿನಿಯರು ಸಿಂಧೂರಾದಿಯಿಂದ ಮನೆಯನ್ನೂ ತುಳಿಸಿ ಕಟ್ಟೆಯನ್ನು ಸಿಂಗರಿಸಿ, ಮಂಟಪ ನಿರ್ಮಿಸಿ, ಅಗಸೆ ಹಾಗೂ ಫಲಸಹಿತವಾದ ಬೆಟ್ಟನೆಲ್ಲಿಯ ಕೊನೆಯನ್ನು ತುಳಸಿ ಕಟ್ಟೆಯಲ್ಲಿ ಸ್ಥಾಪಿಸಿ, ನೆಲ್ಲಿಕಾಯಿಯ ಕೊರೆದು ಬತ್ತಿ ಹಾಕಿ ದೀಪಾರತಿ ಮಾಡುತ್ತಾರೆ.

ಉತ್ಥಾನ ದ್ವಾದಶಿಗೆ ಕಿರು ದೀಪಾವಳಿ ಎಂಬ ಹೆಸರೂ ಇದೆ. ಅಂದೂ ಮಕ್ಕಳು ಪಟಾಕಿಗಳನ್ನು ಸಿಡಿಸಿ ಆನಂದಿಸುತ್ತಾರೆ. ಕಾರ್ತಿಕ ಶುದ್ಧ ದ್ವಾದಶಿಯ ದಿನ ತುಳಸಿಯ ದರ್ಶನದಿಂದ, ತುಳಸಿ ಪೂಜಿಸುವುದರಿಂದ ಸಪ್ತಜನ್ಮಕೃತ ಪಾಪಗಳು ಕಳೆಯುತ್ತವೆ ಎಂಬುದು ಹಿರಿಯರ ನಂಬಿಕೆ. ತುಳಸಿ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯ. ತುಳಸಿ, ಪೂಜೆಗೂ ಶ್ರೇಷ್ಠ.

ಅಂದು ತುಳಸಿ ಸಸಿ ನೆಡುವುದರಿಂದ ಶ್ರೀಕೃಷ್ಣನ ಸನ್ನಿಧಿ ಲಭ್ಯವಾಗುತ್ತದೆ, ಕೃಷ್ಣ ತುಳಸಿ, ಶ್ರೀ ತುಳಸಿಯನ್ನು

" ನಮಸ್ತುಳಸೀ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ |

ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿನೀ ||

ಯನ್ಮೂಲೆ ಸರ್ವತೀರ್ಥಾನೀ ಯನ್ಮದ್ಧ್ಯೇ ಸರ್ವದೇವತಾ |

ಯದಗ್ರೇ ಸರ್ವವೇದಾಶ್ಚ ತುಳಸೀ ತ್ವಾಂ ನಮಾಮ್ಯಹಮ್ ||

ಎಂಬ ಶ್ಲೋಕೋಚ್ಚಾರಣೆಯ ಮೂಲಕ ಪೂಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವುದು ಸನಾತನರ ಅಭಿಪ್ರಾಯ.

ತುಳಸಿಯ ಹಿರಿಮೆ: ತುಳಸಿ ಹುಲುಸಾಗಿ ಬೆಳೆದೆಡೆ ಸೊಳ್ಳೆಗಳು ಇರುವುದಿಲ್ಲ. ತುಳಸಿ ಒಂದು ಔಷಧೀಯ ಸಸ್ಯ. ಮಕ್ಕಳಿಗೆ ಕೆಮ್ಮು -ನೆಗಡಿ ಆದರೆ, ತುಳಸಿ ರಸ ಕುಡಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ತುಳಸಿ ಮಾನವನ ಆರೋಗ್ಯಕ್ಕೆ ಸಹಕಾರಿಯಾಗುವುದರ ಜೊತೆ ಜೊತೆಗೆ ಕೋಮಲತೆ, ಪಾವಿತ್ರ್ಯದ ಉದಾತ್ತ ತತ್ವಗಳನ್ನು ಸಾರುತ್ತದೆ. 

ಶ್ರೀಕೃಷ್ಣ ತುಲಾಭಾರದ ಸಮಯದಲ್ಲಿ ಸತ್ಯಭಾಮಾದೇವಿಯು ಖಜಾನೆಯಲ್ಲಿದ್ದ ನಗ ನಾಣ್ಯವನ್ನೇಲ್ಲಾ ಹಾಕಿದರೂ, ಕೃಷ್ಣನ ತೂಕಕ್ಕೆ ಅದು ಸರಿಹೊಂದುವುದಿಲ್ಲ. ಆದರೆ, ರುಕ್ಮಿಣಿ ಮಾತೆ, ಭಕ್ತಿ ಭಾವದಿಂದ ಹಾಕುವ ಒಂದೇ ಒಂದು ದಳ ತುಳಸಿ, ಶ್ರೀಕೃಷ್ಣನ ತೂಕಕ್ಕೆ ಸಮನಾಗುತ್ತದೆ. ಇದು ತುಳಸಿಯ ಹಿರಿಮೆ ಸಾರುವ ಒಂದು ದುಷ್ಟಾಂತ. 

ತುಳಸಿ ಕೇವಲ ಹಿಂದೂಗಳಿಗೆ ಮಾತ್ರ ಪವಿತ್ರವಲ್ಲ. ತುಳಸಿಯ ಬಗ್ಗೆ ಕ್ರೈಸ್ತರು,ಮುಸಲ್ಮಾನರಿಗೂ ಪೂಜ್ಯ ಭಾವನೆಯಿದೆ. ಕ್ರೈಸ್ತರು ತುಳಸಿ ಗಿಡವನ್ನು ಚರ್ಚ್‌ಗೆ ತೆಗೆದುಕೊಂಡು ಹೋಗಿ ಪೂಜಿಸಿ, ನಂತರ ಮನೆಯಂಗಳದಿ ನೆಟ್ಟು, ತಮ್ಮ ಮುಂದಿನ ಬದುಕು,ಸುಖ, ಶಾಂತಿಯಿಂದಿರಲೆಂದು ಪ್ರಾರ್ಥಿಸುತ್ತಾರೆ.ಸೂಫಿ ಪಂಥದಲ್ಲಿಯೂ ತುಳಸಿಯ ಪೂಜಿಸಲಾಗುತ್ತದೆ. ಅವರೂ ತುಳಸಿಗೆ ಮಾನ್ಯತೆ ನೀಡುತ್ತಾರೆ. ಜೈನರೂ ಪೂಜೆಗೆ ತುಳಸಿಯ ದಳ ಬಳಸುತ್ತಾರೆ. ಹಿಂದೂ ದೇವಾಲಯಗಳಲ್ಲಿ ತುಳಸಿ ಮಾಲೆಯಿಂದ ದೇವರನ್ನು ಅರ್ಚಿಸುತ್ತಾರೆ.
********


ಕಲ್ಯಾಣಂ #ತುಳಸಿ #ಕಲ್ಯಾಣಂಕಲ್ಯಾಣಂ ತುಳಸಿ ಕಲ್ಯಾಣಂ‌ ll
ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆಬಲ್ಲಿದ ಶ್ರೀ ವಾಸುದೇವನಿಗೆ ll ಕಲ್ಯಾಣಂ ll
ಅಂಗಣದೊಳಗೆಲ್ಲ ತುಳಸಿಯ ವನ ಮಾಡಿಶೃಂಗಾರ ಮಾಡಿ ಶೀಘ್ರದಿಂದ lಕಂಗಳ ಪಾಪವ ಪರಿಹರಿಸುವ ಮುದ್ದುರಂಗ ಬಂದಲ್ಲಿ ನೆಲೆಸಿದನು ll ಕಲ್ಯಾಣಂ ll
ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟುತಂದ ಶ್ರೀ ಗಂಧಾಕ್ಷತೆ ಪುಷ್ಪದಿಂದ lಸಿಂಧು ಶಯನನ ವೃಂದಾವನದಿ ಪೂಜಿಸೆಕುಂದದ ಭಾಗ್ಯವ ಕೊಡುತಿಹಳು ll ಕಲ್ಯಾಣಂ ll
ಭಕ್ಷ್ಯ ಭೋಜಂಗಳ ನೈವೇದ್ಯವನಿತ್ತು lಲಕ್ಷ ಬತ್ತಿಯ ದೀಪವ ಹಚ್ಚಿ llಅಧೋಕ್ಷಜ ಸಹಿತ ವೃಂದಾವನ ಪೂಜಿಸೆ lಸಾಕ್ಷಾತ್ ಮೋಕ್ಷವ ಕೊಡುತಿಹಳು ll ಕಲ್ಯಾಣಂ ll
ಉತ್ಥಾನ ದ್ವಾದಶಿ ದಿವಸದಿ ಕೃಷ್ಣಗೆಉತ್ತಮ ತುಳಸಿಗೆ ವಿವಾಹವ lಚಿತ್ತ ನಿರ್ಮಲವಾಗಿ ಮಾಡಿದವರಿಗೆಉತ್ತಮ ಗತಿಯೀವ #ಪುರಂದರ #ವಿಠಲ ll ಕಲ್ಯಾಣಂ ll

******

*
ತುಲಸಿಯ ಕತೆ
ಕಾರ್ತೀಕ ಶುದ್ಧ ದ್ವಾದಶಿ.
" ಉತ್ಥಾನ ದ್ವಾದಶಿ" ಎಂದೂ ಕರೆಯುತ್ತಾರೆ.
ತನ್ನಿಮಿತ್ತ ನಿಮಗೆ ತುಲಸಿಯ ಕತೆ.

ತುಳಸೀ ಕಟ್ಟೆಯಲ್ಲಿ ವಿಷ್ಣು ಸ್ವರೂಪವಾದ ನೆಲ್ಲಿ ಕೊಂಬೆಯನ್ನು ನೆಟ್ಟು "ತುಲಸೀ ಪೂಜೆ" ಮಾಡುವ ಸಂಪ್ರದಾಯ ಎಲ್ಲಕಡೆಗಳಲ್ಲಿದೆ.
ಆಷಾಢ ಶುದ್ಧ ಏಕಾದಶಿಯ "ಶಯನೈಕಾದಶಿ" ಯಂದು ಮಲಗಿದ ಮಹಾವಿಷ್ಣುವು ಇಂದು ಏಳುತ್ತಾನೆ.
ಆದ್ದರಿಂದ ಇದಕ್ಕೆ "ಉತ್ಥಾನ (ಏಳುವುದು) ದ್ವಾದಶಿ" ಎಂದು ಹೇಳುತ್ತಾರೆ.

" ಉತ್ಥಾನದ್ವಾದಶಿ-ತುಲಸೀ ವಿವಾಹ "

ವಿಷ್ಣುವಿನ ಯೋಗನಿದ್ರಾಕಾಲದ ಆಷಾಢ ಶುದ್ಧ ದ್ವಾದಶಿಯಿಂದ,ಕಾರ್ತೀಕ ಶುದ್ಧ ದ್ವಾದಶಿವರೆಗಿನ ಈ ನಾಲ್ಕು ತಿಂಗಳು ಮದುವೆ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ.
ಉತ್ತರ ಕರ್ನಾಟಕ ಮತ್ತು ಕರಾವಳಿಯಲ್ಲಿ ಈಗಲೂ ಇದು ಚಾಲ್ತಿಯಲ್ಲಿದೆ.
ತುಲನೆ ಇಲ್ಲದ ಸಸ್ಯವಾದ್ದರಿಂದ ತುಲಸೀ ಎಂಬ ಹೆಸರು ಬಂದಿದೆ.

ಅಮೃತ ಮಂಥನದಲ್ಲಿ ವಿಷ್ಣುವು ಅಮೃತಕಲಶವನ್ನು ನೋಡಿದಾಗ ಅವನ ಕಂಗಳಿಂದ ಹೊರಟ ಆನಂದಾಶ್ರುವು ಅದರಲ್ಲಿ ಬಿದ್ದು ಲಕ್ಷ್ಮಿಯೇ ಸಸ್ಯವಾಗಿ ಉದ್ಭವಿಸಿದ ಗಿಡ ತುಲಸೀ.
ಕೃಷ್ಣನ ತುಲಾಭಾರದಲ್ಲಿ ಎಷ್ಟು ರತ್ನ ವಜ್ರ ವೈಢೂರ್ಯಾದಿಗಳಿಂದಲೂ ಮೇಲೇರದ ತಕ್ಕಡಿಗೆ ರುಕ್ಮಿಣಿ ಹಾಕಿದ ಒಂದು ತುಳಸೀದಳದಿಂದ ಅದು ಮೇಲೇರಿತು.
ಇದು ತುಳಸಿಯ ಶಕ್ತಿ.
ಉತ್ಥಾನ ದ್ವಾದಶಿಯಂದು ವಿಷ್ಣು ಲಕ್ಷ್ಮಿಯೊಂದಿಗೆ ತುಲಸಿಯನ್ನು ವಿವಾಹವಾದನು.

ಜಲಂಧರಾಸುರನು  ಕಂಟಕನಾಗಿ ಅವನ ಪತ್ನಿಯ ಪಾತಿವ್ರತ್ಯ ಪ್ರಭಾವದಿಂದ ಸಂಹರಿಲಾಗದಿದ್ದಾಗ ವಿಷ್ಣುವು ಜಲಂಧರನ ರೂಪಧರಿಸಿ ಅವನ ಪತ್ನಿ ವೃಂದಾಳ ಪಾತಿವ್ರತ್ಯ ಭಂಗ ಮಾಡಿದ ನಂತರ ಜಲಂಧರನ ಸಂಹಾರ ಸಾಧ್ಯವಾಯಿತು.
ಬೃಂದಾಳ ಪಾತಿವ್ರತ್ಯವನ್ನು ಜಲಂಧರನ ರೂಪಧರಿಸಿ ಮೋಸದಿಂದ ಭಂಗ ಮಾಡಿ,ಅವಳೊಂದಿಗೆ ಸುಖಿಸಿ ಶೀಲಹರಣ ಮಾಡಿದ್ದರಿಂದ ಕುಪಿತಳಾದ ಬೃಂದೆಯು,
*ನನಗೆ ಪತಿಯೊಂದಿಗೆ ಸಮಾಗಮಕ್ಕೆ ಅನರ್ಹಳಾಗುವಂತೆ ಮಾಡಿ ಪತಿ ಸಂಗಮ ಸುಖ ವಂಚಿತಳಾಗಿಸಿದ ನಿನಗೂ ಬಹಳ ಕಾಲ ಪತ್ನಿಯಿಂದ ವಿಯೋಗವಾಗಲಿ" ಎಂದು ವಿಷ್ಣುವಿಗೆ ಶಾಪವಿತ್ತಳು.
ಬೃಂದಾಳಿಗೆ (ವೃಂದಾ) ವಿಷ್ಣುವು "ನೀನು ಪತಿವ್ರತೆ.
ಪವಿತ್ರ ತುಳಸಿಯಾಗಿ ಪೂಜೆಗೊಳ್ಳು" ಎಂದು ವರವನ್ನಿತ್ತನು.
ಇದರ ಕುರುಹಾಗಿ ತುಲಸಿಕಟ್ಟೆಗೆ ಬೃಂದಾವನ ಎಂಬ ಹೆಸರು,
ಮತ್ತು ವಿಷ್ಣುಸ್ವರೂಪದ ನೆಲ್ಲಿಕೊಂಬೆಯನ್ನು ತುಲಸಿ ಗಿಡದೊಂದಿಗಿಟ್ಟು ಅಲಂಕರಿಸಿ ದೀಪಗಳನ್ನು ಹಚ್ಚಿ ತುಲಸೀ ವಿವಾಹ ಮಾಡಿ ನಾವು ಆಚರಿಸುತ್ತೇವೆ.
ಅಂದಿನವರೆಗೆ ನೆಲ್ಲಿಕಾಯಿಯನ್ನು ಯಾರೂ ತಿನ್ನುವುದಿಲ್ಲ.ಮನೆಗೆ ತರುವುದಿಲ್ಲ.ಅಲ್ಲಿಯವರೆಗೆನೆಲ್ಲಿಕಾಯಿಗೆ ಅಶೌಚ.
ಆ ದಿನ ತುಳಸಿಯೊಂದಿಗಿಟ್ಟು ಪೂಜಿಸಿದ ನಂತರ ಶುದ್ಧವೆಂದು ಕಿತ್ತು ಉಪಯೋಗಿಸುತ್ತಾರೆ.

ತುಲಸಿಯು ಔಷಧೀಯ ಸಸ್ಯ.
ಜಲಮಾಲಿನ್ಯ,ಅರ್ಬುದ,
ಕೆಮ್ಮು,ಬೊಜ್ಜು,ಮರೆವು,ಮಧುಮೇಹ,ರಕ್ತದ ಏರೊತ್ತಡ,
ಸೊರಿಯಾಸಿಸ್,ಖಿನ್ನತೆ ಚರ್ಮರೋಗಗಳಿಗೆ ತುಲಸಿಯು ದಿವ್ಯೌಷಧ.

ತುಳಸಿಯಲ್ಲಿ ಬಿಳಿ ಮತ್ತು ಕರಿ ತುಳಸಿ ಎಂದು ಎರಡು ಪ್ರಭೇದಗಳಿವೆ.
ರಾಮತುಳಸಿ,ಕೃಷ್ಣತುಳಸಿ ಎಂಬ ಹೆಸರುಗಳೂ ಇವೆ.
ಔಷಧೀಯ ಗುಣ ಎರಡಲ್ಲೂ ಒಂದೇ ರೀತಿ ಇದೆ.
ಸುಮಂಗಲಿಯರು ಪ್ರತಿದಿನ ತುಳಸಿ ಪೂಜೆ ಮಾಡುತ್ತಾರೆ.
ಶಾಲಗ್ರಾಮ ಮತ್ತು ಶಂಖದ ಮೇಲೆ ತಪ್ಪದೆ ತುಳಸಿಯ ಕುಡಿ ಇರಲೇ ಬೇಕು ಎಂದು ಶಾಸ್ತ್ರಗಳು ಸಾರಿವೆ.
ತುಳಸೀದಳ ಮಿಶ್ರಿತ ತೀರ್ಥ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.

ಕ್ಷೀರ ಸಮುದ್ರವನ್ನು ದೇವ-ದಾನವರು ಅಮೃತಕ್ಕಾಗಿ ಕಡೆದಾಗ ಅಮೃತೋದ್ಭವವಾದ ದಿನವೂ "ಉತ್ಥಾನದ್ವಾದಶಿ" ಯ ದಿನ.
ಹಾಗಾಗಿ "ಮಥನ ದ್ವಾದಶಿ,
ಕ್ಷೀರಾಬ್ಧಿ ವ್ರತ" ಎಂಬ ವ್ರತಾಚರಣೆಯೂ ಇಂದು ಆಚರಿಸುತ್ತಾರೆ.

ನಮಸ್ತುಲಸಿ ಕಲ್ಯಾಣೀ
ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವೀ
ನಮಃ ಸಂಪತ್ಪ್ರದಾಯಿನೀ ||

ತುಲಸಿಯ ಬಗ್ಗೆ ಇನ್ನೊಂದು ಕತೆ ಇದೆ.

" ತುಲಸೀ "

ಹಂಸಧ್ವಜನ ಮಗ ಧರ್ಮಧ್ವಜನಿಂದ ಅವನ ಪತ್ನಿ ಮಾಧವಿಯಲ್ಲಿ ಲಕ್ಷ್ಮಿಯ ಅಂಶದಿಂದ ಜನಿಸಿದವಳು ತುಲಸೀ.
ಈಕೆಯು ಬಾಲ್ಯದಲ್ಲಿಯೇ ಬದರಿಕಾಶ್ರಮದಲ್ಲಿ ತಪಸ್ಸು ಮಾಡಿ, ಬ್ರಹ್ಮನಿಂದ "ವಿಷ್ಣು ತನಗೆ ಪತಿಯಾಗಬೇಕೆಂದು" ವರ ಬೇಡಿದಳು.
ಬ್ರಹ್ಮನು "ನಿನ್ನ ಕೋರಿಕೆ ಈಡೇರುತ್ತದೆ.
ಆದರೆ ನೀನು ಗಿಡವಾಗುವೆ" ಎಂದನು.
ದಂಭಾಸುರನ ಮಗ ಶಂಖಚೂಡನು ಜೈಗೀಷವ್ಯ ಮುನಿಯಿಂದ ವಿಷ್ಣು ಮಂತ್ರೋಪದೇಶಪಡೆದು,ಪುಷ್ಕರ ಕ್ಷೇತ್ರದಲ್ಲಿ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದಿದ್ದನು.
ಅಕಸ್ಮಾತ್ತಾಗಿ ಇವರಿಬ್ಬರೂ ಸಂಧಿಸಿ ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ನಾರದರು "ನಿನಗೆ ಶಂಖಚೂಡ,
ಅವನಿಗೆ ನೀನು ಅನುರೂಪ ವಧು-ವರರು" ಮದುವೆಯಾಗಿರಿ ಎಂದರು.
ಅವರ ಮಾತಿನಂತೆ ಅವರಿಬ್ಬರೂ ವಿವಾಹವಾದರು.
ಕೆಲಕಾಲದ ಬಳಿಕ ಶಂಖಚೂಡನು ದೇವತೆಗಳೊಂದಿಗಿನ ಯುದ್ಧದಲ್ಲಿ ಮಡಿದನು.
ವಿಷ್ಣುವು ಶಂಖಚೂಡನ ರೂಪದಲ್ಲಿ ಬಂದು "ನಾನು ದೇವತೆಗಳನ್ನು ಗೆದ್ದು ಬಂದೆನೆಂದಾಗ ಸಂತೋಷದಿಂದ ಅವನನ್ನುಪಚರಿಸಿ, ಸಮಾಗಮ ಹೊಂದಿದಾಗ,
ಕೆಲವು ಕುರುಹುಗಳಿಂದ ಅವನು ಶಂಖಚೂಡನಲ್ಲವೆಂದು ತಿಳಿದು ದೂರ ಸರಿದು ನಿಂತಳು.ವಿಷ್ಣು ತನ್ನ ನಿಜರೂಪ ತೋರಿಸಿ ತಾನೇ ಶಂಖಚೂಡ,ತುಲಸಿಯನ್ನು ವಿವಾಹವಾಗಲು ತಪಸ್ಸು ಮಾಡಿದ್ದೆ ಎಂದಾಗ ಶಂಖಚೂಡ ಮಡಿದ ಸುದ್ದಿ ಕೇಳಿ ತಾನು ಗಿಡವಾದಳು.

ದುರ್ವಾಸನ ಶಾಪದಿಂದ ಪದಭ್ರಷ್ಟನಾದ ಇಂದ್ರನು ದೇವ-ದಾನವರನ್ನು ಸೇರಿಸಿ ಕ್ಷೀರಸಮುದ್ರ ಕಡೆದಾಗ ಅಮೃತ ಕಲಶ ಬಂದಿತು.
ವಿಷ್ಣು ಅದನ್ನೆತ್ತಿಕೊಂಡಾಗ ಅವನ ಕಣ್ಣುಗಳಿಂದ ಹೊರಬಿದ್ದ ಆನಂದಬಾಷ್ಪಗಳು ಕಲಶದಲ್ಲಿ ಬಿದ್ದು ಒಂದು ಸಣ್ಣ ಗಿಡ ಹುಟ್ಟಿತು.ಇದಕ್ಕೆ ತುಲನೆ ( ಹೋಲಿಕೆ ) ಇಲ್ಲವಾಗಿ ತುಲಸಿ ಎಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಲಸಿಯನ್ನು ವಿಷ್ಣುವನ್ನು ಮದುವೆಯಾದನು.
*********

ಉತ್ಥಾನ ದ್ವಾದಶಿ - ತುಳಸಿ ವಿವಾಹ 27/11/2020

ಹಿಂದೂಗಳಿಗೆ ದೀಪಾವಳಿಯ ನಂತರ ಬರುವ ವಿಷೇಶ ಹಬ್ಬವೇ ತುಳಸಿ ಹಬ್ಬ / ವಿವಾಹ. ಈ ಹಬ್ಬವನ್ನು ಕಾರ್ತೀಕ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಮತ್ತು ಹುಣ್ಣಿಮೆಯಂದು ಆಚರಿಸಲಾಗುತ್ತದೆ.  

ಉತ್ಥಾನ ದ್ವಾದಶಿ ಅಂದ್ರೆ ತುಳಸಿ ಹಬ್ಬ. ಕಾರ್ತಿಕ ಮಾಸದಲ್ಲಿ ಉತ್ಥಾನ ದ್ವಾದಶಿ ಅತ್ಯಂತ ಪವಿತ್ರವಾದ ದಿನ. ಉತ್ಥಾನ ಅಂದ್ರೆ ಏದ್ದೇಳು ಎಂದರ್ಥ. ಪುರಾಣಗಳ ಪ್ರಕಾರ, ಶ್ರೀಮನ್ನಾರಾಯಣ ಆಷಾಢ ಶುದ್ಧ ಶಯನ ಏಕಾದಶಿಯಂದು ಮಲಗಿ, ಕಾರ್ತಿಕ ಶುದ್ಧ ದ್ವಾದಶಿಯಂದು ಏಳ್ತಾನೆ. ವಿಷ್ಣು ತನ್ನ ಯೋಗನಿದ್ರೆಯಿಂದ ಎಚ್ಚರವಾಗುವ ದಿನವೇ ಉತ್ಥಾನ ದ್ವಾದಶಿ.

ವೈಕುಂಠದೊಡೆಯ ಶ್ರೀಮನ್ನಾರಾಯಣ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತರಿಗೆ ಈ ದಿನ ದರ್ಶನ ಕೊಡ್ತಾನೆ ಅನ್ನೋ ಪ್ರತೀತಿ ಇದೆ. ಹಾಲ್ಗಡಲಲ್ಲಿ ಮಲಗಿರೋ ಭಗವಂತನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸಲಾಗುತ್ತೆ. ಇದನ್ನ ಕ್ಷೀರಾಬ್ಧಿ ವ್ರತವೆಂದು ಕರೆಯಲಾಗುತ್ತೆ. ಈ ದಿನವನ್ನು ತುಳಸಿ ಹಬ್ಬವೆಂದು ಹೆಂಗೆಳೆಯರು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸ್ತಾರೆ. 

ತುಳಸಿ ಪೂಜಾ ವಿಧಾನ

ಈ ದಿನ ತುಂಬಾ ಸಂಭ್ರಮದಿಂದ ತುಳಸಿ ಮದುವೆಯ ಮಂಟಪ ಸೇರಿದಂತೆ ಮನೆಯನ್ನೆಲ್ಲ ಸಿಂಗರಿಸಬೇಕು. ತುಳಸಿ ಗಿಡದ ಜೊತೆಯಲ್ಲಿ ಬೆಟ್ಟದ ನೆಲ್ಲಿಯ ಗಿಡ ಮತ್ತು ಹುಣಸೆಯ ಗಿಡಗಳನ್ನು ಇಡಬೇಕು. ಮಹಾವಿಷ್ಣುವಿನ ಅವತಾರವಾದ ಶ್ರೀಕೃಷ್ಣನ ಮೂರ್ತಿಯನ್ನು ಸ್ಥಾಪಿಸಿ ವೈಭವದಿಂದ ಪೂಜೆ ಮಾಡಬೇಕು. ವಿಶೇಷವಾಗಿ ಪೂಜೆಯ ನೈವೇದ್ಯಕ್ಕಾಗಿ ಬೆಲ್ಲ ಹಾಕಿದ ಅವಲಕ್ಕಿಯನ್ನು ತಯಾರಿಸುತ್ತಾರೆ.  ಇಂದಿನಿಂದ ಹಿಂದೂ ವಿವಾಹ ಕಾರ್ಯಗಳ ಆರಂಭವೂ ಆಗಿರುತ್ತದೆ.

● ಪೂಜೆಗೆ ಮುನ್ನ ಎಲ್ಲಾ ಮಂಗಳ ದ್ರವ್ಯಗಳನ್ನು ಜೋಡಿಸಿಟ್ಟುಕೊಳ್ಳಿ

● ಮೊದಲು ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ತುಳಸಿ ಪೂಜೆ ಮಾಡಿ

● ಕುಟುಂಬ ಸದಸ್ಯರೆಲ್ಲಾ ಸೇರಿ ತುಳಸಿ ಪೂಜೆ ಮಾಡಿ

● ಗೋಧೂಳಿ ಸಮಯದಲ್ಲಿ ತುಳಸಿ-ದಾಮೋದರರ ವಿವಾಹ ಮಾಡಿ

● ತುಳಸಿ ಮತ್ತು ಕೃಷ್ಣನ ಆವಾಹನೆ ಮಾಡಿ

● ತುಳಸಿಗೆ ಅಭಿಮುಖವಾಗಿ ಕೃಷ್ಣನ ವಿಗ್ರಹವನ್ನಿಡಿ

● ತುಳಸಿ ಮಂಟಪದಲ್ಲಿ ಬೆಟ್ಟದ ನೆಲ್ಲಿಕಾಯಿ ಗಿಡವನ್ನಿಡಿ

● ಮನೆಯವರೆಲ್ಲಾ ಸೇರಿ ಸಂಕಲ್ಪ ಮಾಡಿ ಪ್ರಾರ್ಥನೆ ಸಲ್ಲಿಸಿ

● ತುಳಸಿಗೆ ಷೋಡಶೋಪಚಾರ ವಿಧಿಯ ಮೂಲಕ ಪೂಜೆ ಮಾಡಿ

● ತುಳಸಿಗೆ ಮಾಂಗಲ್ಯಧಾರಣೆ ಮಾಡಿಸಿ

● ಲಕ್ಷ್ಮೀಯನ್ನು ಮನದಲ್ಲಿ ಧ್ಯಾನಿಸಿ ತುಳಸಿ ಪೂಜೆ ಮಾಡಿ

● ಬಾಳೆದಿಂಡಿನ ಮೇಲೆ ತುಪ್ಪದ ದೀಪ ಹಚ್ಚಿಡಿ

● ತುಳಸಿಗೆ ಅವಲಕ್ಕಿ, ಬೆಲ್ಲದ ನೈವೇದ್ಯ ಅರ್ಪಿಸಿ

● ಮುತ್ತೈದೆಯರೆಲ್ಲಾ ಸೇರಿ ತುಳಸಿಗೆ ಆರತಿ ಮಾಡಿ

● ಮುತ್ತೈದೆಯರಿಗೆ ಅರಿಶಿನ-ಕುಂಕುಮ, ತಾಂಬೂಲ ಕೊಡಿ

ತುಳಸಿ ವಿವಾಹ ಮಾಡುವುದರಿಂದ ದೊರೆಯುವ ಪ್ರಯೋಜನಗಳು

🌿 ಮನೆಯಲ್ಲಿ ಮಕ್ಕಳ ಮದುವೆಗೆ ಇರುವ ಅಡೆತಡೆಗಳು ದೂರವಾಗುತ್ತದೆ

🌿 ಮನೆಗೆ ಐಶ್ಚರ್ಯ ಲಭಿಸುತ್ತದೆ

🌿 ಮನೆಯವರ ಶ್ರೇಯಸ್ಸಿಗಾಗಿ ಈ ಪೂಜೆ ಮಾಡಲಾಗುವುದು

🌿 ಮಕ್ಕಳ ಭಾಗ್ಯ ಲಭಿಸುವುದು

🌿 ಕನ್ಯಾದಾನ ಮಾಡುವ ಭಾಗ್ಯ ದೊರೆಯುವುದು

ಕೆಲವು ಪ್ರಾಂತ್ಯಗಳಲ್ಲಿ ಈ ಆಚರಣೆಯು ಬೇರೆ ಬೇರೆ ವಿಧಾನವನ್ನು ಹೊಂದಿದ್ದರೂ, ಎಲ್ಲೆಡೆಯೂ ವಿಷ್ಣು ಮತ್ತು ತುಳಸಿಯ ವಿವಾಹವನ್ನು ಮಾಡಿ ಖುಶಿ ಪಡುತ್ತಾರೆ. ಇವೆಲ್ಲ ಏನೇ ಆದರೂ ಈ ತುಳಸಿಯ ಸಾಂಗತ್ಯವು ಮಾನವನ ಆರೋಗ್ಯ ವೃದ್ಧಿಯ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಅದಕ್ಕಾಗಿಯೇ ಹಿರಿಯರು ತುಳಸಿಗೆ ಇಷ್ಟು ಮಹತ್ವದ ಸ್ಥಾನವನ್ನು ನೀಡಿದ್ದಾರೆ.

ಕಾರ್ತೀಕ ಮಾಸದಲ್ಲಿ ಪ್ರತಿದಿನ ತುಳಸಿಗೆ ಪೂಜೆ ಮಾಡಬೇಕು, ಸಂಧ್ಯಾ (ಸಾಯಂಕಾಲ) ಕಾಲದಲ್ಲಿ  ದೀಪವನ್ನು ಬೆಳಗುವುದರಿಂದ ಒಂದು ಯುಗದಲ್ಲಿ ಮಾಡಿದ ಪಾಪಗಳೆಲ್ಲವೂ ಕಳೆಯುತ್ತವೆ   ವಿಶೇಷವಾಗಿ ಹಾಲಿನ ಅಭಿಷೇಕವನ್ನು ಮಾಡುವುದರಿಂದ ದೇವಾನು ದೇವತೆಗಳ ಆಶೀರ್ವಾದ ಲಭಿಸಿ ಇಷ್ಟಾರ್ತಗಳೆಲ್ಲವೂ ನೆರವೇರುವುತ್ತವೆ
ಧನ್ಯವಾದಗಳು * mohanskumar *
*********

ಶ್ರೀತುಲಸೀಮಾಹಾತ್ಮ್ಯಮ್  ಸ್ತೋತ್ರಂ

ಪಾಪಾನಿ ಯಾನಿ ರವಿಸೂನುಪಟಸ್ಥಿತಾನಿ
ಗೋಬ್ರಹ್ಮಬಾಲಪಿತೃಮಾತೃವಧಾದಿಕಾನಿ |
ನಶ್ಯಂತಿ ತಾನಿ ತುಲಸೀವನದರ್ಶನೇನ
ಗೋಕೋಟಿದಾನಸದೃಶಂ ಫಲಮಾಪ್ನುವಂತಿ || ೧ ||

ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ಥತಾ |
ವಾಸುದೇವಾದಯೋ ದೇವಾ ವಸಂತಿ ತುಲಸೀವನೇ || ೨ ||

ತುಲಸೀಕಾನನಂ ಯತ್ರ ಯತ್ರ ಪದ್ಮವನಾನಿ ಚ |
ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ || ೩ ||

ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ || ೪ ||
ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ |
ನಮಸ್ತೇ ನಾರದನುತೇ ನಾರಾಯಣಮನಃಪ್ರಿಯೇ || ೫ ||

ರಾಜದ್ವಾರೇ ಸಭಾಮಧ್ಯೇ ಸಂಗ್ರಾಮೇ ಶತ್ರುಪೀಡನೇ |
ತುಲಸೀಸ್ಮರಣಂ ಕುರ್ಯಾತ್ ಸರ್ವತ್ರ ವಿಜಯೀ ಭವೇತ್ || ೬ ||

ತುಲಸ್ಯಮೃತಜನ್ಮಾಽಸಿ ಸದಾ ತ್ವಂ ಕೇಶವಪ್ರಿಯೇ |
ಕೇಶವಾರ್ಥೇ ಚಿನೋಮಿ ತ್ವಾಂ ವರದಾ ಭವ ಶೋಭನೇ || ೭ ||

ಮೋಕ್ಷೈಕಹೇತೋರ್-ಧರಣೀ-ಧರಸ್ಯ ವಿಷ್ಣೋಃ  
ಸಮಸ್ತಸ್ಯ ಗುರೋಃ ಪ್ರಿಯಸ್ಯ |  
ಆರಾಧನಾರ್ಥಂ ಪುರುಷೋತ್ತಮಸ್ಯ  
ಛಿಂದೇ ದಲಂ ತೇ ತುಲಸಿ ಕ್ಷಮಸ್ವ || ೮ ||

ಕೃಷ್ಯಾರಂಭೇ ತಥಾ ಪುಣ್ಯೇ ವಿವಾಹೇ ಚಾರ್ಥಸಂಗ್ರಹೇ |
ಸರ್ವಕಾರ್ಯೇಷು ಸಿದ್ದ್ಯರ್ಥಂ ಪ್ರಸ್ಥಾನೇ ತುಲಸೀಂ ಸ್ಮರೇತ್ || ೯ ||

ಯಃ ಸ್ಮರೇತ್ ತುಲಸೀಂ ಸೀತಾಂ ರಾಮಂ ಸೌಮಿತ್ರಿಣಾ ಸಹ |
ವಿನಿರ್ಜಿತ್ಯ ರಿಪೂನ್ ಸರ್ವಾನ್ ಪುನರಾಯಾತಿ ಕಾರ್ಯಕೃತ್ || ೧೦ ||

ಯಾ ದೃಷ್ಟಾ ನಿಖಿಲಾಘಸಂಘಶಮನೀ ಸ್ಪೃಷ್ಟಾ ವಪುಃಪಾವನೀ  
ರೋಗಾಣಾಮಭಿವಂದಿತಾ ನಿರಸನೀ ಸಿಕ್ತಾಽಂತಕತ್ರಾಸಿನೀ |  
ಪ್ರತ್ಯಾಸತ್ತಿವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ  
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮಃ || ೧೧ ||  

ಖಾದನ್ ಮಾಂಸಂ ಪಿಬನ್ ಮದ್ಯಂ ಸಂಗಚ್ಛನ್ನಂತ್ಯಜಾದಿಭಿಃ |
ಸದ್ಯೋ ಭವತಿ ಪೂತಾತ್ಮಾ ಕರ್ಣಯೋಸ್ತುಲಸೀಂ ಧರನ್ || ೧೨ ||

ಚತುಃ ಕರ್ಣೇ ಮುಖೇ ಚೈಕಂ ನಾಭಾವೇಕಂ ತಥೈವ ಚ |  
ಶಿರಸ್ಯೇಕಂ ತಥಾ ಪ್ರೋಕ್ತ ತೀರ್ಥೇ ತ್ರಯಮುದಾಹೃತಮ್ || ೧೩ ||  
 
ಅನ್ನೋಪರಿ ತಥಾ ಪಂಚ ಭೋಜನಾಂತೇ ದಲತ್ರಯಮ್ |  
ಏವಂ ಶ್ರೀತುಲಸೀಂ ಗ್ರಾಹ್ಯಾ ಅಷ್ಟಾದಶದಲಾ ಸದಾ || ೧೪ ||  

|| ಇತಿ ಶ್ರೀತುಲಸೀಮಾಹಾತ್ಮ್ಯಮ್ ||
******

ತಂ ನಾರಸಿಂಹಂ ನಮಾಮಿ !

ತುಳಸೀಮಾಹಾತ್ಮ್ಯಂ :-
(ತುಳಸೀಸ್ತೋತ್ರಂ)

ಮೋಕ್ಷೈಕಹೇತೋರ್ಧರಣೀಧರಸ್ಯ
ವಿಷ್ಣೋಃ ಸಮಸ್ತಸ್ಯ ಗುರೋಃ ಪ್ರಿಯಸ್ಯ ! 
ಆರಾಧನಾರ್ಥಂ ಪುರುಷೋತ್ತಮಸ್ಯ 
ಛಿಂದೇ ದಲಂ ತೇ ತುಳಸಿ ಕ್ಷಮಸ್ವ !! ೮ !!

ಅರ್ಥ :- ಹೇ ತುಳಸಿದೇವಿ  ಮೋಕ್ಷವನ್ನು ಕೊಡಲಿಕ್ಕೆ ಮುಖ್ಯ ಕಾರಣನಾದ, ಭೂಮಿಯನ್ನು ಧರಿಸಿದ, ಎಲ್ಲಾ ಗುರುಗಳಿಗೂ ಪ್ರಿಯನಾದ, ಆ ಪುರುಷೋತ್ತಮರೂಪಿಯಾದ ವಿಷ್ಣುವಿನ ಆರಾಧನೆಗಾಗಿ (ಪೂಜೆಗಾಗಿ) ನಿನ್ನನ್ನು (ನಿನ್ನ ದಳವನ್ನು) ಛೇದಿಸುತ್ತೇನೆ (ಬಿಡಿಸುತ್ತೇನೆ) ಅಂತ ಪ್ರಾರ್ಥನೆ ಮಾಡಿ ತುಳಸೀದಳಗಳನ್ನು ಬಿಡಿಸಬೇಕು.

ತುಳಸಿದೇವಿಯ ಅಂತರ್ಗತ ದಾಮೋದರನು ಮೋಕ್ಷವನ್ನು ಕರುಣಿಸಲಿ.
ಸರ್ವೇ ಜನಾಃ ಸುಖಿನೋ ಭವಂತು ! 
ಸುಘೋಷಾಚಾರ್ಯ ಕೊರ್ಲಹಳ್ಳಿ
*******

ತುಲಸೀಮಾಲಾಧಾರಣ ಮಂತ್ರ –
 तुलसीमालाधारण मंत्र –


ತುಲಸೀಕಾಷ್ಟಸಂಭೂ:ತೇ ಮಾಲೇ ಕೃಷ್ಣಜನಪ್ರಿಯೇ |
ಬಿಭರ್ಮಿ ತ್ವಾಮಹಂ ಕಂಠೇ ಕುರು ಮಾಂ ಕೃಷ್ಣವಲ್ಲಭಂ |

तुलसीकाष्टसंभू:ते माले कृष्णजनप्रिये ।
बिभर्मि त्वामहं कंठे कुरु मां कृष्णवल्लभं ।


तुलसी मृत्तिकाधारण मंत्र –
 ತುಲಸೀ ಮೃತ್ತಿಕಾಧಾರಣ ಮಂತ್ರ –

ललाटे यस्य दृश्यते तुलसीमूलमृत्तिका ।
यमस्तं नेक्षितुं शक्त: दूता भयंकरा: ||

ಲಲಾಟೇ ಯಸ್ಯ ದೃಶ್ಯತೇ ತುಲಸೀಮೂಲಮೃತ್ತಿಕಾ |
ಯಮಸ್ತಂ ನೇಕ್ಷಿತುಂ ಶಕ್ತ: ದೂತಾ ಭಯಂಕರಾ: ||
***

ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ ಬಹಳ ಶ್ರೇಷ್ಠ
ಅದಕ್ಕಾಗಿ ಕಿರು ಮಾಹಿತಿ

#ತುಳಸೀದರ್ಶನ #ಗೋದಾನಕ್ಕೆ #ಸಮ

ಸ್ನಾನವಾದ ನಂತರ ಪಾತ್ರೆಯೊಂದರಲ್ಲಿ ನೀರು ತೆಗೆದುಕೊಂಡು ಕ್ರಮ ಪ್ರಕಾರ ಹೊಸ್ತಿಲು #ಪೂಜೆಯನ್ನು ಮುಗಿಸಿ #ತುಳಸೀ ವೃಂದಾವನದ ಸನ್ನಿಧಿಗೆ ಬರಬೇಕು. ವೃಂದಾವನವು ಒದ್ದೆಯಾಗುವಂತೆ ಹೊಸ್ತಿಲಿನ ಮೇಲಿಟ್ಟಿದ್ದ ತಂಬಿಗೆಯಿಂದ ನೀರೆರೆದು ,ತುಳಸೀ ಮೂಲದಲ್ಲಿ ಇರುವ ನೀರನ್ನು ತಲೆಗೆ #ಪ್ರೋಕ್ಷಣೆ ಮಾಡಿಕೊಂಡು,ತುಳಸೀ #ಮೂಲಮೃತ್ತಿಕೆಯಿಂದ ಹಣೆಯಲ್ಲಿ ಊರ್ಧ್ವಪುಂಡ್ರವನ್ನು ಧರಿಸಿ, #ಪ್ರದಕ್ಷಿಣೆ ಬಂದು ನಮಸ್ಕರಿಸಬೇಕು.ಈ ಸಮಯದಲ್ಲಿ ತುಳಸೀ ಮಹತ್ವವನ್ನು ತಿಳಿಸುವ ಶ್ಲೋಕಗಳನ್ನು ಹೇಳಿಕೊಳ್ಳಬೇಕು.

ಪಾಪಾನಿ ಯಾನಿ ರವಿಸೂನು ಪಟಸ್ಥಿತಾನಿ ಗೋಬ್ರಹ್ಮಬಾಲಾಪಿತೃಮಾತೃ ವಧಾದಿಕಾನಿ |
ನಶ್ಯಂತಿ ತಾನಿ ತುಳಸೀವನದರ್ಶನೇನ ಗೋಕೋಟಿದಾನ ಸದೃಶಂ ಫಲಮಾಪ್ನುವಂತಿ ||1||

#ತುಳಸೀವೃಂದಾವನವನ್ನು ದರ್ಶನ ಮಾಡುವುದರಿಂದ ಕೋಟಿ ಗೋವುಗಳನ್ನು ದಾನವಿತ್ತ ಫಲ ಲಭಿಸುತ್ತದೆ.ರವಿಸುತನಾದ #ಯಮನ (#ಚಿತ್ರಗುಪ್ತನ) ಬರೆಯುವ ಬಟ್ಟೆಯಲ್ಲಿ ಉಲ್ಲೇಖಿಸಿರುವ ಗೋಹತ್ಯೆ,ಬ್ರಹ್ಮಹತ್ಯೆ, ಬಾಲಹತ್ಯೆ,ಮಾತೃವಧ, ಪಿತೃವಧೆಯಂತಹ ಪಾತಕಗಳು ತುಳಸೀವೃಂದಾವನ ದರ್ಶನದಿಂದ ನಾಶವಾಗುತ್ತವೆ.

ಲಲಾಟೇ ಯಸ್ಯ ದೃಶ್ಯೇತ ತುಳಸೀಮೂಲಮೃತ್ತಿಕಾ |
ಯಮಸ್ತಂ ನೇಕ್ಷಿತುಂ ಶಕ್ತಃ ಕಿಮು ದೂತಾ ಭಯಂಕರಾಃ ||2||

ತುಳಸೀಗಿಡದ ಬುಡದಲ್ಲಿರುವ ಮೃತ್ತಿಕೆಯನ್ನು ಹಣೆಯಲ್ಲಿ ಧರಿಸಿದವರ ಮುಖವನ್ನು ಯಮನೇ ಕತ್ತೆತ್ತಿ ನೋಡಲಾಗದು.ಇನ್ನು ಯಮನ ದೂತರು ನೋಡಬಲ್ಲರೇ?ತುಳಸೀ ಮೃತ್ತಿಕೆಯ ಧಾರಣೆಯಿಂದ ಅಪಮೃತ್ಯುವಿರುವುದಿಲ್ಲ.

ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ತಥಾ|
ವಾಸುದೇವಾದಯೋ ದೇವಾ:  ವಸಂತಿ ತುಳಸೀವನೇ ||3||

ತುಳಸೀವನದಲ್ಲಿ (#ಬೃಂದಾವನದಲ್ಲಿ) ಪುಷ್ಕರಾದಿ ಸರೋವರ ತೀರ್ಥಗಳು, ಗಂಗೆಯೇ ಮೊದಲಾದ ನದಿತೀರ್ಥಗಳು, ವಾಸುದೇವಾದಿ ದೇವತೆಗಳೆಲ್ಲಾ ನೆಲೆಸಿರುತ್ತಾರೆ..

ತುಳಸೀ ಕಾನನಂ ಯತ್ರ ಯತ್ರ ಪದ್ಮವನಾನಿ ಚ |
ವಸಂತಿ ವೈಷ್ಣವಾ  ಯತ್ರ ತತ್ರ ಸನ್ನಿಹಿತೋ ಹರಿಃ ||4||

ತುಳಸೀ ಕಾನನವೇ ಒಂದು ಪುಣ್ಯಕ್ಷೇತ್ರ.ತುಳಸೀವನ,ಪದ್ಮಸಮುದಾಯ,ವೈಷ್ಣವ ವಾಸ ಇವುಗಳಿರುವ ಪ್ರದೇಶದಲ್ಲಿ ಶ್ರಿ ಹರಿಯ ನಿತ್ಯಸನ್ನಿಧಾನವಿರುತ್ತದೆ

ಯನ್ಮೂಲೇ ಸರ್ವತೀರ್ಥಾನಿ ಯನ್ಮ ಧ್ಯೇ ಸರ್ವದೇವತಾಃ |
ಯದಗ್ರೇ ಸರ್ವವೇದಾಶ್ಚ ತುಳಸಿ ತ್ವಾಂ ನಮಾಮ್ಯಹಮ್ ||5||

ತುಳಸಿಯ ಬುಡದಲ್ಲಿ ಗಂಗಾದಿ ಸರ್ವತೀರ್ಥಗಳು.ಮಧ್ಯದಲ್ಲಿ ವಿಷ್ಣುವೇ ಮೊದಲಾದ ಎಲ್ಲಾ ಸರ್ವದೇವತೆಗಳು.ತುದಿಯಲ್ಲಿ ಋಗ್ವಾದಿ ಚತುರ್ವೇದಗಳು ನೆಲೆಸಿರುತ್ತವೆ. ಅಂತಹ ತುಳಸಿ ದೇವಿಯೇ, ನಿನಗೆ ನನ್ನ ನಮಸ್ಕಾರಗಳು. 

ಪ್ರಸೀದ #ತುಳಸೀದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದಮಥನೋದ್ಭೂತೇ ತುಳಸೀ ತ್ವಾಂ ನಮಾಮ್ಯಹಮ್ ||6||

ಪಾಲ್ಗಡಲನ್ನು ಕಡೆದಾಗ ಭಗವಂತ ಧನ್ವಂತರಿಯ ಆನಂದಾಶ್ರುವಿನಿಂದ ಅಮೃತ ಕಲಶದಲ್ಲಿ ಆವಿರ್ಭವಿಸಿದ ಹರಿಪ್ರಿಯಳಾದ ಓ ದೇವಿ ತುಳಸಿ! ನಾನು ನಿನಗೆ ನಮಿಸುತ್ತೇನೆ.

ಯಾ ದೃಷ್ಟ್ವಾ ನಿಖಿಲಾಘಸಂಘಶಮನೀ ಸ್ಪೃಷ್ಟಾ ವಪುಃಪಾವನೀ
ರೋಗಾಣಾಮಭಿವಂದಿತಾ ನಿರಸನೀ ಸಿಕ್ತಾsoತಕತ್ರಾಸಿನೀ |
ಪ್ರತ್ಯಾಸತ್ತಿವಿಧಾಯಿನೀ ಭಗವತಃ ಕೃಷ್ಣಸ್ಯ ಸಂರೋಪಿತಾ
ನ್ಯಸ್ತಾ ತಶ್ಚರಣೇ ವಿಮುಕ್ತಿಫಲದಾ ತಸ್ಯೈ ತುಳಸ್ಯೈ ನಮಃ ||7||

ತುಳಸಿಯನ್ನು ನೋಡಿದೊಡನೆ ಸಕಲಪಾಪಗಳು ನಾಶವಾಗುತ್ತವೆ.ಮುಟ್ಟಿದೊಡೆ ದೇಹ ಪಾವನವಾಗುತ್ತದೆ.ನಮಿಸಿದೊಡೆ ಪಾಪ ನಿರಸನ ಹೊಂದುತ್ತದೆ .ಎರೆದೊಡೆ ಮೃತ್ಯುತ್ರಾಸನ ದೂರವಾಗುತ್ತದೆ. ನೆಟ್ಟೊಡೆ #ಶ್ರೀಕೃಷ್ಣ ಮೇಲೆ ಭಕ್ತಿ ಭಾವ ವೃದ್ಧಿಯಾಗುತ್ತದೆ.ಕೃಷ್ಣನ ಪಾದದಲ್ಲಿ ಸಮರ್ಪಿಸಿದೊಡನೆ ಮೋಕ್ಷ ದೊರೆಯುತದೆ .ಇಂತಹ ಮಹಿಮೆಯುಳ್ಳ ಶ್ರೀ ದೇವಿ ತುಳಸಿ! ನಾನು ನಿನಗೆ ನಮಿಸುತ್ತೇನೆ.

ತುಳಸಿ ಶ್ರೀಸಖಿ  ಶುಭೇ!ಪಾಪಹಾರಿಣಿ  ಪುಣ್ಯದೇ|
ನಮಸ್ತೇ ನಾರದನುತೇ ನಾರಾಯಣ ಮನಃಪ್ರಿಯೇ ||

ಶ್ರೀ ಲಕ್ಷ್ಮಿಸಖಿಯಾದ,ಪಾಪಗಳನ್ನು ಪರಿಹರಿಸುವ,ಪುಣ್ಯವನ್ನು ನೀಡುವ,ನಾರದ ಮಹರ್ಷಿಯ ಸುತೆಯಾಗಿರುವ ಮತ್ತು ಶ್ರೀಮನ್ನಾರಾಯಣನ ಮನಸ್ಸಿಗೆ ಹತ್ತಿರವಿರುವ ತುಳಸೀ ದೇವಿಯೇ,ನಿನಗೆ ಪ್ರಣಾಮಗಳು.
****
ಶ್ರೀ ತುಲಸೀ ಸ್ತೋತ್ರಂ

ಜಗದ್ಧಾತ್ರಿ ನಮಸ್ತುಭ್ಯಂ ವಿಷ್ಣೋಶ್ಚ ಪ್ರಿಯವಲ್ಲಭೇ |
ಯತೋ ಬ್ರಹ್ಮಾದಯೋ ದೇವಾಃ ಸೃಷ್ಟಿಸ್ಥಿತ್ಯಂತಕಾರಿಣಃ ||

ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿಕೇ ||

ತುಲಸೀ ಪಾತು ಮಾಂ ನಿತ್ಯಂ ಸರ್ವಾಪದ್ಭ್ಯೋಽಪಿ ಸರ್ವದಾ |
ಕೀರ್ತಿತಾ ವಾಪಿ ಸ್ಮೃತಾ ವಾಪಿ ಪವಿತ್ರಯತಿ ಮಾನವಮ್ ||

ನಮಾಮಿ ಶಿರಸಾ ದೇವೀಂ ತುಲಸೀಂ ವಿಲಸತ್ತನುಂ |
ಯಾಂ ದೃಷ್ಟ್ವಾ ಪಾಪಿನೋ ಮರ್ತ್ಯಾಃ ಮುಚ್ಯಂತೇ ಸರ್ವಕಿಲ್ಬಿಷಾತ್ ||

ತುಲಸ್ಯಾ ರಕ್ಷಿತಂ ಸರ್ವಂ ಜಗದೇತಚ್ಚರಾಚರಂ |
ಯಾ ವಿನರ್ಹಂತಿ ಪಾಪಾನಿ ದೃಷ್ಟ್ವಾ ವಾ ಪಾಪಿಭಿರ್ನರೈಃ ||

ನಮಸ್ತುಲಸ್ಯತಿತರಾಂ ಯಸ್ಯೈ ಬದ್ಧಾಂಜಲಿಂ ಕಲೌ |
ಕಲಯಂತಿ ಸುಖಂ ಸರ್ವಂ ಸ್ತ್ರಿಯೋ ವೈಶ್ಯಾಸ್ತಥಾಽಪರೇ ||

ತುಲಸ್ಯಾ ನಾಪರಂ ಕಿಂಚಿದ್ದೈವತಂ ಜಗತೀತಲೇ |
ಯಥಾ ಪವಿತ್ರಿತೋ ಲೋಕೋ ವಿಷ್ಣುಸಂಗೇನ ವೈಷ್ಣವಃ ||

ತುಲಸ್ಯಾಃ ಪಲ್ಲವಂ ವಿಷ್ಣೋಃ ಶಿರಸ್ಯಾರೋಪಿತಂ ಕಲೌ |
ಆರೋಪಯತಿ ಸರ್ವಾಣಿ ಶ್ರೇಯಾಂಸಿ ವರಮಸ್ತಕೇ ||

ತುಲಸ್ಯಾಂ ಸಕಲಾ ದೇವಾ ವಸಂತಿ ಸತತಂ ಯತಃ |
ಅತಸ್ತಾಮರ್ಚಯೇಲ್ಲೋಕೇ ಸರ್ವಾನ್ ದೇವಾನ್ ಸಮರ್ಚಯನ್ ||

ನಮಸ್ತುಲಸಿ ಸರ್ವಜ್ಞೇ ಪುರುಷೋತ್ತಮವಲ್ಲಭೇ |
ಪಾಹಿ ಮಾಂ ಸರ್ವ ಪಾಪೇಭ್ಯಃ ಸರ್ವಸಮ್ಪತ್ಪ್ರದಾಯಿಕೇ ||

ಇತಿ ಸ್ತೋತ್ರಂ ಪುರಾ ಗೀತಂ ಪುಂಡರೀಕೇಣ ಧೀಮತಾ |
ವಿಷ್ಣುಮರ್ಚಯತಾ ನಿತ್ಯಂ ಶೋಭನೈಸ್ತುಲಸೀದಲೈಃ ||

ತುಲಸೀ ಶ್ರೀರ್ಮಹಾಲಕ್ಷ್ಮೀರ್ವಿದ್ಯಾವಿದ್ಯಾ ಯಶಸ್ವಿನೀ |
ಧರ್ಮ್ಯಾ ಧರ್ಮಾನನಾ ದೇವೀ ದೇವದೇವಮನಃಪ್ರಿಯಾ ||

ಲಕ್ಷ್ಮೀಪ್ರಿಯಸಖೀ ದೇವೀ ದ್ಯೌರ್ಭೂಮಿರಚಲಾ ಚಲಾ |
ಷೋಡಶೈತಾನಿ ನಾಮಾನಿ ತುಲಸ್ಯಾಃ ಕೀರ್ತಯನ್ನರಃ ||

ಲಭತೇ ಸುತರಾಂ ಭಕ್ತಿಮಂತೇ ವಿಷ್ಣುಪದಂ ಲಭೇತ್ |
ತುಲಸೀ ಭೂರ್ಮಹಾಲಕ್ಷ್ಮೀಃ ಪದ್ಮಿನೀ ಶ್ರೀರ್ಹರಿಪ್ರಿಯಾ ||

ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ |
ನಮಸ್ತೇ ನಾರದನುತೇ ನಾರಾಯಣಮನಃಪ್ರಿಯೇ ||

ಇತಿ ಶ್ರೀಪುಂಡರೀಕಕೃತಂ ತುಲಸೀಸ್ತೋತ್ರಮ್ ||
***
 
ತುಳಸಿ ಪೂಜೆಯ ಈ ವಿಶೇಷ ಆಚರಣೆಗಳನ್ನು ನೀವು ಅನುಸರಿಸಲೇಬೇಕು..!

ಹಿಂದೂ ಧರ್ಮದ ಪ್ರಕಾರ, ಭಗವಾನ್ ವಿಷ್ಣುವು ಆಳವಾದ ನಿದ್ರೆಯಿಂದ ಎಚ್ಚರಗೊಳ್ಳುವ ದಿನದಂದು ತುಳಸಿ ವಿವಾಹವನ್ನು ಆಚರಿಸಲಾಗುತ್ತದೆ, ಇದನ್ನು ದೇವುತ್ಥಾನ ಏಕಾದಶಿ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ನಾಲ್ಕು ತಿಂಗಳ ನಂತರ, ಈ ದಿನ, ಭಗವಾನ್ ಹರಿ ವಿಷ್ಣು ತನ್ನ ಗಾಢ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಈ ದಿನ ಸಾಲಿಗ್ರಾಮ ಮತ್ತು ತುಳಸಿ ಗಿಡದ ವಿವಾಹವನ್ನು ಮಾಡಲಾಗುತ್ತದೆ.  
                                                                                                            ಉಪವಾಸ ಆಚರಣೆ

ತುಳಸಿ ವಿವಾಹ ಸಮಾರಂಭವು ಯಾವುದೇ ಸಾಂಪ್ರದಾಯಿಕ ಹಿಂದೂ ವಿವಾಹದಂತೆ ಇರುತ್ತದೆ. ವಿವಿಧ ದೇವಾಲಯಗಳಲ್ಲಿ ಆಚರಣೆಗಳು ಕಂಡುಬರುತ್ತವೆ, ಆದರೂ ಒಬ್ಬರು ತಮ್ಮ ಮನೆಯಲ್ಲಿ ಈ ಮದುವೆಯನ್ನು ಸುಲಭವಾಗಿ ಮಾಡಬಹುದು. ತುಳಸಿ ವಿವಾಹವನ್ನು ಮಾಡುವವರು ಈ ದಿನ ಮುಂಜಾನೆಯಿಂದ ಸಂಜೆಯವರೆಗೆ ಉಪವಾಸವನ್ನು ಮಾಡಬೇಕು.

​ತುಳಸಿ ಅಲಂಕಾರ

ಇದರೊಂದಿಗೆ ತುಳಸಿ ಗಿಡದ ಸುತ್ತ ಕಬ್ಬಿನ ಗಿಡವನ್ನು ಇಟ್ಟು ಮಂಟಪವನ್ನು ಮಾಡುತ್ತಾರೆ. ಜೊತೆಗೆ ಬಣ್ಣಬಣ್ಣದ ರಂಗೋಲಿಯಿಂದ ತುಳಸಿಯನ್ನು ಅಲಂಕರಿಸಲಾಗುತ್ತದೆ. ತುಳಸಿ ಸಸ್ಯವು ಭಾರತೀಯ ವಧುವಿನಂತೆಯೇ ಬೆರಗುಗೊಳಿಸುವ ಸೀರೆಗಳು, ಕಿವಿಯೋಲೆಗಳು ಮತ್ತು ಇತರ ಆಭರಣಗಳಿಂದ ಸುಂದರವಾಗಿ ಅಲಂಕರಿಸಲ್ಪಡುತ್ತದೆ. ತುಳಸಿ ಗಿಡಕ್ಕೆ ಸಿಂಧೂರದ ಪುಡಿ ಮತ್ತು ಅರಿಶಿನವನ್ನು ಸಹ ಅನ್ವಯಿಸಲಾಗುತ್ತದೆ. ಕಾಗದದ ಮೇಲೆ ಚಿತ್ರಿಸಿದ ಮುಖವನ್ನು ತುಳಸಿ ಸಸ್ಯಕ್ಕೆ ಅನ್ವಯಿಸಲಾಗುತ್ತದೆ, ಅದಕ್ಕೆ ಮೂಗುತಿ ಮತ್ತು ಹಣೆಗೆ ಸಿಂಧೂರವನ್ನೂ ಹಚ್ಚಲಾಗುತ್ತದೆ.

​ತುಳಸಿ ವಿವಾಹಕ್ಕಾಗಿ ವರ

ತುಳಸಿಯ ವಿವಾಹಕ್ಕಾಗಿ ವರನನ್ನು ಕಂಚಿನ ವಿಗ್ರಹವಾಗಿ ಅಥವಾ ವಿಷ್ಣುವಿನ ಚಿತ್ರವನ್ನು ಚಿತ್ರಿಸಲಾಗುತ್ತದೆ. ಕೆಲವೊಮ್ಮೆ ಭಗವಾನ್ ವಿಷ್ಣುವನ್ನು ಸಂಕೇತಿಸುವ 'ಸಾಲಿಗ್ರಾಮ ಕಲ್ಲ'ನ್ನು ಕೂಡ ಪೂಜೆಗೆ ಬಳಸಲ್ಪಡುತ್ತದೆ. ನಂತರ ಶ್ರೀಕೃಷ್ಣ ಅಥವಾ ವಿಷ್ಣುವಿನ ಚಿತ್ರವನ್ನು ಧೋತಿಯಲ್ಲಿ ಮುಚ್ಚಲಾಗುತ್ತದೆ.

​ಭೋಗ

ಈ ಭವ್ಯವಾದ ಸಂದರ್ಭದಲ್ಲಿ ವಿಶೇಷ ಸಸ್ಯಾಹಾರಿ ಭೋಜನವನ್ನು ತಯಾರಿಸಲಾಗುತ್ತದೆ. ಹೆಚ್ಚಿನ ಮನೆಗಳಲ್ಲಿ ಅಕ್ಕಿ ಮತ್ತು ಉದ್ದಿನಬೇಳೆ, ಕೆಂಪು ಕುಂಬಳಕಾಯಿ ಕರಿ ಮತ್ತು ರುಚಿಕರವಾದ ಸಿಹಿ ಗೆಣಸು ಖೀರು ತಯಾರಿಸಲಾಗುತ್ತದೆ. ಮದುವೆಯ ವಿಧಿವಿಧಾನಗಳು ಮುಗಿದ ನಂತರ, ಸಿದ್ಧಪಡಿಸಿದ ಆಹಾರವನ್ನು 'ಭೋಗ' ನೈವೇದ್ಯಕ್ಕಾಗಿ ಮೀಸಲಿಡಲಾಗುತ್ತದೆ. ಇದರೊಂದಿಗೆ ಪೂಜೆಯ ನಂತರ ತುಳಸಿಗೆ ಆರತಿ ಮಾಡಲಾಗುತ್ತದೆ. ಆರತಿ ಮುಗಿದ ನಂತರ, ಬೇಯಿಸಿದ ಆಹಾರವನ್ನು ಹಣ್ಣುಗಳೊಂದಿಗೆ 'ಭೋಗ' ಎಂದು ನೀಡಲಾಗುತ್ತದೆ. ನಂತರ ಕುಟುಂಬ ಸದಸ್ಯರು ಮತ್ತು ಇತರ ಅತಿಥಿಗಳೊಂದಿಗೆ ಪ್ರಸಾದವನ್ನು ಸೇವಿಸಲಾಗುತ್ತದೆ.

​ತುಳಸಿ ವಿವಾಹಕ್ಕೂ ಮುನ್ನ ಅಭಿಷೇಕ

ನಿಜವಾದ ಸಮಾರಂಭವು ಸಂಜೆ ಪ್ರಾರಂಭವಾಗುತ್ತದೆ. ಮದುವೆ ಸಮಾರಂಭದ ಅಂಗವಾಗಿ, ಮದುವೆಗೆ ಮೊದಲು ವರ ಮತ್ತು ತುಳಸಿ ಇಬ್ಬರಿಗೂ ಅಭಿಷೇಕ ಮಾಡಿ ಹೂವಿನಿಂದ ಅಲಂಕರಿಸಲಾಗುತ್ತದೆ. ಸಮಾರಂಭದಲ್ಲಿ ದಂಪತಿಗಳನ್ನು ಒಟ್ಟಿಗೆ ಕಟ್ಟಲು ಹಳದಿ ದಾರವನ್ನು ಬಳಸಲಾಗುತ್ತದೆ.

​ಮಹಿಳೆಯರಿಂದ ಪೂಜೆ

ತುಳಸಿ ವಿವಾಹ ಸಮಾರಂಭವನ್ನು ಪುರೋಹಿತರು ನಡೆಸಬಹುದು ಅಥವಾ ಮನೆಯ ಮಹಿಳೆಯರು ಸಾಮೂಹಿಕವಾಗಿ ಪೂಜೆಯನ್ನು ಮಾಡಬಹುದು. ಈ ಆಚರಣೆಯನ್ನು ಎಲ್ಲಾ ವಯೋಮಾನದ ಮಹಿಳೆಯರು ನಡೆಸಬಹುದು, ಆದರೆ ವಿಧವೆಯರಿಗೆ ಮಾತ್ರ ತುಳಸಿ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಅವಕಾಶವಿಲ್ಲ. ಮದುವೆ ಸಮಾರಂಭದಲ್ಲಿ ಎಲ್ಲರೂ ಮೈಮರೆಯುತ್ತಾರೆ. ಮದುವೆಯ ವಿಧಿವಿಧಾನಗಳು ಮುಗಿದ ನಂತರ, ಭಕ್ತರು ನವದಂಪತಿಗಳ ಮೇಲೆ ಸಿಂಧೂರ ಮತ್ತು ಅಕ್ಷತೆಯನ್ನು ಹಾಕುತ್ತಾರೆ.

​ಭಜನೆ ಮಾಡಿ

ತುಳಸಿ ವಿವಾಹದಲ್ಲಿ ಪಾಲ್ಗೊಂಡ ಎಲ್ಲಾ ವ್ಯಕ್ತಿಯು ತುಳಸಿ ಎಲೆಯನ್ನು ಸಹ ತಿನ್ನಬೇಕು, ಇದು ಭಕ್ತನ ದೇಹಕ್ಕೆ ತುಳಸಿ ದೇವಿಯ ಪ್ರವೇಶವನ್ನು ಸೂಚಿಸುತ್ತದೆ. ನಂತರ ಎಲ್ಲರಿಗೂ ಸಿಹಿತಿಂಡಿ ರೂಪದಲ್ಲಿ ಪ್ರಸಾದ ವಿತರಿಸಲಾಗುತ್ತದೆ. ಹಗಲು ರಾತ್ರಿ ಭಜನೆಗಳನ್ನು ಹಾಡಲಾಗುತ್ತದೆ ಮತ್ತು ಸಮಾರಂಭ ಮುಗಿದ ನಂತರ ವಿಷ್ಣುವು ತನ್ನ ವಧು ತುಳಸಿಯೊಂದಿಗೆ ಮನೆಗೆ ಹಿಂದಿರುಗುತ್ತಾನೆ. ಆದ್ದರಿಂದ ಇದು ತುಂಬಾ ಮಂಗಳಕರವಾಗಿದೆ.

​ಕನ್ಯಾದಾನದ ಫಲ

ಸಾಮಾನ್ಯವಾಗಿ ತುಳಸಿ ವಿವಾಹದ ವೆಚ್ಚವನ್ನು ಹೆಣ್ಣುಮಕ್ಕಳಿಲ್ಲದ ದಂಪತಿಗಳು ಭರಿಸುತ್ತಾರೆ. ಅವರು ತುಳಸಿಯ ಪೋಷಕರಂತೆ ವರ್ತಿಸುತ್ತಾರೆ ಮತ್ತು ತಮ್ಮ ಮಗಳು ತುಳಸಿಯನ್ನು ಭಗವಾನ್ ವಿಷ್ಣುವಿಗೆ ಅರ್ಪಿಸುವ ಸಮಾರಂಭವಾದ 'ಕನ್ಯಾದಾನ'ವನ್ನು ಮಾಡುತ್ತಾರೆ. ತುಳಸಿ ವಿವಾಹ ಸಮಾರಂಭದಲ್ಲಿ, ವಧುವಿನ ಎಲ್ಲಾ ಕಾಣಿಕೆಗಳನ್ನು ಬ್ರಾಹ್ಮಣ ಪುರೋಹಿತರಿಗೆ ನೀಡಲಾಗುತ್ತದೆ. ಯಾವುದೇ ಹಿಂದೂ ವಿವಾಹ ಸಮಾರಂಭದಂತೆ, ತುಳಸಿ ವಿವಾಹವನ್ನು ಸಹ ಪೂರ್ಣ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಮಂಗಳಕರ ವಿವಾಹವನ್ನು ಮಾಡುವ ಮೂಲಕ, ಮಹಿಳೆಯರು ತಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತನ್ನು ಪಡೆದುಕೊಳ್ಳುತ್ತಾರೆ.
***

ತುಳಸಿ ಪೂಜೆ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ, ಮಂತ್ರ, ಪ್ರಯೋಜನ, ಕಥೆ..!

ಹಿಂದೂ ಧರ್ಮದಲ್ಲಿ ತುಳಸಿ ವಿವಾಹಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ತುಳಸಿಯನ್ನು ಲಕ್ಷ್ಮೀ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಭಗವಾನ್ ವಿಷ್ಣುವು ತನ್ನ 4 ತಿಂಗಳ ಯೋಗ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಅದರ ನಂತರ ದ್ವಾದಶಿ ತಿಥಿಯಂದು ತುಳಸಿ ವಿವಾಹ ನಡೆಯುತ್ತದೆ. ಈ ದಿನದಂದು ತುಳಸಿ ಮಾತೆಯನ್ನು ಭಗವಾನ್ ವಿಷ್ಣುವಿನ ರೂಪವಾದ ಸಾಲಿಗ್ರಾಮದೊಂದಿಗೆ ವಿವಾಹವಾಗುತ್ತದೆ. ತುಳಸಿ ವಿವಾಹದ ಮುಹೂರ್ತ, ಮಹತ್ವ ಮತ್ತು ಪೂಜಾ ವಿಧಾನದ ಬಗ್ಗೆ ತಿಳಿಯೋಣ.
                                                         ​
ತುಳಸಿ ವಿವಾಹ  ಶುಭ ಮುಹೂರ್ತ 
check


​ತುಳಸಿ ವಿವಾಹದ ಮಹತ್ವ

ಕಾರ್ತಿಕ ಮಾಸದಲ್ಲಿ ತುಳಸಿ ಮತ್ತು ಸಾಲಿಗ್ರಾಮ ದೇವರಿಗೆ ವಿವಾಹ ಮಾಡಿಸುವ ಭಕ್ತರ ಹಿಂದಿನ ಜನ್ಮದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ. ಈ ದಿನ ಮಹಿಳೆಯರು ಸಾಲಿಗ್ರಾಮ ಮತ್ತು ತುಳಸಿಯ ವಿವಾಹವನ್ನು ನೆರವೇರಿಸುತ್ತಾರೆ. ತುಳಸಿಯನ್ನು ವಿಷ್ಣುಪ್ರಿಯಾ ಎಂದೂ ಕರೆಯುತ್ತಾರೆ. ಕಾರ್ತಿಕ ಮಾಸದ ನವಮಿ, ದಶಮಿ ಮತ್ತು ಏಕಾದಶಿಯಂದು ಉಪವಾಸ ಮತ್ತು ಪೂಜೆಯ ಮೂಲಕ ತುಳಸಿ ವಿವಾಹವನ್ನು ಮಾಡಲಾಗುತ್ತದೆ. ಮರುದಿನ ಬ್ರಾಹ್ಮಣರಿಗೆ ತುಳಸಿ ಗಿಡವನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ತುಳಸಿ ವಿವಾಹ ಮಾಡುವವರಿಗೆ ದಾಂಪತ್ಯ ಸುಖ ಸಿಗುತ್ತದೆ ಎಂದು ಹೇಳಲಾಗುತ್ತದೆ.

​ತುಳಸಿ ವಿವಾಹದ ಪೂಜೆ ವಿಧಾನ

- ಈ ದಿನ ಸ್ನಾನದ ನಂತರ ಶುದ್ಧವಾದ ಬಟ್ಟೆಗಳನ್ನು ಧರಿಸಬೇಕು. ಆದರೆ, ಈ ದಿನದಂದು ಪೂಜೆಯ ಸಮಯದಲ್ಲಿ ಕಪ್ಪು ಬಟ್ಟೆಗಳನ್ನು ಧರಿಸಬೇಡಿ.

- ತುಳಸಿ ವಿವಾಹ ಮಾಡುವವರು ಈ ದಿನ ಉಪವಾಸವನ್ನು ಮಾಡಬೇಕು.

- ಈ ದಿನ, ಮಂಗಳಕರ ಸಮಯದಲ್ಲಿ ಅಂಗಳದಲ್ಲಿ ನೆಲದ ಮೇಲೆ ತುಳಸಿ ಗಿಡವನ್ನು ಇರಿಸಿ. ನೀವು ಬಯಸಿದರೆ, ನೀವು ತುಳಸಿ ಮದುವೆಯನ್ನು ತಾರಸಿಯ ಮೇಲೆ ಅಥವಾ ದೇವಸ್ಥಾನದಲ್ಲಿ ಮಾಡಬಹುದು.

- ತುಳಸಿ ಕುಂಡದ ಮಣ್ಣಿನಲ್ಲಿ ಕಬ್ಬನ್ನು ನೆಟ್ಟು ಅದರ ಮೇಲೆ ಕೆಂಪು ಚುನರಿಯಿಂದ ಮಂಟಪವನ್ನು ಅಲಂಕರಿಸಿ.

- ತುಳಸಿ ಪಾತ್ರೆಯಲ್ಲಿ ಸಾಲಿಗ್ರಾಮ ಕಲ್ಲನ್ನು ಇಡಿ.

- ತುಳಸಿ ಮತ್ತು ಸಾಲಿಗ್ರಾಮಕ್ಕೆ ಹಾಲಿನಲ್ಲಿ ನೆನೆಸಿದ ಅರಿಶಿನವನ್ನು ಹಚ್ಚಿರಿ.

- ಕಬ್ಬಿನ ಮಂಟಪದ ಮೇಲೂ ಅರಿಶಿನದ ಲೇಪನವನ್ನು ಹಚ್ಚಿ.

- ಇದರ ನಂತರ, ಪೂಜೆ ಮಾಡುವಾಗ, ಈ ಋತುವಿನಲ್ಲಿ ಬರುವ ನೆಲ್ಲಿಕಾಯಿ, ಸೇಬು ಇತ್ಯಾದಿ ಹಣ್ಣುಗಳನ್ನು ಅರ್ಪಿಸಿ.

- ನಂತರ  ತುಳಸಿ ಮತ್ತು ಸಾಲಿಗ್ರಾಮಕ್ಕೆ ಮಂಗಳಾರತಿ ಮಾಡಿ.

- ಆರತಿ ಮಾಡಿದ ನಂತರ ತುಳಸಿಗೆ 11 ಬಾರಿ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಿ,  ಪ್ರಸಾದ ವಿತರಿಸಿ.

​ತುಳಸಿ ವಿವಾಹದ ಪ್ರಯೋಜನ

- ತುಳಸಿ ವಿವಾಹವನ್ನು ಮಾಡುವುದರಿಂದ ಅನೇಕ ಶುಭ ಫಲಗಳು ಪ್ರಾಪ್ತಿಯಾಗುತ್ತವೆ, ಮಕ್ಕಳ ವಿವಾಹವನ್ನು ದೀರ್ಘಕಾಲದಿಂದ ಮಾಡದಿರುವ ಮನೆಗಳಲ್ಲಿ, ಈ ಮದುವೆಯನ್ನು ಮಾಡುವುದರಿಂದ ವಿವಾಹ ಕಾರ್ಯಗಳು ಪ್ರಾರಂಭವಾಗುತ್ತದೆ.

- ಸಂತಾನ ಬಯಸುತ್ತಿರುವ ದಂಪತಿಗಳು ಈ ಮದುವೆಯಿಂದ ಮಗುವನ್ನು ಪಡೆಯುತ್ತಾರೆ. ಅದರಲ್ಲೂ ಹೆಣ್ಣು ಬೇಕು ಎನ್ನುವವರು ತುಳಸಿ ಮದುವೆ ಮಾಡಿಸಿ.

- ತುಳಸಿ ವಿವಾಹದ ಸಹಾಯದಿಂದ ವ್ಯಕ್ತಿಯ ಜೀವನದ ಎಲ್ಲಾ ದುಃಖಗಳು ಮತ್ತು ನೋವುಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಸಂತೋಷವು ತುಂಬಿರುತ್ತದೆ.

​ತುಳಸಿ ವಿವಾಹ ಅಥವಾ ತುಳಸಿ ಪೂಜೆ ಕಥೆ

ದಂತಕಥೆಯ ಪ್ರಕಾರ, ತುಳಸಿ ದೇವಿಯು ಸ್ತ್ರೀರೂಪದಲ್ಲಿ  ವೃಂದಾ ಆಗಿ ಜನಿಸಿದಳು, ಅವಳು ಜಲಂಧರ ಎಂಬ ದುಷ್ಟ ರಾಜನನ್ನು ಮದುವೆಯಾಗಿದ್ದಳು. ಅವಳು ವಿಷ್ಣುವಿನ ಕಟ್ಟಾ ಭಕ್ತೆಯಾಗಿದ್ದಳು ಮತ್ತು ತನ್ನ ಗಂಡನ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ನಿರಂತರವಾಗಿ ಪ್ರಾರ್ಥಿಸುತ್ತಿದ್ದಳು. ಪರಿಣಾಮವಾಗಿ ಜಲಂಧರನು ಅಜೇಯನಾದನು. ಜಲಂಧರನ ಶಕ್ತಿಯನ್ನು ದುರ್ಬಲಗೊಳಿಸಲು ಶಿವನು ವಿಷ್ಣುವನ್ನು ಕೋರಿದನು.

ಆದ್ದರಿಂದ ವಿಷ್ಣುವು ದುಷ್ಟ ರಾಜ ಜಲಂಧರನ ರೂಪವನ್ನು ತೆಗೆದುಕೊಂಡು ವೃಂದಾಗೆ ದ್ರೋಹ ಬಗೆದನು. ಇದರ ಪರಿಣಾಮವಾಗಿ ಜಲಂಧರನು ಶಕ್ತಿಹೀನನಾದನು ಮತ್ತು ಭಗವಾನ್ ಶಿವನಿಂದ ಕೊಲ್ಲಲ್ಪಟ್ಟನು. ಸತ್ಯವನ್ನು ತಿಳಿದ ವೃಂದಾ ವಿಷ್ಣುವನ್ನು ಶಪಿಸಿದಳು ಮತ್ತು ಅವಳು ಸ್ವತಃ ಸಾಗರದಲ್ಲಿ ಮುಳುಗಿ ಪ್ರಾಣವನ್ನು ತ್ಯಜಿಸಿದಳು. ವಿಷ್ಣು ಮತ್ತು ಇತರ ದೇವತೆಗಳು ಅವಳ ಆತ್ಮವನ್ನು ಸಸ್ಯದಲ್ಲಿ ಇರಿಸಿದರು, ಅದು ನಂತರ ತುಳಸಿ ಎಂದು ಕರೆಯಲ್ಪಟ್ಟಿತು. ಅಲ್ಲದೆ, ಭಗವಾನ್ ವಿಷ್ಣುವು ಮುಂದಿನ ಜನ್ಮದಲ್ಲಿ ಪ್ರಬೋಧಿನಿ ಏಕಾದಶಿಯಂದು ಸಾಲಿಗ್ರಾಮ ರೂಪದಲ್ಲಿ ತುಳಸಿಯನ್ನು ವಿವಾಹವಾದನು ಎನ್ನಲಾಗುತ್ತದೆ. ಈ ದಿನ ತುಳಸಿ ವಿವಾಹವನ್ನು ವಿಜೃಂಭಣೆಯಿಂದ ಆಚರಿಸಲು ಇದು ಒಂದು ಕಾರಣವಾಗಿದೆ.
***



read more here

deepavali fest     DEEPAVALI
karteeka maasa          KARTEEKA MASA
uttan dwadashi or tulasi fest        TULASI FEST
bali padyami    BALI PADYAMI

dhatri havana             DHATRI HAVANA
*
read more here-->   ತುಳಸೀ TULASI 







No comments:

Post a Comment